ಮಳೆ ಗಾಳಿ ರಭಸಕ್ಕೆ ಬಾಲಕಿ ಬಲಿ

KannadaprabhaNewsNetwork |  
Published : Apr 13, 2025, 02:05 AM ISTUpdated : Apr 13, 2025, 02:06 AM IST
ಜೇವರ್ಗಿ : ಮೃತ ಬಾಲಕಿಯ ಭಾವಚಿತ್ರ ಅಂಟಿಸಲಾಗಿದೆ ಬಳಸಲು ಮನವಿ. | Kannada Prabha

ಸಾರಾಂಶ

Girl dies due to heavy rain and wind

ಜೇವರ್ಗಿ: ತಾಲೂಕಿನ ಮದಬಾಳ ಕೆ. ಗ್ರಾಮದ ಬಾಲಕಿಯೋರ್ವಳು ಮಳೆಗಾಳಿ ರಭಸಕ್ಕೆ ಆಯತಪ್ಪಿ ಮೇಲ್ಚಾವಣಿಯಿಂದ ಕುಸಿದು ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಕಳೆದ 8ರಂದು ಮಳೆ ಹಾಗೂ ಗಾಳಿ ರಭಸ ಹೆಚ್ಚಾಗಿದ್ದರಿಂದ ಮನೆಯ ಮೇಲ್ಚಾವಣಿ ಮೇಲಿದ್ದ 8ವರ್ಷದ ಬಾಲಕಿ ಪ್ರಿಯದರ್ಶಿನಿ ತಂದೆ ನಿಂಗಪ್ಪ ಗಾಳಿಯ ರಭಸಕ್ಕೆ ಆಯತಪ್ಪಿ ಮೇಲ್ಛಾವಣಿಯಿಂದ ಕುಸಿದು ಬಿದ್ದಿದಾಳೆ. ಪ್ರಜ್ಞಾಹೀನ ಸ್ಥಿತಿಯಲಿದ್ದ ಬಾಲಕಿಯನ್ನು ಕಲಬುರಗಿಯ ಸರ್ಕಾರಿ ಸಾರ್ವ ಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕಳೆದ 11ರಂದು ನಸುಕಿನ ಜಾವ ಮೃತಪಟ್ಟಿದ್ದಾಳೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-----

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''