ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಯೋಗಾಸನ ಸ್ಪರ್ಧೆಗೆ ಭಾಗವಹಿಸಲು ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಯುವಕನಿಗೆ ಧನ ಸಹಾಯದ ಜೊತೆಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಹಕಾರ ನೀಡಿದ್ದರು. ಯೋಗಾಸನದಲ್ಲಿ ಸಾಧನೆ ಮಾಡಿರುವ ಯುವಕ ಸುದರ್ಶನ ಗುರವ ಅವರಿಗೆ ಶಂಭು ಕಲ್ಲೋಳಿಕರ ಸನ್ಮಾನಿಸಿ, ಗೌರವಿಸಿದರು. ಧುರೀಣ ಅಪ್ಪಾಸಾಹೇಬ ಬ್ಯಾಳಿ, ರಾಘವೇಂದ್ರ ಸನದಿ, ದಯಾನಂದ ಕಾಂಬಳೆ, ರಾಮ ಮುಗಳಿ, ಕೃಷ್ಣ ಗುರವ, ನಾಗರಾಜ ಪಡಿ ಇದ್ದರು.ಭವ್ಯ ಭಾರತದ ಶಕ್ತಿಯಾಗಿರುವ ಯುವಕರು ಹೆಚ್ಚು ಹೆಚ್ಚಾಗಿ ಕ್ರೀಡೆಯಲ್ಲಿ ಸಾಧನೆ ಮಾಡಿ ದೇಶದ ಕೀರ್ತಿ ಹೆಚ್ಚಿಸಬೇಕು. ಪ್ರತಿಭೆಯಿರುವ ಯುವಕರನ್ನು ಗುರ್ತಿಸಿ ಅವರಿಗೆ ಸಹಕಾರ ನೀಡಲಾಗುತ್ತದೆ.
-ಶಂಭು ಕಲ್ಲೋಳಿಕರ, ನಿವೃತ್ತ ಐಎಎಸ್ ಅಧಿಕಾರಿ.