ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸ್ನೇಹ ಬಳಗದ ವತಿಯಿಂದ ಕವಿ ಕೆ.ಪಿ.ಮೃತ್ಯುಂಜಯ ವಿರಚಿತ ಜಾಯ್ ಪದ್ಯಗಳು, ಎಲ್.ಸಂದೇಶ್ ಹೊರತಂದಿರುವ ಮಂಡ್ಯ ಎಜುಕೇಷನ್ ಗೈಡ್ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮನುಷ್ಯರಂತೆ ಪ್ರಾಣಿಗಳು ಕುಟುಂಬದ ಯಜಮಾನನನ್ನು ಪ್ರೀತಿಸುತ್ತವೆ. ಯಜಮಾನ ಕಾಣದಿದ್ದರೆ ಮೂಕರೋಧನ ಅನುಭವಿಸುತ್ತವೆ. ಮನುಷ್ಯರಿಗಿಂತ ಪ್ರಾಣಿಗಳಲ್ಲಿ ಕೃತಜ್ಞತಾ ಮನೋಭಾವ ಹೆಚ್ಚಿರುತ್ತವೆ. ತನ್ನನ್ನು ಪಾಲನೆ- ಪೋಷಣೆ ಮಾಡಿದ ಕುಟುಂಬದವರನ್ನು ಅತ್ಯಂತ ಗೌರವ, ಅಭಿಮಾನದಿಂದ ಕಾಣುತ್ತಿರುತ್ತವೆ. ಅಂತಹುದೇ ಮಧುರವಾದ ಸಂಬಂಧವನ್ನು ಕೆ.ಪಿ.ಮೃತ್ಯುಂಜಯ ಅವರು ತಮ್ಮ ಸಾಕು ನಾಯಿ ಜಾಯ್ನೊಂದಿಗೆ ಹೊಂದಿದ್ದರು ಎಂದು ಹೇಳಿದರು.ನಾನು ಜಿಪಂ ಸದಸ್ಯನಾಗಿದ್ದಾಗಿನಿಂದಲೂ ಕೆ.ಪಿ.ಮೃತ್ಯುಂಜಯ ಪರಿಚಿತರು. ಬಹಳ ಶಿಸ್ತುಬದ್ಧ, ಸರಳ ಮನುಷ್ಯ. ಗುಣದಲ್ಲಿ ಬದಲಾವಣೆಯಾಗದ ವ್ಯಕ್ತಿತ್ವ. ಪತ್ರಕರ್ತರಾಗಿ, ಉಪನ್ಯಾಸಕರಾಗಿ, ಸಾಹಿತಿಯಾಗಿ ಬೆಳವಣಿಗೆ ಸಾಧಿಸುತ್ತಿದ್ದಾರೆ. ಅವರ ನಿವೃತ್ತಿಯ ಜೀವನ ಸುಖಮಯವಾಗಿರಲಿ ಎಂದು ಆಶಿಸಿದರು.
ಮೃತ್ಯುಂಜಯರವರ ಕವನಗಳಲ್ಲಿ ಶ್ವಾನ ಮತ್ತು ಮನುಷ್ಯರ ನಡುವಿನ ಷರತ್ತು ರಹಿತ ಸಂಬಂಧ ಅನುರಣನಗೊಂಡಿದೆ. ಅದರ ಮೂಲಕ ಇಬ್ಬರ ನಡುವಿನ ಸಾಮಾಜಿಕ ಗೆಳೆತನವನ್ನು ಗುರುತಿಸಬಹುದು. ಮನುಷ್ಯರಂತೆ ಪ್ರಾಣಿಗಳಿಗೂ ಪ್ರಕೃತಿಯೊಂದಿಗೆ ಬೆಳೆಯುವ, ಸ್ವತಂತ್ರವಾಗಿ ಬದುಕುವ, ಬಂಧನದಿಂದ ಬೇರ್ಪಡುವುದನ್ನು ಗಂಭೀರ ಚಿಂತನೆಗೆ ಒಳಪಡಿಸಿದ್ದಾರೆ. ಪ್ರಾಣಿಗಳೂ ಜಾಗತಿಕ ಸ್ವಾತಂತ್ರ್ಯವನ್ನು ಹಂಬಲಿಸುತ್ತಿರುತ್ತವೆ. ಆದರೆ, ಮನುಷ್ಯನ ಸ್ವಾರ್ಥ, ನಾಗರಿಕತೆಯ ಕ್ರೌರ್ಯದ ಬಗ್ಗೆಯೂ ಹೇಳುತ್ತಲೇ ತಮ್ಮ ಮನೆಯ ಜೀವಿಯನ್ನು ದೇವರಾಗಿಸಿದ್ದಾರೆ ಎಂದರು.
ಎಲ್.ಸಂದೇಶ್ರವರ ಮಂಡ್ಯ ಎಜುಕೇಷನ್ ಗೈಡ್ ಬಿಡುಗಡೆ
ಪುಸ್ತಕ ಕುರಿತು ಮಾತನಾಡಿದ ಸಚಿವರು, ಇದೊಂದು ಅಪರೂಪ ಮತ್ತು ವಿಭಿನ್ನ ರೀತಿಯ ಪುಸ್ತಕವಾಗಿದೆ. ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳ ವಿವರಗಳನ್ನು ಒಳಗೊಂಡು ಹೊರತಂದಿದ್ದು, ಸಂಗ್ರಹಯೋಗ್ಯ ಪುಸ್ತಕ ಎಂದು ನುಡಿದರು.