೭೨ ರಾಸುಗಳ ಮಾಲೀಕರಿಗೆ ೧೬೮.೫ಗ್ರಾಂ ಚಿನ್ನ ಬಹುಮಾನ

KannadaprabhaNewsNetwork |  
Published : Feb 26, 2026, 01:30 AM IST
೨೫ಕೆಎಂಎನ್‌ಡಿ-೨ಪಾಂಡವಪುರ ತಾಲೂಕಿ ಬೇಬಿಬೆಟ್ಟದಲ್ಲಿ ಭಾರಿ ದನಗಳ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ಉತ್ತಮ ರಾಸುಗಳಿಗೆ ಚಿನ್ನದ ನಾಣ್ಯವನ್ನು ಬಹುಮಾನವಾಗಿ ನೀಡಿದ ಅಭಿನಂದಿಸಲಾಯಿತು. | Kannada Prabha

ಸಾರಾಂಶ

ಕಳೆದ ಒಂಬತ್ತು ದಿನಗಳಿಂದ ನಡೆದ ಭಾರೀ ದನಗಳ ಜಾತ್ರಾ ಮಹೋತ್ಸವ ಉತ್ತಮ ರಾಸುಗಳ ಮಾಲೀಕರಿಗೆ ಚಿನ್ನದ ಬಹುಮಾನ ವಿತರಣೆ ಹಾಗೂ ಶ್ರೀ ಮಾದೇಶ್ವರ ಮತ್ತು ಶ್ರೀ ಸಿದ್ಧೇಶ್ವರ ತೆಪ್ಪೋತ್ಸವದೊಂದಿಗೆ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಇತಿಹಾಸ ಪ್ರಸಿದ್ಧ ಬೇಬಿಬೆಟ್ಟದ ದನಗಳ ಜಾತ್ರೆಯಲ್ಲಿ ೭೨ ಉತ್ತಮ ರಾಸುಗಳ ಮಾಲೀಕರಿಗೆ ೧೬೮.೫ ಗ್ರಾಂ ಚಿನ್ನವನ್ನು ಬಹುಮಾನ ರೂಪದಲ್ಲಿ ನೀಡಲಾಯಿತು.

ಜಾತ್ರೆಯಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯ ರಾಸುಗಳು ಭಾಗವಹಿಸಿದ್ದವು. ಈ ಪೈಕಿ ಹೋರಿ, ಕಡಸು, ಎತ್ತುಗಳು ಸೇರಿದಂತೆ ಎಲ್ಲಾ ವಿಭಾಗಗಳಿಂದ ೩೨೧ ರಾಸುಗಳ ಮಾಲೀಕರು ಬಹುಮಾನಕ್ಕಾಗಿ ಹೆಸರು ನೋಂದಾಯಿಸಿದ್ದರು. ಆಯ್ಕೆಯಾದ ರಾಸುಗಳ ಪೈಕಿ ಎತ್ತುಗಳ ವಿಭಾಗಕ್ಕೆ ೩ ಗ್ರಾಂ ಚಿನ್ನದ ನಾಣ್ಯ, ಬೀಜದ ಹೋರಿಗಳ ವಿಭಾಗಕ್ಕೆ ೧.೫ ಗ್ರಾಂ ಚಿನ್ನ ಹಾಗೂ ಕಡಸುಗಳ ವಿಭಾಗಕ್ಕೆ ೨ ಗ್ರಾಂ ಚಿನ್ನದ ನಾಣ್ಯವನ್ನು ಬಹುಮಾನವಾಗಿ ವಿತರಿಸಲಾಯಿತು. ಒಟ್ಟಾರೆ ೭೨ ರಾಸುಗಳ ಮಾಲೀಕರಿಗೆ ೧೬೮.೫ಗ್ರಾಂ ಚಿನ್ನವನ್ನು ಬಹುಮಾನವಾಗಿ ನೀಡಲಾಯಿತು.

ಕಳೆದ ಒಂಬತ್ತು ದಿನಗಳಿಂದ ನಡೆದ ಭಾರೀ ದನಗಳ ಜಾತ್ರಾ ಮಹೋತ್ಸವ ಉತ್ತಮ ರಾಸುಗಳ ಮಾಲೀಕರಿಗೆ ಚಿನ್ನದ ಬಹುಮಾನ ವಿತರಣೆ ಹಾಗೂ ಶ್ರೀ ಮಾದೇಶ್ವರ ಮತ್ತು ಶ್ರೀ ಸಿದ್ಧೇಶ್ವರ ತೆಪ್ಪೋತ್ಸವದೊಂದಿಗೆ ಸಂಪನ್ನಗೊಂಡಿತು.

