ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಚಿಣ್ಯ ಸರ್ಕಲ್ನಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಜಯಂತ್ಯುತ್ಸವದ ಪ್ರಯುಕ್ತ ಆದಿಚುಂಚನಗಿರಿ ನಾಗಮಂಗಲ ಶಾಖಾ ಮಠದಿಂದ ಗುರುವಾರ ರಾತ್ರಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ನಾವುಗಳೆಲ್ಲಾ ಪ್ರಾಣಿ, ಪಕ್ಷಿಗಳಿಂದ ಪ್ರಮೋಷನ್ ಆಗಿ ಮನುಷ್ಯರಾಗಿದ್ದೇವೆ. ಕೇವಲ ಬದುಕಲು ಅನ್ನ ಸಾಕು. ಆದರೆ, ಮತ್ತೆ ಇಲ್ಲಿಂದ ಪ್ರಮೋಷನ್ ಆಗಬೇಕೆಂದರೆ ಒಳ್ಳೆಯ ವಿಚಾರ ಪಡೆದು ಮನಸ್ಸು ಬೆಳೆಸಬೇಕಿದೆ. ಮನುಷ್ಯ ಜನ್ಮವೇ ಬೇಸರವಾದರೆ ಇನ್ಯಾವ ಜನ್ಮ ಶ್ರೇಷ್ಟವಾಗಲು ಸಾಧ್ಯವಾಗುತ್ತದೆ ಎಂಬುದನ್ನು ಒಮ್ಮೆ ಯೋಚಿಸಿ ಎಂದರು.ಕೆಟ್ಟ ಕೆಲಸ ಮಾಡಿದ ನಂತರ ಪಶ್ಚಾತ್ತಾಪ ಪಡುವ ಬದಲಿಗೆ ಒಳ್ಳೆಯ ಆಲೋಚನೆಗಳಿಂದ ಒಳ್ಳೆಯ ಕೆಲಸ ಮಾಡಬೇಕು. ಕೆಟ್ಟ ಕೆಲಸ ಮಾಡದಂತೆ ಮನಸ್ಸಿಗೆ ಸಂಸ್ಕಾರ ಕೊಡಬೇಕಿದೆ. ನಮ್ಮ ದೇಹ ಚೆನ್ನಾಗಿರಲು ಒಳ್ಳೆಯ ಆಹಾರ ಸೇವಿಸುತ್ತೇವೆ. ಅದರಂತೆ ಮನಸ್ಸು ಚೆನ್ನಾಗಿರಲು ಒಳ್ಳೆಯ ವಿಚಾರ ಕೊಡಬೇಕಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಆದಿಚುಂಚನಗಿರಿ ಕ್ಷೇತ್ರದ ಬೆಳವಣಿಗೆಗೆ ಶ್ರೀಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಕ್ಷೇತ್ರ ಹಾಗೂ ಭಕ್ತರ ನಡುವೆ ಸಂಬಂಧಕ್ಕಾಗಿ ಸತ್ಸಂಗ ಕಾರ್ಯಕ್ರಮ ನಡೆಸುತ್ತಿದ್ದಾರೆ. ರಾಷ್ಟ್ರದ ವಿವಿಧೆಡೆ ಸತ್ಸಂಗ ನಡೆಯುತ್ತಿದೆ. ಹಲವು ಕಡೆಗಳಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಭಾಗಿಯಾಗಿ ಯಶಸ್ವಿಗೊಂಡಿವೆ ಎಂದರು.
ಭಕ್ತರಲ್ಲಿ ನೆಮ್ಮದಿ, ಆಧ್ಯಾತ್ಮಿಕ ಭಾವನೆ ಮೂಡಿಸಲು ಸತ್ಸಂಗ ಕಾರ್ಯಕ್ರಮ ಸಹಕಾರಿಯಾಗಲಿದೆ. ಮೌನ ಎಂಬುದು ಮತ್ತು ಯಾರು ಏನು ಹೇಳುತ್ತಿದ್ದಾರೆ ಎಂದು ಕೇಳುವ ತಾಳ್ಮೆ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಇದು ಎಲ್ಲರಿಗೂ ಅಗತ್ಯವಾಗಿದ್ದು ಅಂತಹ ಜ್ಞಾನವನ್ನು ದೇವರು ಕೊಡಲಿ ಎಂದರು.
ಸತ್ಸಂಗ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚಿಣ್ಯ ಗ್ರಾಮಕ್ಕೆ ಆಗಮಿಸಿದ ಶ್ರೀಗಳನ್ನು ಬೆಳ್ಳಿ ಮಾದರಿಯ ಸಾರೋಟಿನಲ್ಲಿ ಕೂರಿಸಿ ಪೂಜಾ ಕುಣಿತ, ಮಂಗಳವಾದ್ಯ, ಜಾನಪದ ಕಲಾತಂಡ ಸೇರಿದಂತೆ ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀಗಳನ್ನು ಬರಮಾಡಿಕೊಂಡ ಗ್ರಾಮಸ್ಥರು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತಂದರು.