ಸಿಎಂ ಕುರ್ಚಿಗೆ ಕಿತ್ತಾಟದಿಂದ ಸರ್ಕಾರ ಪತನ: ಮಾಜಿ ಸಿಎಂ, ಸಂಸದ ಜಗದೀಶ್‌ ಶೆಟ್ಟರ್‌ ಭವಿಷ್ಯ

KannadaprabhaNewsNetwork |  
Published : Jan 12, 2025, 01:19 AM ISTUpdated : Jan 12, 2025, 01:23 PM IST
Jagadish shettar

ಸಾರಾಂಶ

ಡಿ​ಸಿಎಂ ಡಿ.​ಕೆ. ​ಶಿ​ವ​ಕು​ಮಾರ, ಸಿಎಂ ಸಿ​ದ್ದ​ರಾ​ಮಯ್ಯ, ಸ​ಚಿವ ಜಿ.​ ಪ​ರ​ಮೇ​ಶ್ವರ ಸೇ​ರಿ​ದಂತೆ ಅ​ನೇ​ಕರು ಸಿಎಂ ಕುರ್ಚಿಗೆ ಗುದ್ದಾಟ ​ನ​ಡೆ​ಸು​ತ್ತಿ​ದ್ದಾರೆ.ಸಿಎಂ ರೇಸ್‌ನಲ್ಲಿ ಇ​ರು​ವ​ವ​ರಿಂದ ಈಗಾಗಲೇ ಔತಣಕೂಟ ಆರಂಭವಾಗಿದೆ.

ಹುಬ್ಬಳ್ಳಿ:  ಕಾಂಗ್ರೆಸ್‌ನಲ್ಲಿ ಸಿಎಂ ಕು​ರ್ಚಿ​ಗಾಗಿ ನ​ಡೆ​ಯು​ತ್ತಿ​ರುವ ಕಿ​ತ್ತಾ​ಟ​ದಿಂದ ಸ​ರ್ಕಾರ ಪ​ತ​ನ​ವಾ​ಗು​ವುದು ಖ​ಚಿತ ಎಂದು ಮಾಜಿ ಸಿಎಂ, ಸಂಸದ ಜಗದೀಶ್‌ ಶೆಟ್ಟರ್‌ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ​ಸಿಎಂ ಡಿ.​ಕೆ. ​ಶಿ​ವ​ಕು​ಮಾರ, ಸಿಎಂ ಸಿ​ದ್ದ​ರಾ​ಮಯ್ಯ, ಸ​ಚಿವ ಜಿ.​ ಪ​ರ​ಮೇ​ಶ್ವರ ಸೇ​ರಿ​ದಂತೆ ಅ​ನೇ​ಕರು ಸಿಎಂ ಕುರ್ಚಿಗೆ ಗುದ್ದಾಟ ​ನ​ಡೆ​ಸು​ತ್ತಿ​ದ್ದಾರೆ. ಒಂದಲ್ಲ ಒಂದು ದಿನ ಅ​ವರ ಮು​ಸು​ಕಿನ ಗು​ದ್ದಾಟ ಹೊ​ರಗೆ ಬ​ರು​ತ್ತದೆ ಎಂದು ನಾನು ಈ ಹಿಂದೆಯೇ ಹೇ​ಳಿದ್ದೇ ಎಂದ​ರು.

ಸಿಎಂ ರೇಸ್‌ನಲ್ಲಿ ಇ​ರು​ವ​ವ​ರಿಂದ ಈಗಾಗಲೇ ಔತಣಕೂಟ ಆರಂಭವಾಗಿದೆ. ಕೆಲ ಸಚಿವರು ಸೇರಿ ಔತಣಕೂಟ ಮಾಡಿದರು. ಎಸ್ಸಿ, ಎಸ್ಟಿ ಶಾಸಕರು, ಮಂತ್ರಿಗಳ ಔತಣಕೂಟಕ್ಕೆ ​ಕೆ​ಲ​ವರು ಅಡ್ಡಗಾಲು ಹಾಕಿದರು. ಅಡ್ಡಗಾಲು ಹಾಕುವ ಕೆಲಸವನ್ನು ಡಿ.ಕೆ. ಶಿವಕುಮಾರ ಮಾಡು​ತ್ತಿ​ದ್ದಾರೆ. ರಾ​ಜ್ಯ​ದಲ್ಲಿ ಸಿಎಂ ಸಿ​ದ್ದ​ರಾ​ಮಯ್ಯ ಮತ್ತು ಡಿ​ಸಿಎಂ ಡಿ.​ಕೆ. ​ಶಿ​ವ​ಕು​ಮಾರ ಅ​ವರ ಎ​ರಡು ಗುಂಪು​ಗಳು ಎದ್ದು ಕಾ​ಣು​ತ್ತಿವೆ. ಇ​ವು​ಗಳ ಒ​ಳ​ಜ​ಗ​ಳ​ದಿಂದಲೇ ಕಾಂಗ್ರೆಸ್‌ ಸರ್ಕಾರ ಪತನ ಆಗುತ್ತದೆ ಎಂದು ಶೆಟ್ಟರ್‌ ಭವಿಷ್ಯ ನುಡಿದರು.