ಬಹುಮಾನ ವಿಜೇತ ರಾಸುಗಳ ಮಾಲೀಕರ ವಿವರ:

ಬೀಜದ ಹೋರಿಗಳ ವಿಭಾಗ

ಹಾಲು ಹಲ್ಲಿನ ಬೀಜದ ಹೋರಿಗಳು : ಸೋಮೇಗೌಡ, ಕುರುಬಹಳ್ಳಿ ಕೆ.ಆರ್.ಪೇಟೆ. ಹೋರಿ ಸಣ್ಣಮಾದೇಗೌಡ, ಮರಿಗೌಡನಕೊಪ್ಪಲು ಪಿರಿಯಾಪಟ್ಟಣ. ಮಾದವಯ್ಯ, ಅಕ್ಕಿಮರಿಪಾಳ್ಯ ಕುಣಿಗಲ್.

ಎರಡು ಹಲ್ಲಿನ ಬೀಜದ ಹೋರಿಗಳು : ಅನಿಲ್ ಕುಮಾರ್, ಅಂಕನಹಳ್ಳಿ, ಹುಣಸೂರು. ಎಚ್.ಡಿ.ಲೋಕೇಶ್, ದೊಡ್ಡಗಂಗವಾಡಿ, ರಾಮನಗರ. ಹೋರಿ ಶಿವಪ್ಪ, ಹಳ್ಳಿಕೆರೆ, ಹುಣುಸೂರು.

ನಾಲ್ಕು ಹಲ್ಲಿನ ಬೀಜದ ಹೋರಿಗಳು : ಕೃಷ್ಣ, ಮಾರಗೌಡನಹಳ್ಳಿ, ತಿ.ನರಸೀಪುರ. ರಾಜೇಶ, ಹೊಸಮಾವಿನಕೆರೆ, ಕೆ.ಆರ್.ಪೇಟೆ. ಭಾಸ್ಕರ, ಕೆಸ್ತೂರುಕೊಪ್ಪಲು, ಕೆ.ಆರ್.ನಗರ.

ಆರು ಹಲ್ಲಿನ ಬೀಜದ ಹೋರಿಗಳು : ದೇವರಾಜು, ಬ್ಯಾಟರಾಯನಕೊಪ್ಪಲು, ಪಾಂಡವಪುರ. ಕೆ.ಜಿ.ಪ್ರದೀಪ್, ಕುರುಬಹಳ್ಳಿ, ಕೆ.ಆರ್ .ಪೇಟೆ. ನಂಜುಂಡೇಗೌಡ, ಬನ್ನಂಗಾಡಿ, ಪಾಂಡವಪುರ.

ಬಾಯಿಗೂಡಿದ ಬೀಜದ ಹೋರಿಗಳು: ಪ್ರಕಾಶ್, ಮಾವಿನಕೆರೆ, ಕೆ.ಆರ್.ಪೇಟೆ. ಸೋಮೇಗೌಡ, ಕುರುಬಹಳ್ಳಿ, ಕೆ.ಆರ್.ಪೇಟೆ. ಗುಂಡ, ಅಬ್ಬೂರು, ಚನ್ನಪಟ್ಟಣ.

ಜೋಡಿ ಕಡಸುಗಳ ವಿಭಾಗ

ಹಾಲುಹಲ್ಲಿನ ಜೋಡಿ ಕಡಸುಗಳು: ನಾಗರಾಜು, ಬಿ.ಸೀಹಳ್ಳಿ, ತಿ.ನರಸೀಪುರ. ನಿತಿನ್, ಕೋಡಿಯಾಲ, ಸಾಲಿಗ್ರಾಮ. ಹೊನ್ನೇಗೌಡ, ಹನುಮನಾಳು, ತಿ.ನರಸೀಪುರ. ಮಿಲ್ಲಿನ ಜವರೇಗೌಡ, ಬಣ್ಣೇನಹಳ್ಳಿ, ಕೆ.ಆರ್.ಪೇಟೆ. ಮಂಜು, ಡಿಂಕಾಶೆಟ್ಟಹಳ್ಳಿ, ಪಾಂಡವಪುರ.

