ಮೀನುಗಾರರ ಸಮಸ್ಯೆಗೆ ಸರ್ಕಾರದ ನಿರ್ಲಕ್ಷ್ಯ ಸರಿಯಲ್ಲ: ಆನಂದ ಅಸ್ನೋಟಿಕರ್

KannadaprabhaNewsNetwork | Published : Dec 4, 2024 12:30 AM

ಸಾರಾಂಶ

ಜಿಲ್ಲಾದ್ಯಂತ ಮೀನುಗಾರರು ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದಾರೆ. ಮೀನುಗಾರರಿಗೆ ಸರ್ಕಾರದ ಸೌಲಭ್ಯಗಳು ಕಡಿಮೆಯಾಗುತ್ತಿದೆ. ಮೀನುಗಾರರನ್ನು ಕೃಷಿಕರಂತೆ ಪರಿಗಣಿಸಿ ಅವರಿಗೆ ನೀಡುವ ಸವಲತ್ತು ಮತ್ತು ಸಹಾಯವನ್ನು ನೀಡಬೇಕಿದೆ.

ಕಾರವಾರ: ಜಿಲ್ಲೆಯ ಮೀನುಗಾರರ ಸಮಸ್ಯೆ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸರ್ಕಾರದ ಮುಂದೆ ಹತ್ತಾರು ಸಮಸ್ಯೆಗಳು ಜ್ವಲಂತವಾಗಿದೆ. ನಿರ್ಲಕ್ಷ್ಯ ಸರಿಯಲ್ಲವೆಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ತಿಳಿಸಿದರು.ನಗರದ ಕೋಡಿಭಾಗ ಸಾಗರದರ್ಶನ್ ಸಭಾಭವನದಲ್ಲಿ ಹಮ್ಮಿಕೊಂಡ ಜಿಲ್ಲಾ ಹರಿಕಂತ್ರ ಮಹಾಜನ ಸಂಘದ 19ನೇ ವರ್ಷದ ಪ್ರತಿಭಾ ಪುರಸ್ಕಾರ ಮತ್ತು ಹಿರಿಯರಿಗೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲಾದ್ಯಂತ ಮೀನುಗಾರರು ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದಾರೆ. ಮೀನುಗಾರರಿಗೆ ಸರ್ಕಾರದ ಸೌಲಭ್ಯಗಳು ಕಡಿಮೆಯಾಗುತ್ತಿದೆ. ಮೀನುಗಾರರನ್ನು ಕೃಷಿಕರಂತೆ ಪರಿಗಣಿಸಿ ಅವರಿಗೆ ನೀಡುವ ಸವಲತ್ತು ಮತ್ತು ಸಹಾಯವನ್ನು ನೀಡಬೇಕಿದೆ ಎಂದರು.ಉದ್ಯಮಿ ಎಚ್.ಎಸ್. ಗಜಾನನ ಮಾತನಾಡಿ, ಹರಿಕಂತ್ರ ಸಮಾಜದವರಿಗೆ ಸರ್ಕಾರದ ಯೋಜನೆಗಳ ಸಮರ್ಪಕ ಮಾಹಿತಿ ದೊರೆಯುವಂತೆ ಆಗಬೇಕಿದೆ ಎಂದರು.

ಜಿಲ್ಲಾ ಹರಿಕಂತ್ರ ಮಹಾಜನ ಸಂಘದ ಗೌರವಾಧ್ಯಕ್ಷ ಗಣಪತಿ ಆರ್. ಮಾಂಗ್ರೆ, ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫಡರೇಶನ್ ಅಧ್ಯಕ್ಷ(ಪ್ರಭಾರಿ) ವೆಂಕಟೇಶ ತಾಂಡೇಲ್, ಜಿಲ್ಲಾ ಹರಿಕಂತ್ರ ಮಹಾಜನ ಸಂಘದ ಜಿಲ್ಲಾಧ್ಯಕ್ಷ ಗಣಪತಿ ಡಿ. ಉಳ್ವೇಕರ್ ಮಾತನಾಡಿದರು.

