ಜಾಲಿಯಲ್ಲಿ ನೀರು ನೀಡಿ ಜೀವ ಉಳಿಸಿ ಅಭಿಯಾನಕ್ಕೆ ಉತ್ತಮ ಸ್ಪಂದನೆ

KannadaprabhaNewsNetwork |  
Published : Mar 25, 2025, 12:47 AM IST
ಪೊಟೋ ಪೈಲ್ : 24ಬಿಕೆಲ್2 | Kannada Prabha

ಸಾರಾಂಶ

ಜಾಲಿಯ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ವತಿಯಿಂದ ನೀರು ನೀಡಿ-ಜೀವ ಉಳಿಸಿ ಅಭಿಯಾನ ಆರಂಭಿಸಿದೆ.

ಭಟ್ಕಳ: ಜಾಲಿಯ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ವತಿಯಿಂದ ನೀರು ನೀಡಿ-ಜೀವ ಉಳಿಸಿ ಅಭಿಯಾನ ಆರಂಭಿಸಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಸಿಲಿನ ತಾಪ ಎಲ್ಲೆಡೆ ಹೆಚ್ಚಿದೆ. ನೀರನ್ನು ಎಷ್ಟು ಕುಡಿದರೂ ಸಾಲುತ್ತಿಲ್ಲ. ಈ ಸಮಯದಲ್ಲಿ ಅಷ್ಟೊಂದು ಬಾಯಾರಿಕೆ, ಬೇಸಿಗೆಯಲ್ಲಿ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳಿಗೂ ನೀರಿನ ಅವಶ್ಯಕತೆ ತುಂಬ ಇರುತ್ತದೆ. ಇದನ್ನು ಮನಗಂಡ ಫೌಂಡೇಶನ್ "ನೀರು ನೀಡಿ-ಜೀವ ಉಳಿಸಿ " ಅಭಿಯಾನ ಆಯೋಜಿಸಿದೆ. ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರು ಇಡುವ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಪ್ರಾಣಿ-ಪಕ್ಷಿಗಳ ರಕ್ಷಣೆಯ ಕಾರ್ಯದಲ್ಲಿ ಸ್ವಇಚ್ಛೆಯಿಂದ ತೊಡಗಿಕೊಂಡಿರುವವರಿಗೆ ಬಹುಮಾನ ನೀಡಿ ಉತ್ತೇಜಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಬೇಸಿಗೆಯ ಸುಡು ಬಿಸಿಲಿನಲ್ಲಿ ಪ್ರಾಣಿ-ಪಕ್ಷಿಗಳ ನೀರಿನ ದಾಹ ತೀರಿಸಲು ಸಂಘಟಿಸಿರುವ ವಿಶಿಷ್ಟ ಹಾಗೂ ವಿನೂತನವಾಗಿರುವ ಈ ಅಭಿಯಾನದಲ್ಲಿ ಹೆಚ್ಚು ಜನರು ಕೈಜೋಡಿಸುತ್ತಿದ್ದಾರೆ. ಪುಟ್ಟ ಪುಟ್ಟ ಮಕ್ಕಳು ಕೂಡ ಪ್ರಾಣಿ, ಪಕ್ಷಿಗಳ ಕುರಿತು ಕಾಳಜಿ ವಹಿಸುತ್ತಿದ್ದು, ದಿನನಿತ್ಯ ನೀರು ಇಡುವ ಕಾರ್ಯಕ್ಕೆ ಮುಂದಾಗುತ್ತಿರುವುದು ಅಭಿಯಾನದ ಯಶಸ್ಸಿಗೆ ಕಾರಣವಾಗಿದೆ. ಇದೊಂದು ಸಾಮಾಜಿಕ ಅಭಿಯಾನವಾಗಬೇಕು. ತನ್ಮೂಲಕ ಜನತೆ ತೊಡಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಫೌಂಡೇಶನ್ ಬಹುಮಾನ ನೀಡಲಿದೆ. ಅಭಿಯಾನದಲ್ಲಿ ಭಾಗವಹಿಸಿದವರನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಮೂಲಕ ಅಭಿಯಾನದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಲಾಗಿದೆ. ಮೊದಲ ಬಹುಮಾನವಾಗಿ ₹೨೦೦೦, ಎರಡನೇ ಬಹುಮಾನ ₹೧೦೦೦ ಹಾಗೂ ಮೂರನೇ ಬಹುಮಾನ ₹೫೦೦, ಆನಂತರದ ೫ ಜನರಿಗೆ ತಲಾ ₹೧೫೦ರಂತೆ ಬಹುಮಾನ ನೀಡಿ ಉತ್ತೇಜಿಸಲಾಗುತ್ತದೆ.

ಅಭಿಯಾನದಲ್ಲಿ ಭಾಗವಹಿಸುವವರು ಕುಡಿಯಲು ಯೋಗ್ಯವಾದ ಜಾಗದಲ್ಲಿ ತೊಟ್ಟಿಯಲ್ಲಿ ಅಥವಾ ಪಾತ್ರೆಗಳಲ್ಲಿ ತಾಜಾ ನೀರು ತುಂಬಿಸಿ, ಪ್ರಾಣಿ-ಪಕ್ಷಿಗಳಿಗೆ ಜೀವಜಲ ಒದಗಿಸಿ ಅದರ ಪೋಟೋ ತೆಗೆದು ಸಂಪೂರ್ಣ ವಿಳಾಸದೊಂದಿಗೆ ಕಳುಹಿಸಬೇಕು. ಮಾ.೨೯ರಂದು ಫೋಟೋ ಕಳುಹಿಸಲು ಕೊನೆಯ ದಿನವಾಗಿದ್ದು, ಮಾ.೩೦ರ ಯುಗಾದಿಯಂದು ಆಯ್ಕೆಯಾದವರ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಈ ಬಗ್ಗೆ ಫೌಂಡೇಶನ್ ಸದಸ್ಯರನ್ನು ಸಂಪರ್ಕಿಸಬಹುದು ಎಂದೂ ತಿಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