ಕನ್ನಡಪ್ರಭ ವಾರ್ತೆ ಮಂಡ್ಯ
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ. ಕ್ಷೇತ್ರಗಳ ಅಭಿವೃದ್ಧಿಗೆ ಹಣ ನೀಡುವಂತೆ ಶಾಸಕರು ಅಂಗಲಾಚುತ್ತಿದ್ದರೂ ಕೊಡುತ್ತಿಲ್ಲ. ಮರ್ಯಾದೆ ಉಳಿಸಿಕೊಳ್ಳಲು ಶಾಸಕರು ಅವಲತ್ತುಕೊಳ್ಳುತ್ತಿದ್ದರೂ ಅವರಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ಸಾರಿಗೆ ಬಸ್ ದರವನ್ನು ಶೇ.2ರಿಂದ 3ರಷ್ಟು ಏರಿಸಿದ್ದನ್ನು ಕಂಡಿದ್ದೇವೆ. ಆದರೆ, ಏಕಾಏಕಿ ಶೇ.15ರಷ್ಟು ಏರಿಕೆ ಮಾಡುವ ಮೂಲಕ ಬಡವರಿಗೆ ಸರ್ಕಾರ ಘೋರ ಅನ್ಯಾಯ ಮಾಡಿದೆ. ಬಡವರ ಕೂಲಿ ದರ ಹೆಚ್ಚಿಸಿ ಬಸ್ದರ ಹೆಚ್ಚಳ ಮಾಡಿದರೆ ಅದು ನ್ಯಾಯೋಚಿತ. ಆದರೆ, ಕೂಲಿ ದರವನ್ನು ಹೆಚ್ಚಿಸದೆ ಬಸ್ದರ ಏರಿಕೆ ಮಾಡುವುದು ನ್ಯಾಯ ಸಮ್ಮತವಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಈ ಹೊತ್ತಿನಲ್ಲಿ ಬಸ್ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಟೀಕಿಸಿದರು.ಮಳವಳ್ಳಿ ಕ್ಷೇತ್ರದ ಶಾಸಕರು ಮಂತ್ರಿಯಾಗಬೇಕೆಂದು ಹೈಕೋರ್ಟ್ ನ್ಯಾಯಾಧೀಶ ಎಚ್.ಎಸ್.ಶಿವಶಂಕರೇಗೌಡರು ದೇವರಿಗೆ ಹರಕೆ ಕಟ್ಟಿಕೊಂಡಿರುವುದಾಗಿ ಹೇಳಿಕೆ ನೀಡಿರುವುದನ್ನು ನೋಡಿದಾಗ ಇವರು ನ್ಯಾಯಮೂರ್ತಿಗಳೋ, ರಾಜಕಾರಣಿಗಳೋ ಎಂದು ಪ್ರಶ್ನಿಸುವಂತಾಗಿದೆ ಎಂದರು.
ಕೃಷ್ಣರಾಜಸಾಗರ ಜಲಾಶಯದಲ್ಲಿ 124 ಅಡಿಯಷ್ಟು ನೀರು ಸಂಗ್ರಹವಾಗಿದೆ. ಆದರೂ ಕಟ್ಟುನೀರು ಪದ್ಧತಿಯಡಿ ಮಳವಳ್ಳಿಗೆ ನೀರು ಹರಿಸುತ್ತಿರುವುದೇಕೆ. ಕಟ್ಟು ನೀರು ಪದ್ಧತಿಯಲ್ಲಿ ನೀರನ್ನು ಹರಿಸದೆ ನಿರಂತರವಾಗಿ ನೀರನ್ನು ಹರಿಸಬೇಕು ಎಂದು ಆಗ್ರಹಿಸಿದರು.ನೀರಾವರಿ ಸಲಹಾ ಸಮಿತಿ ಸಭೆಗೆ ಶಾಸಕರು ಗೈರು ಹಾಜರಾಗಿದ್ದಾರೆಂದರೆ ಅವರ ಭಾಗದಲ್ಲಿ ಸಾಕಷ್ಟು ನೀರಿರುವಂತೆ ಕಾಣುತ್ತದೆ. ನಮ್ಮ ಭಾಗದಲ್ಲಿ ನೀರಿಲ್ಲ. ಅದಕ್ಕಾಗಿ ನಾವು ಕೇಳಿಕೊಳ್ಳುತ್ತಿದ್ದೇವೆ. ಮಳವಳ್ಳಿ ಜನರು ಅರ್ಧಂಬರ್ಧ ನೀರಿನಲ್ಲಿ ಬದುಕುತ್ತಿದ್ದಾರೆ. ಅದಕ್ಕಾಗಿ ನಮಗೆ ನಿರಂತರ ನೀರು ಹರಿಸಿ ಜನರನ್ನು ರಕ್ಷಿಸುವಂತೆ ಒತ್ತಾಯಿಸಿದರು.
ನಾನು ಮಾತನಾಡಿರುವುದು ತಪ್ಪು ಎಂತಲೂ ಶಾಸಕರು ಹೇಳುತ್ತಿಲ್ಲ. ಹಾಗಾದರೆ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಂತಾಗಿದೆ. ಅಮಿತ್ ಶಾ ಮಾಡಿರುವುದು ತಪ್ಪು ಎನ್ನುವುದಾದರೆ ಶಾಸಕರು ಮಾತನಾಡಿರುವುದೂ ತಪ್ಪೇ. ಹಾಗಾಗಿ ಇವರ ವಿರುದ್ಧವೂ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಹನುಮಂತು, ಕಾಂತರಾಜು, ಜಯರಾಂ, ಶ್ರೀಧರ್, ಸಿದ್ದಾಚಾರಿ ಇತರರಿದ್ದರು.