ಸಿಎಂ ಕುರ್ಚಿಗೆ ಕಿತ್ತಾಟದಿಂದ ಸರ್ಕಾರ ಪತನ: ಮಾಜಿ ಸಿಎಂ, ಸಂಸದ ಜಗದೀಶ್‌ ಶೆಟ್ಟರ್‌ ಭವಿಷ್ಯ

KannadaprabhaNewsNetwork | Updated : Jan 12 2025, 01:23 PM IST

ಸಾರಾಂಶ

ಡಿ​ಸಿಎಂ ಡಿ.​ಕೆ. ​ಶಿ​ವ​ಕು​ಮಾರ, ಸಿಎಂ ಸಿ​ದ್ದ​ರಾ​ಮಯ್ಯ, ಸ​ಚಿವ ಜಿ.​ ಪ​ರ​ಮೇ​ಶ್ವರ ಸೇ​ರಿ​ದಂತೆ ಅ​ನೇ​ಕರು ಸಿಎಂ ಕುರ್ಚಿಗೆ ಗುದ್ದಾಟ ​ನ​ಡೆ​ಸು​ತ್ತಿ​ದ್ದಾರೆ.ಸಿಎಂ ರೇಸ್‌ನಲ್ಲಿ ಇ​ರು​ವ​ವ​ರಿಂದ ಈಗಾಗಲೇ ಔತಣಕೂಟ ಆರಂಭವಾಗಿದೆ.

ಹುಬ್ಬಳ್ಳಿ:  ಕಾಂಗ್ರೆಸ್‌ನಲ್ಲಿ ಸಿಎಂ ಕು​ರ್ಚಿ​ಗಾಗಿ ನ​ಡೆ​ಯು​ತ್ತಿ​ರುವ ಕಿ​ತ್ತಾ​ಟ​ದಿಂದ ಸ​ರ್ಕಾರ ಪ​ತ​ನ​ವಾ​ಗು​ವುದು ಖ​ಚಿತ ಎಂದು ಮಾಜಿ ಸಿಎಂ, ಸಂಸದ ಜಗದೀಶ್‌ ಶೆಟ್ಟರ್‌ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ​ಸಿಎಂ ಡಿ.​ಕೆ. ​ಶಿ​ವ​ಕು​ಮಾರ, ಸಿಎಂ ಸಿ​ದ್ದ​ರಾ​ಮಯ್ಯ, ಸ​ಚಿವ ಜಿ.​ ಪ​ರ​ಮೇ​ಶ್ವರ ಸೇ​ರಿ​ದಂತೆ ಅ​ನೇ​ಕರು ಸಿಎಂ ಕುರ್ಚಿಗೆ ಗುದ್ದಾಟ ​ನ​ಡೆ​ಸು​ತ್ತಿ​ದ್ದಾರೆ. ಒಂದಲ್ಲ ಒಂದು ದಿನ ಅ​ವರ ಮು​ಸು​ಕಿನ ಗು​ದ್ದಾಟ ಹೊ​ರಗೆ ಬ​ರು​ತ್ತದೆ ಎಂದು ನಾನು ಈ ಹಿಂದೆಯೇ ಹೇ​ಳಿದ್ದೇ ಎಂದ​ರು.

ಸಿಎಂ ರೇಸ್‌ನಲ್ಲಿ ಇ​ರು​ವ​ವ​ರಿಂದ ಈಗಾಗಲೇ ಔತಣಕೂಟ ಆರಂಭವಾಗಿದೆ. ಕೆಲ ಸಚಿವರು ಸೇರಿ ಔತಣಕೂಟ ಮಾಡಿದರು. ಎಸ್ಸಿ, ಎಸ್ಟಿ ಶಾಸಕರು, ಮಂತ್ರಿಗಳ ಔತಣಕೂಟಕ್ಕೆ ​ಕೆ​ಲ​ವರು ಅಡ್ಡಗಾಲು ಹಾಕಿದರು. ಅಡ್ಡಗಾಲು ಹಾಕುವ ಕೆಲಸವನ್ನು ಡಿ.ಕೆ. ಶಿವಕುಮಾರ ಮಾಡು​ತ್ತಿ​ದ್ದಾರೆ. ರಾ​ಜ್ಯ​ದಲ್ಲಿ ಸಿಎಂ ಸಿ​ದ್ದ​ರಾ​ಮಯ್ಯ ಮತ್ತು ಡಿ​ಸಿಎಂ ಡಿ.​ಕೆ. ​ಶಿ​ವ​ಕು​ಮಾರ ಅ​ವರ ಎ​ರಡು ಗುಂಪು​ಗಳು ಎದ್ದು ಕಾ​ಣು​ತ್ತಿವೆ. ಇ​ವು​ಗಳ ಒ​ಳ​ಜ​ಗ​ಳ​ದಿಂದಲೇ ಕಾಂಗ್ರೆಸ್‌ ಸರ್ಕಾರ ಪತನ ಆಗುತ್ತದೆ ಎಂದು ಶೆಟ್ಟರ್‌ ಭವಿಷ್ಯ ನುಡಿದರು.

