ಕನ್ನಡಪ್ರಭ ವಾರ್ತೆ ಆನವಟ್ಟಿ
ಆನವಟ್ಟಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಜನಪರ ಟ್ರಸ್ಟ್ ಹಾಗೂ ವೀರಶೈವ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 1008 ರೇಣುಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಬಾಲ್ಯದಲ್ಲೇ ಗಂಡು-ಹೆಣ್ಣು ಎನ್ನದೆ, ಲಿಂಗಧಾರಣೆ ಆಗಬೇಕು. ಗುರುಗಳ ಆಶೀರ್ವಾದ, ತತ್ವ ಆದರ್ಶಗಳು ಹಾಗೂ ಉತ್ತಮ ಸಂಸ್ಕಾರವನ್ನು ಪಾಲಕರು ಚಿಕ್ಕ ವಯಸ್ಸಿನಲ್ಲೇ ರೂಢಿಸಬೇಕು. ವೀರಶೈವ ಜಂಗಮ ಸೇರಿ ಲಿಂಗಾಯತ ಒಳಪಂಗಡಗಳು ಸಂಘಟಿತರಾಗಿ, ಪರಸ್ಪರ ಗೌರವಿಸಿಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಮಹೇಶ್ ಜೆ. ಮಠದ ಕೋಟಿಪುರ ಮಾತನಾಡಿ, ಸರ್ಕಾರದ ಸವಲತ್ತು ಪಡೆಯಲು ಜಂಗಮ ಸಮಾಜ ನಿರ್ಮಿಸಿಕೊಂಡಿಲ್ಲ. ಪೂರ್ವಿಕರ ಕಾಲದಿಂದಲ್ಲೂ ಜಂಗಮ ಜನಾಂಗಕ್ಕೆ ವಿಶೇಷ ಸ್ಥಾನವಿದೆ. ಸಮುದಾಯದ ಅಭಿವೃಧಿಗಾಗಿ ಜಂಗಮ ಕ್ಷೇಮಾಭಿವೃಧಿ ಸಂಘ ಮಾಡಿಕೊಂಡಿದ್ದೇವೆ ಎಂದರು.ಪಟ್ಟಣದ ಪ್ರಮುಖ ಬೀದಿಗಳ ಮೂಲಕ ವೀರಶೈವ ಸಮುದಾಯ ಭವನದವರೆಗೂ, ವೀರಗಾಸಿ ಹಾಗೂ ವಿವಿಧ ವಾದ್ಯನೃತ್ಯಗಳೊಂದಿಗೆ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು.
ಸಮಾರಂಭದಲ್ಲಿ ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಜನಪರ ಟ್ರಸ್ಟ್ ಅಧ್ಯಕ್ಷ ವಿಜಯೇಂದ್ರ ಸ್ವಾಮಿ ಎಣ್ಣೆಕೊಪ್ಪ, ಮುಖಂಡರಾದ ಶಿಕಾರಿಪುರದ ಕೆ.ಬಿ ಪ್ರಭುಸ್ವಾಮಿ, ಭಾರಂಗಿ ಬಸಣ್ಣ, ಚೌಟಿ ಚಂದ್ರಶೆಖರ್ ಪಾಟೀಲ್, ಬಾಲಚಂದ್ರಯ್ಯ ತಲಗಡ್ಡೆ, ಶಿವಯೋಗಿ ಶಾಸ್ತ್ರೀ ನೇರಲಗಿ, ಕೆ.ಜಿ ಮೀನಾಕ್ಷಿ , ಚಂದ್ರಕಲಾ ಸತೀಶ್, ಶಿವಯೋಗಿ ಸೊರಬ, ಕೋಟ್ರಯ್ಯ ಸ್ವಾಮಿ, ಪ್ರಭುಕುಮಾರ್ ಇದ್ದರು.----------------