ಕೊಪ್ಪಳ: ಕಳ್ಳರ ಹೆಡೆಮುಡಿ ಕಟ್ಟಲು ಶುರು ಮಾಡಿದ ಕೊಪ್ಪಳ ಪೊಲೀಸರು ಸಾಲುಸಾಲು ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ, ನಗದು, ಚಿನ್ನಾಭರಣ ವಶಪಡಿಸಿಕೊಳ್ಳುತ್ತಿದ್ದಾರೆ.
ಚಾಲಾಕಿ ಕಳ್ಳರು: ಕಳ್ಳತನ ಮಾಡಿದ ಬಂಗಾರವನ್ನು ಬ್ಯಾಂಕಿನಲ್ಲಿ ಅಡವಿಟ್ಟಿದ್ದರು. ಇದರ ಜಾಡು ಹಿಡಿದ ಪೊಲೀಸರು ತಾಂತ್ರಿಕ ಸಹಾಯದಿಂದ ಆರೋಪಿಗಳ ಹೆಡೆಮುಡಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿರುವ ತಂಡದಲ್ಲಿದ್ದ ಪೊಲೀಸರಿಗೆ ತಲಾ ₹20 ಸಾವಿರ ನಗದು ಪುರಸ್ಕಾರವನ್ನು ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ ಘೋಷಣೆ ಮಾಡಿದ್ದಾರೆ.ಪ್ರಕರಣವನ್ನು ಭೇದಿಸಿದ ತಂಡದಲ್ಲಿ ಗ್ರಾಮೀಣ ಪಿಐ ಮಹಾಂತೇಶ ಸಜ್ಜನ, ಪಿಎಸ್ಐಗಳಾದ ನಾಗಪ್ಪ, ಅಶೋಕ ಬೇವೂರು, ಸುನಿಲ್ ಎಚ್.ಮೀನಾಕ್ಷಿ, ಎಎಸ್ಐ ನೀಲಕಂಠಪ್ಪ, ಶಶಿಕಾಂತ ರಾಠೋಡ ಇದ್ದಾರೆ.ಜಿಲ್ಲೆಯಲ್ಲಿ ಆಗಿದ್ದ ಕಳ್ಳತನ ಪ್ರಕರಣವನ್ನು ನಮ್ಮ ತಂಡ ಜಾಲಾಡುತ್ತಿದ್ದು, ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಕಳ್ಳತನವಾಗಿದ್ದ ಬಂಗಾರ, ನಗದು ಹಾಗೂ ವಸ್ತುಗಳನ್ನು ಸಹ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಯಶೋದಾ ವಂಟಿಗೋಡಿ ತಿಳಿಸಿದ್ದಾರೆ.