ಗೋಕರ್ಣ: ವಾಹನ ದಟ್ಟಣೆ ಸಂಚಾರಕ್ಕೆ ತೊಡಕು

KannadaprabhaNewsNetwork |  
Published : Oct 06, 2025, 01:01 AM IST
ಗಂಜೀಗದ್ದೆಯಲ್ಲಿ ರಸ್ತೆಯಲ್ಲಿ ವಾಹನ ಇಟ್ಟು ವಹಿವಾಟಿನಲ್ಲಿ ತೊಡಗಿರುವುದು | Kannada Prabha

ಸಾರಾಂಶ

ಕಳೆದ ಎರಡು ದಿನಗಳಿಂದ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದು, ಎಲ್ಲೆಡೆ ವಾಹನ ದಟ್ಟಣೆ ಉಂಟಾಗುತ್ತಿದೆ.

ಕನ್ನಡಪ್ರಭ ವಾರ್ತೆ ಗೋಕರ್ಣ

ಕಳೆದ ಎರಡು ದಿನಗಳಿಂದ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದು, ಎಲ್ಲೆಡೆ ವಾಹನ ದಟ್ಟಣೆ ಉಂಟಾಗುತ್ತಿದೆ.

ಪ್ರವಾಸಿಗರಿಗೆ ವಾಹನ ನಿಲುಗಡೆ, ಏಕಮುಖ ಸಂಚಾರ ವ್ಯವಸ್ಥೆಯ ಸರಿಯಾದ ಮಾಹಿತಿ ನೀಡಿದರೆ ಸುಗಮ ಸಂಚಾರಕ್ಕೆ ಅನುವುವಾಗುತ್ತದೆ, ಆದರೆ ಈ ರೀತಿ ಮಾಹಿತಿ ಫಲಕವನ್ನ ಹಾಕದೆ ಬಿಟ್ಟಿರುವುದು ಒಂದು ಕಡೆಯಾದರೆ, ಇನ್ನೊಂದೆಡೆ ಸ್ಥಳೀಯರೆ ರಸ್ತೆಯಲ್ಲಿ ವಾಹನ ನಿಲ್ಲಿಸುವುದು, ತೆಗೆಯುವಂತೆ ಹೇಳಿದರೆ ವಾದಕ್ಕಿಳಿಯುತ್ತಿದ್ದು, ಇದರಿಂದ ಟ್ರಾಫಿಕ್ ಸಮಸ್ಯೆ ಪ್ರವಾಸಿ ತಾಣದಲ್ಲಿ ಬಿಗಡಾಯಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಏನು ಮಾಡಬಹುದು?:

ಈಗಾಗಲೇ ವಸತಿ ಗೃಹಗಳ ಕೊಠಡಿ ಸಂಖ್ಯೆ ಎಷ್ಟು, ಅದಕ್ಕೆ ತಕ್ಷಂತ ವಾಹನ ನಿಲುಗಡೆಗೆ ಸ್ಥಳಾವಕಾಶವಿದೆಯೇ ಎಂಬುದನ್ನ ಪರಿಶೀಲನೆ ಮಾಡದೆ ಗ್ರಾಪಂ ಪರವಾನಿಗೆ ನೀಡಿರುವುದು ಬಹುದೊಡ್ಡ ಸಮಸ್ಯೆಯಾಗಿದೆ ಎಂದು ಜನರು ಹೇಳುತ್ತಿದ್ದಾರೆ. ಇದರಂತೆ ವಸತಿಗೆ ಬಂದ ಪ್ರವಾಸಿಗರು ವಾಹನಗಳು ರಸ್ತೆಯಲ್ಲಿ ನಿಲ್ಲಿಸುತ್ತಾರೆ.

ಇಂತಹ ಕಡೆಯಲ್ಲಿ ಹೆಚ್ಚು ಜನರಿದ್ದ ವೇಳೆಯಾದರೂ ನಿಗದಿ ಪಡಿಸಿ ನಿಲುಗಡೆ ಸ್ಥಳದಲ್ಲಿ ವಾಹನ ನಿಲುಗಡೆಗೊಳಿಸಲು ಸೂಚಿಸಬೇಕಿದೆ.