ಸುರೇಶ ಕೆ. ತಾಂಡೇಲ್, ದುಲಿಯಾ ದುರ್ಗೇಕರ್, ದೇವಾನಂದ ಚೆಂಡೇಕರ್, ಗೌರೀಶ ಉಳ್ವೇಕರ್, ಪ್ರಶಾಂತ ತಾಂಡೇಲ್, ಅನಿಲ್ ಹರಿಕಂತ್ರ, ಸಂಪತ್ ಹರಿಕಂತ್ರ, ನಾರಾಯಣ ಖಾರ್ವಿ, ಅಶೋಕ ಮೋಟಾ ಅರ್ಗೇಕರ, ಅಮದಳ್ಳಿ(ಮುದಗಾ) ರವಿ ಡಿ. ಅಂಕೋಲೆಕರ, ಮೇಘಶ್ಯಾಮ ದುರ್ಗೇಕರ, ಕಾರವಾರ ನಗರಸಭೆ ಸದಸ್ಯರಾದ ರಾಜೇಶ ಶಿವು ಮಾಜಾಳಿಕರ, ಸ್ನೇಹಲ್ ಚೇತನ ಹರಿಕಂತ್ರ, ಸುವಿಧಾ ಓಂ ಉಳ್ವೇಕರ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಹರಿಕಂತ್ರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಬಿ. ಹರಿಕಾಂತ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನ್ನಾಡಿದರು.

ಜಿಲ್ಲಾ ಶೈಕ್ಷಣಿಕ ಸಮಿತಿ ಅಧ್ಯಕ್ಷ ಶಿವಾನಂದ ತಾಂಡೇಲ್ ನಿರ್ವಹಿಸಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಸ್ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಸಮಾಜದ ಹಿರಿಯರು ಮತ್ತು ಸಾಧಕರನ್ನು ಗೌರವಿಸಲಾಯಿತು.

ಇಂದು ಉಚಿತ ದಂತ ಚಿಕಿತ್ಸಾ ಶಿಬಿರ

ದಾಂಡೇಲಿ: ರೋಟರಿ ಕ್ಲಬ್ ದಾಂಡೇಲಿ, ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದಂತ ಮಹಾವಿದ್ಯಾಲಯ ಮತ್ತು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಯ ಆಶ್ರಯದಲ್ಲಿ ಉಚಿತ ದಂತ ತಪಾಸಣಾ ಶಿಬಿರವನ್ನು ಡಿ. ೪ರಂದು ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೆ ನಗರದ ರ್ಸಾಜನಿಕ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ರಾಹುಲ್ ಬಾವಾಜಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಶಿಬಿರದಲ್ಲಿ ದಂತ ತಪಾಸಣೆ, ದಂತ ಕ್ಲಿಂನಿಂಗ್‌, ದಂತ ಕೀಳುವುದು, ದಂತ ಫಿಲ್ಲಿಂಗ್ ಮತ್ತು ಔಷಧಿ ನೀಡುವುದು ಉಚಿತವಾಗಿದ್ದು, ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದರು.ರೋಟರಿ ಕ್ಲಬ್ಬಿನ ಸಮುದಾಯ ಸೇವಾ ನಿರ್ದೇಶಕ ಎಸ್. ಪ್ರಕಾಶ ಶೆಟ್ಟಿ ಶಿಬಿರದಲ್ಲಿ ಭಾಗವಹಿಸುವರು. ಶಿಬಿರದ ದಿನ ಬೆಳಗ್ಗೆ ೯ ಗಂಟೆಯಿಂದ ೧೦ ಗಂಟೆಯವರೆಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದರು. ಹಲ್ಲು ಕೀಳಿಸಬೇಕಾದವರು ಬಿಪಿ ಮತ್ತು ಶುಗರ್ ವರದಿಯನ್ನು ತರಬೇಕು ಎಂದು ಡಾ. ಎಸ್.ಎನ್. ದಫೇದಾರ ತಿಳಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಅಶುತೋಷಕುಮಾರ ರಾಯ, ಖಜಾಂಚಿ ಲಿಯೋ ಪಿಟೋ, ರೋಟರಿ ಕ್ಲಬ್‌ನ ಪ್ರಮುಖರಾದ ಎಸ್.ಜಿ. ಬಿರಾದಾರ, ಆರ್.ಪಿ. ನಾಯ್ಕ, ಡಾ. ಅನೂಪ ಮಾಡ್ದೋಳಕರ ಮುಂತಾದವರಿದ್ದರು.

Share this article