ಎರಡು ಹಲ್ಲಿನ ಜೋಡಿ ಕಡಸುಗಳು: ಮಂಜು, ಮರಾಠಕೊಪ್ಪಲು, ಕೆ.ಆರ್.ಪೇಟೆ. ಕೃಷ್ಣ, ಬಿ.ಸೀಹಳ್ಳಿ, ತಿ.ನರಸೀಪುರ. ಎಸ್.ಕೃಷ್ಣ, ಬೆಟ್ಟಹಳ್ಳಿ, ಶ್ರೀರಂಗಪಟ್ಟಣ. ಬಸವಣ್ಣ, ಕಳ್ಳೀಪುರ, ತಿ.ನರಸೀಪುರ. ಪುಟ್ಟರಾಜು, ವಿಠಲಾಪುರ, ಕೆ.ಆರ್.ಪೇಟೆ.

ನಾಲ್ಕು ಹಲ್ಲಿನ ಜೋಡಿ ಕಡಸುಗಳು: ಚಂದನ್, ಬುಳ್ಳಿ ಕೆಂಪನದೊಡ್ಡಿ, ಮಳವಳ್ಳಿ. ರವಿಕುಮಾರ್, ಹಳೆ ಬೂದನೂರು, ಮಂಡ್ಯ. ಎ.ಬಿ.ಅರುಣ್‌ಕುಮಾರ್, ಡಿ.ಆಲನಹಳ್ಳಿ, ಮಳವಳ್ಳಿ. ಮಲ್ಲೇಗೌಡ, ಚಾಮಲಾಪುರ, ತಿ.ನರಸೀಪುರ. ರಾಜು, ಹೊಸಕೊಪ್ಪಲು, ತಿ.ನರಸೀಪುರ.

ಆರು ಹಲ್ಲಿನ ಜೋಡಿ ಕಡಸುಗಳು: ಲೋಕೇಶ್, ದೊಡ್ಡಯಲಚಗೆರೆ, ಮಳವಳ್ಳಿ. ಆನಂದ, ಹುಬ್ಬನಹಳ್ಳಿ, ಮಂಡ್ಯ. ಮಹದೇವು, ಮಂಚಶೆಟ್ಟಹಳ್ಳಿ, ರಾಮನಗರ. ನಂಜೇಗೌಡ, ನುಗ್ಗಹಳ್ಳಿ ಕೊಪ್ಪಲು, ತಿ.ನರಸೀಪುರ. ರವಿ, ಚೋಕನಹಳ್ಳಿ, ಕೆ.ಆರ್.ಪೇಟೆ.

ಬಾಯಿಗೂಡಿದ ಜೋಡಿ ಕಡಸುಗಳು: ವೆಂಕಟಸ್ವಾಮಪ್ಪ, ಹೊಸಕೋಟೆ, ಬೆಂಗಳೂರು. ಮಧು, ಅರಕೆರೆ, ಶ್ರೀರಂಗಪಟ್ಟಣ. ಅಭಿಲಾಷ್, ಮುರುಕನಹಳ್ಳಿ, ಕೆ.ಆರ್.ಪೇಟೆ. ಪ್ರೀತು, ಕಿರಗಂದೂರು, ಮಂಡ್ಯ. ರವಿದಾಸೇಗೌಡ, ಸಜ್ಜೆಹುಂಡಿ, ಮೈಸೂರು.

ಜೋಡಿ ಎತ್ತುಗಳ ವಿಭಾಗ

ಹಾಲು ಹಲ್ಲಿನ ಜೋಡಿ ಕರುಗಳು: ಎಸ್.ಆರ್.ದೇವರಾಜು, ಸುಂಕಾತೊಣ್ಣೂರು, ಪಾಂಡವಪುರ. ವೀರೇಗೌಡ, ಕೋಣನಹಳ್ಳಿ, ಮಂಡ್ಯ. ಹೋರಿ ಮಾದಪ್ಪ, ಚಿಕ್ಕೆಗೌಡನಕೊಪ್ಪಲು ಮೈಸೂರು. ಸ್ವಾಮಿಗೌಡ, ಬೋಗಾದಿ, ಮೈಸೂರು. ಪುನೀತ್, ಗಂಜಾಂ, ಶ್ರೀರಂಗಪಟ್ಟಣ. ಶಿವಲಿಂಗಪ್ಪ, ಚಾಗಶೆಟ್ಟಹಳ್ಳಿ, ಪಾಂಡವಪುರ. ನಾಗೇಶ್, ಮತ್ತಿಘಟ್ಟ, ಚನ್ನರಾಯಪಟ್ಟಣ.