ಇನ್ನೂ ಇಕ್ಕಟ್ಟಾದ ರಸ್ತೆಗಳಲ್ಲಿ ಅಂಗಡಿ ಮುಂಗಟ್ಟುಗಳು ಚರಂಡಿ ಆಕ್ರಮಿಸಿ ರಸ್ತೆಗೆ ಬಂದಿದ್ದು, ಇದನ್ನ ತೆರವು ಮಾಡದೆ ಗ್ರಾಪಂ ನಿರ್ಲಕ್ಷಿಸಿದೆ. ಇದರಿಂದ ರಸ್ತೆ ಮತ್ತು ಕಿರಿದಾಗುತ್ತಾ ಹೋಗಿ ಸಂಚಾರಕ್ಕೆ ತೊಡಕು ಉಂಟಾಗಿದೆ. ಗಂಜೀಗದೆ ಸೇರಿದಂತೆ ಹಲವು ಕಡೆ ರಸ್ತೆ ವಾಹನ ನಿಲ್ಲಿಸಿ ಅಂಗಡಿಯಲ್ಲಿ ವ್ಯಾಪರ ನಡೆಸುವುದು, ಏಕಮುಖ ಸಂಚಾರ ನಿಯಮ ಮೀರಿ ಸ್ಥಳೀಯರು ತೆರಳುತ್ತಿದ್ದು, ಈ ಬಗ್ಗೆ ಸಹ ಕ್ರಮ ಕೈಗೊಳ್ಳಬೇಕಿದೆ.

ಉಳಿದೆಡೆ ಅಯೋಮಯ:

ದುಬ್ಬನಶಸಿ, ಭಾವಿಕೊಡ್ಲ, ಗಂಗಾವಳಿಗೆ ತೆರಳುವ ಮಾರ್ಗದಲ್ಲಿ ಸಾಕಷ್ಟು ಪ್ರವಾಸಿ ವಾಹನಗಳು ತೆರಳುತ್ತಿದ್ದು, ಇಕ್ಕಟ್ಟಾದ ರಸ್ತೆಯಲ್ಲಿ ವಾಹನ ಸಂಚಾರ ಬಿಕ್ಕಟ್ಟಾಗಿದೆ. ಇದರಂತೆ ಓಂ ಕಡಲತೀರಕ್ಕೆ ಸಾಗುವ ಮಾರ್ಗದಲ್ಲಿ ವಾಹನ ದಟ್ಟಣೆಯ ಜೊತೆ ಕಡಲತೀರದ ವಾಹನಗಳು ಭರ್ತಿಯಾಗಿದ್ದು, ನಿಲಗುಡೆಗೂ ಜಾಗವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಸ್ಥಳೀಯರ ಸಹಕಾರ ಅಗತ್ಯ:

ಇಲ್ಲಿಂದ ಬೇರೆಡೆಗೆ ಪೊಲೀಸ್ ಸಿಬ್ಬಂದಿ ವಿವಿಧ ವಿಶೇಷ ಸಂದರ್ಭದಲ್ಲಿ ಬಂದೋಬಸ್ತಿಗೆ ಕಳುಹಿಸಿದಂತೆ ಗೋಕರ್ಣಕ್ಕೆ ಅಧಿಕ ಸಂಖ್ಯೆಯಲ್ಲಿ ಜನರು ಬರುವ ವೇಳೆ ಹೊರಗಡೆಯ ಸಿಬ್ಬಂದಿಗಳನ್ನ ನಿಯೋಜಿಸಬೇಕು ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೇ ಸಂಚಾರ ನಿಯಮ ಹಾಗೂ ವಾಹನ ನಿಲುಗಡೆಯ ಕುರಿತು ಸ್ಥಳೀಯರ ಸಹಕಾರ ಅಗತ್ಯವಿದೆ.

PREV

Recommended Stories

5 ವರ್ಷ ಸಿಎಂ ಎಂದೇ ಸಿದ್ದುಗೆ ಮತ ಹಾಕಿದ್ದೇವೆ : ರಾಯರಡ್ಡಿ
ಹಸು ಕೊಂದಿದ್ದಕ್ಕೆ ಎಂ.ಎಂ.ಹಿಲ್ಸ್‌ ಹುಲಿಯ ಹತ್ಯೆಗೈದು ಪ್ರತೀಕಾರ!