ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಘಲಯ, ಭಾರತೀಪುರ ಕ್ರಾಸ್, ಸಂತೇಬಾಚಹಳ್ಳಿ, ಹರಪನಹಳ್ಳಿ ಕ್ರಾಸ್ ಮತ್ತು ಸಾರಂಗಿ ಗ್ರಾಪಂ ಕೇಂದ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.
ನಾನು ಹೊರಗಿನ ಅಭ್ಯರ್ಥಿಯಲ್ಲ. ನಾನು ರೈತನ ಮಗ. ರೈತ ಕುಟುಂಬದಿಂದ ಬಂದಿರುವ ನನಗೆ ಜಿಲ್ಲೆಯ ರೈತರ ಸಮಸ್ಯೆಗಳ ಅರಿವಿದೆ. ನನ್ನ ಸ್ವಂತ ಪರಿಶ್ರಮದಿಂದ ಉದ್ಯಮಿಯಾಗಿದ್ದೇನೆ. ಹಣ ಮಾಡುವ ಅವಶ್ಯಕತೆ ಇಲ್ಲ. ಜಿಲ್ಲೆಯ ಜನರ ಸೇವೆ ಮಾಡುವ ಇಚ್ಚೆಯಿಂದ ರಾಜಕೀಯಕ್ಕೆ ಬಂದಿದ್ದೇನೆ ಎಂದರು.ಜಿಲ್ಲೆಯ ಜನ ನನ್ನ ಜನ ಸೇವೆಗೆ ಒಂದು ಅವಕಾಶ ಮಾಡಿಕೊಟ್ಟರೆ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿ ಮತದಾರರ ಋಣ ತೀರಿಸುತ್ತೇನೆ. ಜಿಲ್ಲೆಯ ಜನರ ಗೌರವಕ್ಕೆ ಧಕ್ಕೆ ಬಾರದ ರೀತಿ ಜಿಲ್ಲೆಯ ಜನರ ಧ್ವನಿಯಾಗಿ ನಿಲ್ಲುತ್ತೇನೆ ಎಂದು ಮನವಿ ಮಾಡಿದರು.
ಈ ವೇಳೆ ಮಹಡಿ ಮಂಜಣ್ಣ, ಮಾಳಗೂರು ಎಲ್.ಐ.ಸಿ. ಜಗದೀಶ್, ಅಘಲಯ ಗ್ರಾಪಂ ಅಧ್ಯಕ್ಷೆ ವನಿತಾಶಂಕರೇಗೌಡ, ಹಡವನಹಳ್ಳಿ ಗೋಪಾಲ್, ಅಂಗಡಿ ಕುಮಾರ್, ಊಟಿ ವೆಂಕಟೇಶ್, ಗುರುರಾಜ್, ವಿಜಯ್ ಕುಮಾರ್, ಅಣ್ಣೇಗೌಡ, ಎ.ಸಿ.ಶಂಕರೇಗೌಡ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆ.ಬಿ.ಪ್ರತಿಮಾ, ಗೊರವಿ ಕುಮಾರ್, ಹೆತ್ತಗೋನಹಳ್ಳಿ ಸುರೇಶ್, ನಾರಾಯಣಗೌಡ, ಕೃಷ್ಣ, ಅಘಲಯ ಜಗನ್ನಾಥ್, ಪ್ರಭಾಕರ್, ಶಿವರಾಂ, ದಿನೇಶ್, ನಾಗರಘಟ್ಟ ಲವಕುಮಾರ್, ಹಲಗೆಹೊಸಹಳ್ಳಿ ವೆಂಕಟೇಶ್, ಕೃಷ್ಣಸಿಂಗ್, ರಘು ಸೇರಿದಂತೆ ಹಲವು ಕಾರ್ಯಕರ್ತರು ಇದ್ದರು.