ಹಳಿಯಾಳದ ತಗಡ ಬಿರಿಯಾನಿ ರೆಸ್ಟೋರೆಂಟಲ್ಲಿ ಗೋಲ್ಮಾಲ್

KannadaprabhaNewsNetwork |  
Published : Jun 05, 2025, 01:12 AM IST
4ಎಚ್.ಎಲ್.ವೈ-5: ಪಟ್ಟಣದ ಯಲ್ಲಾಪುರ ನಾಕೆಯ ಬಳಿಯಿರುವ ನ್ಯೂ ಹೊಟೇಲ್ ಹುಬ್ಬಳ್ಳಿ- ತಗಡ ಬಿರಿಯಾನಿ ಪ್ಯಾಮೇಲಿ ರೆಸ್ಟೋರೆಂಟ್ನಲ್ಲಿ  ಊಟ ಮಾಡಲು ಬಂದ ಗ್ರಾಹಕರು ಆರ್ಡರ ಮಾಡಿದ ಚಿಕನ್ ಬಿರಿಯಾನಿಯಲ್ಲಿ ಚಿಕನ್ ಜೊತೆಯಲ್ಲಿ ಬಿಪ್ ಪಿಸ್ಗಳನ್ನು ಸಹ ಮಿಶ್ರಣ ಮಾಡಿ ಬಡಿಸಲಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ರೊಚ್ಚಿಗೆದ್ದ ರೆಸ್ಟೋರೆಂಟ ಎದುರು ಜಮಾಯಿಸಿದರು. | Kannada Prabha

ಸಾರಾಂಶ

ಘಟನೆಯಲ್ಲಿ ಆಕ್ರೋಶಗೊಂಡ ಗ್ರಾಹಕರು ಬುಧವಾರ ರೆಸ್ಟೋರೆಂಟ್‌ ಎದುರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಳಿಯಾಳ: ಪಟ್ಟಣದ ಯಲ್ಲಾಪುರ ನಾಕೆಯ ಬಳಿ ನ್ಯೂ ಹೊಟೇಲ್ ಹುಬ್ಬಳ್ಳಿ- ತಗಡ ಬಿರಿಯಾನಿ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಊಟ ಮಾಡಲು ಬಂದ ಗ್ರಾಹಕರು ಆರ್ಡರ್‌ ಮಾಡಿದ ಚಿಕನ್ ಬಿರಿಯಾನಿಯಲ್ಲಿ ಚಿಕನ್ ಜತೆ ಬೀಫ್‌ ಪೀಸ್‌ಗಳನ್ನು ಸಹ ಮಿಶ್ರಣ ಮಾಡಿ ಬಡಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಘಟನೆಯಲ್ಲಿ ಆಕ್ರೋಶಗೊಂಡ ಗ್ರಾಹಕರು ಬುಧವಾರ ರೆಸ್ಟೋರೆಂಟ್‌ ಎದುರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಬಡಿಸಿದ ಬಿರಿಯಾನಿಯನ್ನು ಪ್ರಯೋಗಲಾಯಕ್ಕೆ ಕಳುಹಿಸಲಾಗಿದೆ. ಹಳಿಯಾಳ ಪೋಲಿಸರು ರೆಸ್ಟೋರೆಂಟ್ ಮಾಲೀಕನ ವಿಚಾರಣೆ ನಡೆಸಿದ್ದಾರೆ.

ರೆಸ್ಟೋರೆಂಟ್‌ನಲ್ಲಿ ಸಂಜೆ ಹೊತ್ತಿಗೆ ಮೂವರು ಗ್ರಾಹಕರು ಊಟಕ್ಕೆ ಬಂದು ಚಿಕನ್ ಬಿರಿಯಾನಿ ಆರ್ಡರ್‌ ಮಾಡಿದ್ದಾರೆ. ಗ್ರಾಹಕರು ಬಿರಿಯಾನಿ ಸೇವಿಸುವಾಗ ಅವರಿಗೆ ಬೀಫ್‌ ತುಂಡುಗಳು ಕಂಡು ಬಂದಿವೆ ಎಂದು ಆರೋಪಿಸಲಾಗಿದೆ. ಆಕ್ರೋಶಿತ ಗ್ರಾಹಕರು ರೆಸ್ಟೋರೆಂಟ್ ಮಾಲೀಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ರೆಸ್ಟೋರೆಂಟ್ ಎದುರು ಜನಜಂಗುಳಿ ಕೂಡಿತ್ತು.

ಘಟನೆಯ ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಹಳಿಯಾಳ ಪಿಎಸ್ಸೈಗಳಾದ ಬಸವರಾಜ ಮಬನೂರ, ಕೃಷ್ಣ ಅರಕೇರಿ, ಸಿಬ್ಬಂದಿ ತೆರಳಿ ಪರಿಸ್ಥಿತಿ ತಿಳಿಗೊಳಿಸಿದರು.

ರೆಸ್ಟೋರೆಂಟ್‌ ಪರಿಶೀಲಿಸಿದ ಪೊಲೀಸರು ಬಿರಿಯಾನಿ ಕುರಿತು ಆಕ್ಷೇಪಿಸಿದ ಗ್ರಾಹಕರನ್ನು ಮತ್ತು ರೆಸ್ಟೋರೆಂಟ್ ಮಾಲೀಕನ ಬಳಿ ನಡೆದ ಘಟನೆಯ ಮಾಹಿತಿ ಸಂಗ್ರಹಿಸಿದರು. ಗ್ರಾಹಕರಿಗೆ ಬಡಿಸಿದ ಬಿರಿಯಾನಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ರೆಸ್ಟೋರೆಂಟ್ ಮಾಲೀಕ ಮಹಮದ್ ಜುಬೇರ್ ಹಾಗೂ ಗ್ರಾಹಕರನ್ನು ವಿಚಾರಣೆಗೆಂದು ಠಾಣೆಗೆ ಕರೆದುಕೊಂಡು ಹೋಗಲಾಯಿತು. ಘಟನಾ ಸ್ಥಳಕ್ಕೆ ಹಳಿಯಾಳ ಪುರಸಭೆ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಪರಿಸರ ಎಂಜಿನಿಯರ್ ದರ್ಶಿತಾ, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಳಿಂಗ ಸರ್ಪ ರಕ್ಷಣೆ
ಸಂವಿಧಾನ ದಿನಾಚರಣೆ: ವಿವಿಧ ಸ್ಪರ್ಧೆ ಆಯೋಜನೆ