ಎರಡು ಹಲ್ಲಿನ ಜೋಡಿ ಎತ್ತುಗಳು: ನಿಶಾಂತ್, ಗಂಜಾಂ, ಶ್ರೀರಂಗಪಟ್ಟಣ. ರಮೇಶ, ಮಳವಳ್ಳಿ. ಶ್ರೀಧರ್, ಬಿ.ಸೀಹಳ್ಳಿ, ತಿ.ನರಸೀಪುರ. ಭೈರೇಗೌಡ, ಮಾಯಪ್ಪನಹಳ್ಳಿ, ಮಂಡ್ಯ. ವಿನೋದ, ಡಾಮಡಹಳ್ಳಿ, ಪಾಂಡವಪುರ.

ನಾಲ್ಕು ಹಲ್ಲಿನ ಜೋಡಿ ಎತ್ತುಗಳು: ಚಾಮೇಗೌಡ, ಶಾಂತಿಕೊಪ್ಪಲು, ಶ್ರೀರಂಗಪಟ್ಟಣ. ಎಂ.ಎಸ್.ಕಿರಣ್, ಗಾಂಧಿನಗರ, ಮಂಡ್ಯ. ದೀಪು, ಕೆ.ಜಿ.ಕೊಪ್ಪಲು, ಮೈಸೂರು. ವಿಕ್ರಾಂತ್ ಸುರೇಶ್, ನಗುವನಹಳ್ಳಿ, ಶ್ರೀರಂಗಪಟ್ಟಣ. ಕೃಷ್ಣಪ್ಪ, ಚನ್ನಪಟ್ಟಣ.

ಆರು ಹಲ್ಲಿನ ಜೋಡಿ ಎತ್ತುಗಳು: ಮದನ್, ಕಾಚಮಾರನಹಳ್ಳಿ, ಬೆಂಗಳೂರು. ಸಿದ್ದಾಂತ್, ಕೋಡಿಪುರ, ಮಳವಳ್ಳಿ. ರೇವಂತ್‌ಗೌಡ, ಕೆನ್ನಾಳು, ಪಾಂಡವಪುರ. ದೇವರಾಜು, ಎಂ.ಶೆಟ್ಟಹಳ್ಳಿ, ಪಾಂಡವಪುರ. ಚಂದ್ರೇಗೌಡ, ಸುಳ್ಳೇರಿ, ಚನ್ನಪಟ್ಪಣ.

ಬಾಯಿಗೂಡಿದ ಜೋಡಿ ಎತ್ತುಗಳು: ರಾಜಶೇಖರ್, ಇಡಗೂರು, ಗುಬ್ಬಿ. ಸಂದೀಪ್, ತಿಂಡ್ಲು, ಆನೇಕಲ್. ಶಶಿಶಿವು, ಕೆಂಪಯ್ಯನಹುಂಡಿ, ತಿ.ನರಸೀಪುರ. ಡಿ.ಎನ್.ಕುಮಾರ, ದೊಡ್ಡಗಾಡಿಗನಹಳ್ಳಿ, ಕೆ.ಆರ್.ಪೇಟೆ. ವಿನೋದ, ಡಾಮಡಹಳ್ಳಿ, ಪಾಂಡವಪುರ. ಕೆ.ಕೆ.ರಾಜೇಶ್, ನಾರ್ಥ್ ಬ್ಯಾಂಕ್, ಪಾಂಡವಪುರ. ಕುಮಾರ್, ಇಟ್ಟಿಗೆಗೂಡು, ಮೈಸೂರು. ವಿ.ಎಂ.ಡಿ.ಮಂಜುನಾಥ್, ಕೆ.ದೊಮ್ಮಸಂದ್ರ, ಬೆಂಗಳೂರು. ಕೃಷ್ಣೇಗೌಡ, ತಿಮ್ಮನಕೊಪ್ಪಲು, ಪಾಂಡವಪುರ. ಡಾ.ರಾಹುಲ್‌ಗೌಡ, ಬನ್ನೂರು, ತಿ.ನರಸೀಪುರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಿ: ರಾಮಕೃಷ್ಣೇಗೌಡ
ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆಗೆ ಒಮ್ಮತ ಅವಶ್ಯ