ಸ​ಚಿವ ಪರಮೇಶ್ವರ ಡಿನ್ನರ್‌ ಮೀಟಿಂಗ್‌ ಬ್ರೇಕ್‌ ಹಾ​ಕು​ವು​ದರ ಹಿಂದೆ ರಾಜಕೀಯ ಅ​ಡ​ಗಿದೆ. ಡಿ​ಸಿಎಂ ಡಿ.ಕೆ. ಶಿವಕುಮಾರಗೆ ತ​ಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಅನಿಸಿದೆ. ಹೀಗಾಗಿ ಅವರು ಶತ್ರು ಸಂಹಾರದ ಪೂಜೆ-ಪುನಸ್ಕಾರ ಆರಂಭಿಸಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಬಯಲಲ್ಲೇ ಗುದ್ದಾಟ ನಡೆಯುತ್ತದೆ ಎಂದ​ರು.

ರಾಜ್ಯ ಬಿ​ಜೆ​ಪಿ​ಯ​ಲ್ಲಿನ ಬಣ ರಾ​ಜ​ಕಾರಣ ಹಾಗೂ ಔ​ತಣಕೂ​ಟದ ಬಗ್ಗೆ ಸು​ದ್ದಿ​ಗಾ​ರರ ಪ್ರ​ಶ್ನೆಗೆ ಪ್ರ​ತಿ​ಕ್ರಿ​ಯಿ​ಸಿದ ಶೆ​ಟ್ಟರ್‌, ನ​ಮ್ಮ​ಲ್ಲಿನ ಸ​ಮ​ಸ್ಯೆ​ಯನ್ನು ಸ​ರಿ​ಪ​ಡಿ​ಸುವ ಕೆ​ಲ​ಸ​ವನ್ನು ಬಿ​ಜೆಪಿ ಹೈ​ಕ​ಮಾಂಡ್‌ ಮಾ​ಡು​ತ್ತದೆ ಎಂದು ಶೆ​ಟ್ಟರ್‌ ಹೇ​ಳಿ​ದ​ರು.

ಶಾ ವಿರುದ್ಧ ಸುಳ್ಳು ಆರೋಪ

ಕಾಂಗ್ರೆಸ್‌ ದೇ​ಶದ ಸಂವಿ​ಧಾನ ಮತ್ತು ಡಾ. ​ಬಾಬಾಸಾ​ಹೇಬ್‌ ಅಂಬೇ​ಡ್ಕರ್‌ ಅ​ವ​ರಿಗೆ ಅ​ಪ​ಮಾನ ಮಾ​ಡುತ್ತಲೆ ಬ​ರು​ತ್ತಿದೆ. ಅಂಬೇ​ಡ್ಕರ್‌ ಅ​ವರ ವಿ​ಚಾ​ರ​ಧಾರೆ, ಮಾ​ರ್ಗ​ದ​ರ್ಶನ ಹಾ​ಗೂ ಸಂವಿ​ಧಾನ ಪಾ​ಲನೆಯನ್ನು ಬಿ​ಜೆಪಿ ಮಾ​ಡಿ​ಕೊಂಡು ಬ​ರು​ತ್ತಿದೆ. ಇದು ದೇ​ಶದ ಜ​ನ​ತೆಗೂ ಗೊ​ತ್ತಿದೆ. ಅಂಬೇ​ಡ್ಕರ್‌ ಬಗ್ಗೆ ಕೇಂದ್ರ ಗೃಹ ಸ​ಚಿವ ಅ​ಮಿತ್‌ ಶಾ ಅ​ವರು ಅ​ವ​ಹೇ​ಳ​ನ​ಕಾರಿ ಹೇ​ಳಿಕೆ ನೀ​ಡಿ​ದ್ದಾರೆ ಎಂದು ಕಾಂಗ್ರೆಸ್‌ ಸು​ಳ್ಳು ಆ​ರೋಪ ಮಾ​ಡು​ತ್ತಿದೆ ಎಂದು ದೂ​ರಿ​ದ​ರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!