ಕನ್ನಡಪ್ರಭ ವಾರ್ತೆ ಮಳವಳ್ಳಿ
2024ರ ಫೆಬ್ರವರಿಯಿಂದ ಆಗಸ್ಟ್ ತಿಂಗಳವರೆಗೆ ಮಳವಳ್ಳಿ ಉಪವಿಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಒಟ್ಟು 14 ಕಳವು ಪ್ರಕರಣಗಳಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿ ಸುಮಾರು 44 ಸಾವಿರ ರು. ನಗದು ಸೇರಿದಂತೆ ಮೌಲ್ಯದ 670 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳುವಲ್ಲಿ ಸಾಕಷ್ಟು ಶ್ರಮಿಸಿದ್ದರು.
ಇತ್ತಿಚೇಗೆ ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದ್ದ ಒಂದು ಸರಗಳ್ಳತನ ಪ್ರಕರಣ ಪತ್ತೆ ಮಾಡಿ ಸುಮಾರು 30 ಗ್ರಾಂ ತೂಕದ ಚಿನ್ನದ ಒಡವೆಯನ್ನು ಆರೋಪಿಗಳಿಂದ ವಶಕ್ಕೆ ಪಡೆಯಲು ಯಶಸ್ವಿಯಾಗಿದ್ದರು. ಠಾಣಾ ವ್ಯಾಪ್ತಿಯಲ್ಲಿ ಸುಮಾರು 11 ಜೂಜಾಟದ ಪ್ರಕರಣಗಳನ್ನು ದಾಖಲಿಸಿ ಸುಮಾರು 1 ಲಕ್ಷಕ್ಕೂ ಅಧಿಕ ಮೊತ್ತದ ಹಣ ವಶ ಪಡೆದಿದ್ದರು. ಕಳೆದ ವಾರದ ಹಿಂದೆ ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು. ವಿದ್ಯಾಸಂಸ್ಥೆಯಲ್ಲಿ ಹಲವರಿಗೆ ಸನ್ಮಾನಹಲಗೂರು: ಮದ್ದೂರು ರಸ್ತೆಯ ವಿದ್ಯಾಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಂಸ್ಥೆ ಅಧ್ಯಕ್ಷ ಎಚ್.ಎಂ.ಆನಂದ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.ಈ ವೇಳೆ ಶಾಲೆಗೆ 22,000 ರು ಬೆಲೆ ಬಾಳುವ ಪ್ರೊಜೆಕ್ಟರ್ ನೀಡಿ ಸುರೇಶ್, ಟ್ರ್ಯಾಕ್ ಸೂಟ್ ನೀಡಿದ ಎಸ್ ಮನೋಹರ, ಶ್ರೀನಿವಾಸ್ ,ಭಕ್ತ ವತ್ಸಲ, ಪ್ರವೀಣ ಸಿ., ಶ್ರೀನಿವಾಸಚಾರಿ , ವಿದ್ಯಾರ್ಥಿಗಳಿಗೆ ಟೈ- ಬೆಲ್ಟ್ ಮತ್ತು ಗುರುತಿನ ಚೀಟಿ ಯನ್ನು ನೀಡಿದ ಎಚ್ ಎಸ್ ಕೃಷ್ಣ ,ಮತ್ತು ಸಮವಸ್ತ್ರ ನೀಡಿದ ಎನ್ ಯೋಗೇಶ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಸಂಸ್ಥೆ ನಿರ್ದೇಶಕರು ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.