ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದ ಎಪಿಎಂಸಿಯಲ್ಲಿನ ಅವರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಹೃದಯ ಭಾಗದಲ್ಲಿರುವ ತಾಪಂನ ಒಡೆತನದ ಸರ್ಕಾರಿ ಜಾಗವನ್ನು ಸಂಸದ ಗೋವಿಂದ ಕಾರಜೋಳ ಅವರ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ ಅನುಕೂಲವಾಗುವ ಉದ್ದೇಶದಿಂದ ಉಪನೋಂದಣಿ ಕಚೇರಿ ಹಾಗೂ ನಾಡ ಕಚೇರಿ ಕಟ್ಟಡ ನಿರ್ಮಿಸಲು ಸ್ಥಳ ಮೀಸಲಿಟ್ಟಿದ್ದರು ಎಂದರು.
ಆದರೆ ತಾಪಂ ಅಧಿಕಾರಿಗಳು ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಬೇರೆ ಜಿಲ್ಲೆಯವರಿಗೆ ಟೆಂಡರ್ ನೀಡಿದ್ದಾರೆ. ಇದರಿಂದ ಸ್ಥಳೀಯರಿಗೆ ಅನ್ಯಾಯವಾಗಿದ್ದು, ಉದ್ಯೋಗದಿಂದ ವಂಚಿತರಾಗಿದ್ದಾರೆ. ಈ ಟೆಂಡರನ್ನು ರದ್ದು ಮಾಡಿ ಹೊಸ ಟೆಂಡರ್ ಕರೆದು ಸ್ಥಳಿಯರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಮೇಲಧಿಕಾರಿಗಳು ತಾಪಂ ಅಧಿಕಾರಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಹೇಳಿದರು.ವಕೀಲ ಅರುಣ ಮುಧೋಳ ಮಾತನಾಡಿ, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸರಕಾರಿ ಮಳಿಗೆಗೆ ನಿಗದಿಪಡಿಸಿದ ದರಕ್ಕಿಂತಲೂ ಕಡಿಮೆ ಬೆಲೆಗೆ ಟೆಂಡರ್ ಕರೆದು ಸರ್ಕಾರಿ ಅಧಿಕಾರಿಗಳು ಲಕ್ಷಾಂತರ ರೂ. ನಷ್ಟ ಉಂಟುಮಾಡಿದ್ದಾರೆ. ೨೦/೧೦೬ ಅಡಿ ಅಳತೆಯ ಜಮೀನನ್ನು ಕೇವಲ ಪ್ರತಿ ತಿಂಗಳಿಗೆ ₹೫೫೦೦ಕ್ಕೆ ಬಾಡಿಗೆಗೆ ನೀಡಿದ್ದಾರೆ, ಪಟ್ಟಣದಲ್ಲಿ ಇಷ್ಟು ಅಳತೆಯ ಅಂಗಡಿಗೆ ತಿಂಗಳಿಗೆ ಅಂದಾಜು ₹೫೦ ರಿಂದ ₹೬೦ ಸಾವಿರ ಬಾಡಿಗೆ ಹೋಗುತ್ತವೆ ಎಂದರು.
ಈ ವೇಳೆ ಬಿಜೆಪಿ ಮುಖಂಡರಾದ ವಿ.ಎಂ.ತೆಗ್ಗಿ, ಬಿ.ಎಲ್. ಬಬಲಾದಿ, ಯಮನಪ್ಪ ಹೊರಟ್ಟಿ, ಕಾಶಿಲಿಂಗ ಮಾಳಿ, ವಿರೇಶ ಪಂಚಕಟ್ಟಿಮಠ, ಹೋಳಬಸು ಕಾಜಗಾರ, ಗೋಪಾಲಗೌಡ ಪಾಟೀಲ, ರಾಮಣ್ಣ ಖಿಲಾರಿ, ಆನಂದ ಹವಳಖೋಡ, ರಮೇಶ ದೇವರಡ್ಡಿ, ಶಶಿಧರ ಕಂಟೆಪ್ಪಗೋಳ ಇದ್ದರು.