ಬಜೆಟ್‌ನಲ್ಲಿ ಶಿಡ್ಲಘಟ್ಟ ರೇಷ್ಮೆ ಮಾರುಕಟ್ಟೆಗೆ ಅನುದಾನ

KannadaprabhaNewsNetwork |  
Published : Feb 18, 2024, 01:31 AM IST
ಸಿಕೆಬಿ-9  ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದಡಿ  ನಗರದ ಎರಡನೇ ವಾರ್ಡ್ ನ ಜನತೆಯ ಸಮಸ್ಯೆಗಳನ್ನು ಶಾಸಕ ಪ್ರದೀಪ್ ಈಶ್ವರ್ ಆಲಿಸಿದರು | Kannada Prabha

ಸಾರಾಂಶ

ಖಾಲಿ ಇರುವ ನಿವೇಶನಗಳಲ್ಲಿ ಕಸತುಂಬಿರುವ ಬಗ್ಗೆ ಆಯಾ ಮಾಲೀಕರೆ ಎಚ್ಚರವಹಿಸಬೇಕು. ಇಲ್ಲದಿದ್ದರೆ ನಗರಸಭೆ ನೋಟಿಸ್ ನೀಡುತ್ತೇವೆ, ಆಗಲೂ ನಿರ್ಲಕ್ಷ್ಯವಹಿಸಿದರೆ ನಿವೇಶನ ಮುಟ್ಟುಗೊಲು ಹಾಕಿಕೊಳ್ಳಲಾಗುವುದು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಶಿಡ್ಲಘಟ್ಟ ರೇಷ್ಮೆ ಗೂಡು ಹೈ ಟೆಕ್ ಮಾರುಕಟ್ಟೆಗೆ ಇನ್ನೂರೈವತ್ತು ಕೋಟಿ ಕೊಟ್ಟಿರೋದು ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದಡಿ ನಗರದ ಎರಡನೇ ವಾರ್ಡ್‌ನ ಭಗತ್ ಸಿಂಗ್ ನಗರದಲ್ಲಿ ಪಾದಯಾತ್ರೆ ನಡೆಸಿ. ಮನೆ ಮನೆ ಭೇಟಿಕೊಟ್ಟು ಜನತೆಯ ಸಮಸ್ಯೆಗಳನ್ನು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅ‍ವರು, ಎಚ್ ಎನ್ ವ್ಯಾಲಿ ಮೂರನೆ ಹಂತದ ಶುದ್ಧೀಕರಣ ಪರವಾಗಿ ನಾನು ಇದ್ದೇನೆ. ಆದರೆ ಅದಕ್ಕೆ ಮುಂದಿನ ವರ್ಷ ಹಣಬಿಡುಗಡೆ ಮಾಡುಸುತ್ತೇನೆಂದು ಭರವಸೆ ನೀಡಿದರು.ಖಾಲಿ ನಿವೇಶನ ಸ್ವಚ್ಛತೆ ಕಾಪಾಡಿ

ಖಾಲಿ ಇರುವ ನಿವೇಶನಗಳಲ್ಲಿ ಕಸತುಂಬಿರುವ ಬಗ್ಗೆ ಆಯಾ ಮಾಲೀಕರೆ ಎಚ್ಚರವಹಿಸಬೇಕು. ಸ್ವಚ್ಛತೆ ಕಾಪಾಡಲು ಮುಂದಾಗಬೇಕು. ಇಲ್ಲದಿದ್ದರೆ ನಗರಸಭೆ ವತಿಯಿಂದ ಎರಡು-ಮೂರು ಭಾರಿ ನೋಟಿಸ್ ನೀಡುತ್ತೇವೆ, ಆಗಲೂ ನಿರ್ಲಕ್ಷ್ಯವಹಿಸಿದರೆ ನಿವೇಶನ ಮುಟ್ಟುಗೊಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಮನೆಮನೆಗೆ ಬೇಟಿ ನೀಡಿ ವಾರ್ಡ್ ನ ನಿವಾಸಿಗಳ ಬೇಟಿ ಮಾಡಿ ಅವರ ಸಮಸ್ಯೆಗಳಾದ ಮನೆ ಹಕ್ಕುಪತ್ರ ,ಮಾಶಾಸನ, ಪಡಿತರ ಚೀಟಿ ಮತ್ತು ಮೂಲಭೂತ ಸೌಕರ್ಯಗಳಾದ ನೀರು, ಚರಂಡಿ,ವಿದ್ಯತ್‌, ರಸ್ತೆ ರಿಪೇರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.ವಾರ್ಡ್ ಗಳ ಪರ್ಯಟನೆ ನಡೆಸಿದ್ದೇನೆ. ಖಾಲಿ ಸೈಟುಗಳಲ್ಲಿ ಗಿಡಗಂಟಿಗಳು ಎತ್ತರೆತ್ತರಕ್ಕೆ ಬೆಳೆದು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಸಮಸ್ಯೆ ಪರಿಹರಿಸಲು ಕ್ರಮ

ರಾಜ ಕಾಲುವೆ ಮೇಲೆ ಮನೆ ನಿರ್ಮಿಸಿ ಕೊಂಡಿರುವ ಬಡವರಿಗೆ ಸ್ಲಂ ಬೋರ್ಡ್ ನಿಂದ ಪಕ್ಕಾ ಮನೆಗಳನ್ನು ಕಟ್ಟಿಸಿ ಕೊಡುವ ಬಗ್ಗೆ ಚಿಂತನೆ ನಡೆಸಿದ್ದೇನೆ. ಪಾದಯಾತ್ರೆ ವೇಳೆ ಎಂದಿನಂತೆ ಖಾತೆಗಳ ಸಮಸ್ಯೆ, ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ, ಚರಂಡಿ, ರಸ್ತೆಗುಂಡಿಗಳು ಅನ್ನೋ ದೂರುಗಳೆ ಹೆಚ್ಚಾಗಿ ಕೇಳಿಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಈ ವೇಳೆ ನಗರಸಭೆಯ ಪೌರಾಯುಕ್ತ ಮಂಜುನಾಥ್,ನಗರ ಪೋಲಿಸ್‌ ಠಾಣೆಯ ಪಿಎಸೈ ಹೆಚ್. ನಂಜುಂಡಯ್ಯ,ಎರಡನೆ ವಾರ್ಡ್ ಸದಸ್ಯೆ ರತ್ನಮ್ಮ ಪರ ಅವರ ಮಗ ಅರುಣ್, ನಗರಸಭೆ ಸದಸ್ಯ ಕಣಿತಹಳ್ಳಿ ವೆಂಕಟೇಶ್, ಮುಖಂಡರಾದ ಶಕೀಲಾ ಬಾನು,ಸುಧಾವೆಂಕಟೇಶ್, ಜಿ.ಪಂ. ಮಾಜಿ ಸದಸ್ಯೆ ನಾರಾಯಣಮ್ಮ,ನಿರ್ಮಲ, ನಗರಸಭೆ, ಕಂದಾಯ,ಆಹಾರ, ಬೆಸ್ಕಾಂ, ಆರೋಗ್ಯ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳ ಅಧಿಕಾರಿಗಳು, ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!