ಕನ್ನಡಪ್ರಭ ವಾರ್ತೆ ಶಿವಮೊಗ್ಗ
2022 ಜುಲೈ 1ರಿಂದ ಜು.31 2024ರ ಅವಧಿಯಲ್ಲಿ ನಾವುಗಳು ನಿವೃತ್ತರಾಗಿದ್ದು, ನಮಗೆ 6ನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ಡಿ.ಸಿ. ಆರ್.ಜಿ. ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯವನ್ನು ನೀಡಿದ್ದು, 7ನೇ ವೇತನ ಆಯೋಗದಲ್ಲಿ ಆರ್ಥಿಕ ಸೌಲಭ್ಯ ಸಿಗದೆ ಅನ್ಯಾಯವಾಗಿದೆ ಎಂದು ಧರಣಿ ನಿರತರು ಆರೋಪಿಸಿದರು.
7ನೇ ವೇತನದ ಆಯೋಗದಲ್ಲಿ ಆಗಿರುವ ಸುಮಾರು 2 ರಿಂದ 22 ಲಕ್ಷ ರು. ನಷ್ಟವುಂಟಾಗಿ ಅನ್ಯಾಯಕ್ಕೆ ಒಳಗಾಗಿರುವ ನಾವುಗಳು ರಾಜ್ಯದ ಕಾರ್ಯಾಂಗದಲ್ಲಿ 7.50 ಲಕ್ಷ ನೌಕರರಲ್ಲಿ 1.50 ಲಕ್ಷಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ 30 ರಿಂದ 40 ವರ್ಷ ಸುದೀರ್ಘ ಸೇವೆ ಸಲ್ಲಿಸಿದ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದರು. ಧರಣಿ ಸತ್ಯಾಗ್ರಹದಲ್ಲಿ ಜಿಲ್ಲಾ ಸಂಚಾಲಕರಾದ ನಾಗಪ್ಪ, ಕೆ.ಕೃಷ್ಣ ಮೂರ್ತಿ, ಅಶೋಕ್ ಎಂ.ಸಜ್ಜನ್, ಎಚ್. ಪರಮೇಶ್ವರಪ್ಪ, ಷಣ್ಮುಖಪ್ಪ, ವಜೀರ್ಅಹಮ್ಮದ್, ಸುರೇಂದ್ರ ಪಾ ಟೀಲ್, ಎಂ.ಎನ್.ಸುರೇಶಪ್ಪ, ಗಜೇಂದ್ರಪ್ಪ ಭಾಗವಹಿಸಿದ್ದರು.