ಕನ್ನಡಪ್ರಭ ವಾರ್ತೆ ಹುಲ್ಲಹಳ್ಳಿ
ಗ್ರಾಮದ ನಾಡ ಕಚೇರಿಯಲ್ಲಿ ಆರ್.ಐ ಪ್ರಕಾಶ್ ಅವರಿಗೆ ಮನವಿ ಪತ್ರ ನೀಡಿ ಮಾತನಾಡಿ, ಸರ್ಕಾರವು ನೀಡುವ ಸಂಧ್ಯಾ ಸುರಕ್ಷಾ ಸಹಾಯ ಧನವು ಸುಮಾರು ಸಾವಿರಕ್ಕೂ ಅಧಿಕ ವಯಸ್ಕರಿಗೆ ಒಂದು ವರ್ಷದಿಂದ ಪಿಂಚಣಿ ಸಹಾಯಧನವು ಸಿಗದೇ ಪರದಾಡುತ್ತಿದ್ದಾರೆ, ಇದರ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೂ ತಂದರು ಯಾವುದೇ ಪ್ರಯೋಜನ ಇಲ್ಲ ಎಂದು ದೂರಿದ್ದಾರೆ.
ವಯಸ್ಸಾದವರಿಗೆ ಸರ್ಕಾರದ ಸಂಧ್ಯಾ ಸುರಕ್ಷಾ ಸಹಾಯ ಧನ ತಲುಪಿಸುವಂತಹ ಕೆಲಸ ಮಾಡಬೇಕು, ಇಲ್ಲದಿದ್ದರೆ ಯೋಜನೆಯ ವಂಚಿತರಾಗಿರುವ ವಯಸ್ಕರ ಜೊತೆಗೂಡಿ ಜಯ ಕರ್ನಾಟಕ ಸಂಘಟನೆ ವತಿಯಿಂದ ತಾಲೂಕಿನ ಕಚೇರಿ ಎದುರು ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆಗ್ರಾಮ ಲೆಕ್ಕಾಧಿಕಾರಿಯಾದ ನಿಂಗಯ್ಯ, ಜಯ ಕರ್ನಾಟಕ ಸಂಘಟನೆ ಸದಸ್ಯರಾದ, ಶಂಕರ್, ಮಂಜುನಾಥ್, ಮಹೇಶ್, ಮಂಜ ನಾಗರಾಜು ,ಕೆಂಚ, ಸುರೇಶ, ಮಾಪು, ಪ್ರಕಾಶ್ ಭಾಗವಹಿಸಿದ್ದರು.