ಕಲಾವಿದರ ಬದುಕಿಗೆ ಸರ್ಕಾರದ ಸಹಕಾರ ಅವಶ್ಯ

KannadaprabhaNewsNetwork |  
Published : Oct 06, 2025, 01:01 AM IST
ಪೋಟೊ4ಕೆಎಸಟಿ3: ಕುಷ್ಟಗಿ ಪಟ್ಟಣದ ಬಿಜಿಎಸ್ ಪ್ಯಾರಾ ಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜನಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಕಲಾವಿದರಿಗೆ ಕಾರ್ಯಕ್ರಮ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ

ಕುಷ್ಟಗಿ: ದಿನ ಆಧುನಿಕ ದಿನಗಳಲ್ಲಿ ಜಾನಪದ ಕಲಾವಿದರ ಬದುಕು ಕಷ್ಟದಾಯಕವಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಶರಣಪ್ಪ ವಡಗೇರಿ ಹೇಳಿದರು.

ಪಟ್ಟಣದ ಬಿಜಿಎಸ್ ಪ್ಯಾರಾ ಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜ್ ನಲ್ಲಿ ವಿದ್ಯಾ ವಿಕಾಸ ಕನ್ನಡ ಕಲೆ ಸಾಹಿತ್ಯ ಸಾಂಸ್ಕೃತಿಕ ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಯೋಗದೊಂದಿಗೆ ವಿಶೇಷ ಘಟಕ ಯೋಜನೆಯಡಿಯಲ್ಲಿ ಪ್ರಾಯೋಜಿತ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಕಲಾವಿದರಿಗೆ ಕಾರ್ಯಕ್ರಮ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ.ಕಲೆ ನಂಬಿ ಜೀವನ ಮಾಡುವವರಿಗೆ ಆರ್ಥಿಕ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಪುರಸಭೆ ಸದಸ್ಯ ವಸಂತ ಮೇಲಿನಮನಿ, ಬಸವರಾಜ ಬುಡಕುಂಟಿ, ಪತ್ರಕರ್ತ ರವೀಂದ್ರ ಬಾಕಳೆ ಮಾತನಾಡಿದರು. ಕಲಾವಿದ ಚೆನ್ನಪ್ಪ ಬಾವಿಮನಿ ಅವರಿಂದ ಸುಗಮ ಸಂಗೀತ ಜರುಗಿತು. ಹಾರ್ಮೊನಿಯಂ ಸಾಥ್ ಮಲ್ಲನಗೌಡ ಅಗಸಿಮುಂದಿನ, ತಬಲಾ ಶರಣಗೌಡ ಪಾಟೀಲ್ ನೀಡಿದರು.

ಈ ವೇಳೆ ಸಂಘದ ಅಧ್ಯಕ್ಷ ಮೌನೇಶ ಬಡಿಗೇರ, ಕಲಾವಿದ ಶರಣಪ್ಪ ಬನ್ನಿಗೋಳ, ದೊಡ್ಡಪ್ಪ ಕೈಲವಾಡಗಿ, ಅನಿಲ್ ಕಮ್ಮಾರ, ಶರಣಪ್ಪ ಲೈನದ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ.23ಕ್ಕೆ ರೈತರ ದಿನಾಚರಣೆ, ರಾಜ್ಯಮಟ್ಟದ ಸಮಾವೇಶ
ಪ್ರಜಾಸೌಧ ನಿರ್ಮಾಣ ಜಾಗ ಬದಲಾವಣೆಗೆ ಆಗ್ರಹ