ಸ​ಚಿವ ಪರಮೇಶ್ವರ ಡಿನ್ನರ್‌ ಮೀಟಿಂಗ್‌ ಬ್ರೇಕ್‌ ಹಾ​ಕು​ವು​ದರ ಹಿಂದೆ ರಾಜಕೀಯ ಅ​ಡ​ಗಿದೆ. ಡಿ​ಸಿಎಂ ಡಿ.ಕೆ. ಶಿವಕುಮಾರಗೆ ತ​ಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಅನಿಸಿದೆ. ಹೀಗಾಗಿ ಅವರು ಶತ್ರು ಸಂಹಾರದ ಪೂಜೆ-ಪುನಸ್ಕಾರ ಆರಂಭಿಸಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಬಯಲಲ್ಲೇ ಗುದ್ದಾಟ ನಡೆಯುತ್ತದೆ ಎಂದ​ರು.

ರಾಜ್ಯ ಬಿ​ಜೆ​ಪಿ​ಯ​ಲ್ಲಿನ ಬಣ ರಾ​ಜ​ಕಾರಣ ಹಾಗೂ ಔ​ತಣಕೂ​ಟದ ಬಗ್ಗೆ ಸು​ದ್ದಿ​ಗಾ​ರರ ಪ್ರ​ಶ್ನೆಗೆ ಪ್ರ​ತಿ​ಕ್ರಿ​ಯಿ​ಸಿದ ಶೆ​ಟ್ಟರ್‌, ನ​ಮ್ಮ​ಲ್ಲಿನ ಸ​ಮ​ಸ್ಯೆ​ಯನ್ನು ಸ​ರಿ​ಪ​ಡಿ​ಸುವ ಕೆ​ಲ​ಸ​ವನ್ನು ಬಿ​ಜೆಪಿ ಹೈ​ಕ​ಮಾಂಡ್‌ ಮಾ​ಡು​ತ್ತದೆ ಎಂದು ಶೆ​ಟ್ಟರ್‌ ಹೇ​ಳಿ​ದ​ರು.

ಶಾ ವಿರುದ್ಧ ಸುಳ್ಳು ಆರೋಪ

ಕಾಂಗ್ರೆಸ್‌ ದೇ​ಶದ ಸಂವಿ​ಧಾನ ಮತ್ತು ಡಾ. ​ಬಾಬಾಸಾ​ಹೇಬ್‌ ಅಂಬೇ​ಡ್ಕರ್‌ ಅ​ವ​ರಿಗೆ ಅ​ಪ​ಮಾನ ಮಾ​ಡುತ್ತಲೆ ಬ​ರು​ತ್ತಿದೆ. ಅಂಬೇ​ಡ್ಕರ್‌ ಅ​ವರ ವಿ​ಚಾ​ರ​ಧಾರೆ, ಮಾ​ರ್ಗ​ದ​ರ್ಶನ ಹಾ​ಗೂ ಸಂವಿ​ಧಾನ ಪಾ​ಲನೆಯನ್ನು ಬಿ​ಜೆಪಿ ಮಾ​ಡಿ​ಕೊಂಡು ಬ​ರು​ತ್ತಿದೆ. ಇದು ದೇ​ಶದ ಜ​ನ​ತೆಗೂ ಗೊ​ತ್ತಿದೆ. ಅಂಬೇ​ಡ್ಕರ್‌ ಬಗ್ಗೆ ಕೇಂದ್ರ ಗೃಹ ಸ​ಚಿವ ಅ​ಮಿತ್‌ ಶಾ ಅ​ವರು ಅ​ವ​ಹೇ​ಳ​ನ​ಕಾರಿ ಹೇ​ಳಿಕೆ ನೀ​ಡಿ​ದ್ದಾರೆ ಎಂದು ಕಾಂಗ್ರೆಸ್‌ ಸು​ಳ್ಳು ಆ​ರೋಪ ಮಾ​ಡು​ತ್ತಿದೆ ಎಂದು ದೂ​ರಿ​ದ​ರು.

Share this article