ಕನ್ನಡಪ್ರಭ ವಾರ್ತೆ ಮಂಡ್ಯ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿನ ಅಸಮತೋಲನ ಹೋಗಲಾಡಿಸಲು 2013-14ನೇ ಸಾಲಿನಲ್ಲಿ ಎಸ್ಸಿಪಿ/ಟಿಎಸ್ಪಿ ಯೋಜನೆ ಜಾರಿಗೊಳಿಸಿದ್ದರೂ ಯೋಜನೆಯ ನೋಡಲ್ ಅಧಿಕಾರಿಯಾಗಿದ್ದ ಈ. ವೆಂಕಟಯ್ಯ ಅವರ 10-12 ವರ್ಷಗಳ ನಿರ್ಲಕ್ಷ್ಯತೆಯಿಂದಾಗಿ ಯೋಜನೆಗೆ ಮೀಸಲಿರಿಸಿದ್ದ 1005 ಕೋಟಿ ರು.ಅನುದಾನ ಎಸ್ಸಿ, ಎಸ್ಟಿ ಸಮುದಾಯಕ್ಕೆ ಬಳಕೆಯಾಗದೇ ವಾಪಸ್ ಪಡೆದಂತಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸ್ತಿರಾಸ್ತಿ, ಚರಾಸ್ತಿಗಳನ್ನು ಹೊಂದಿರದ ಸಮುದಾಯದ ಜನರ ಸಂಖ್ಯೆ 1.60 ಕೋಟಿ ಇದ್ದು, ನಮಗೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಹಕ್ಕು ಅವಕಾಶಗಳನ್ನು ವಂಚಿಸಲಾಗಿದೆ. ನಮ್ಮ ಸಮುದಾಯದ ಸ್ಥಿತಿ ಶೋಚನೀಯ ಸ್ಥಿತಿ ತಲುಪುತ್ತಿದೆ ಎಂದರು.2024-25 ಸಾಲಿನ ಬಜೆಟ್ನಲ್ಲಿ ಸಮುದಾಯದ ಒಳಿತಿಗಾಗಿ 2ಲಕ್ಷ ಕೋಟಿ ರು. ವಿಶೇಷ ಬಜೆಟ್ ಮಂಡನೆ ಮಾಡಿಸಿ ಸಮಸಮಾಜ, ಸಮಪಾಲು, ಸಮಬಾಳು ಅಡಿಯಲ್ಲಿ ಸಂವಿಧಾನದ ಆಶಯಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.
ಕೋಡಿಮಾರನಹಳ್ಳಿಗೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ
ಕೋಡಿಮಾರನಹಳ್ಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ಲಕ್ಷ್ಮೀದೇವಿ ಸಮುದಾಯ ಭವನವನ್ನು ಉದ್ಘಾಟಿಸಲಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ಎಲ್.ದೇವರಾಜು ತಿಳಿಸಿದರು.
ಗ್ರಾಮದ ಜನರ ಅನುಕೂಲಕ್ಕಾಗಿ ಲಕ್ಷ್ಮೀದೇವಿ ಸಮುದಾಯ ಭವನವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ. ಜೊತೆಗೆ ಗ್ರಾಮದೇವತೆ ಲಕ್ಷ್ಮೀದೇವಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸುವರು ಎಂದರು.