ಭಾಲ್ಕಿ: ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಪ್ರೊ.ಜಗನ್ನಾಥ ಕಮಲಾಪೂರೆ ಮತ್ತು ಬಾಬು ಬಿ.ಮಡಕಿ ಸಂಪಾದನೆಯ "ಗುರುಬಸವ ಸಾಮೂಹಿಕ ಪ್ರಾರ್ಥನೆ’ ಕೃತಿ ಲೋಕಾರ್ಪಣೆ ಮಾಡಲಾಯಿತು.
ಸಮಾರಂಭಕ್ಕೆ ಬಂದ ಅತಿಥಿಗಳಿಗೆ ಈ ಕಿರು ಪುಸ್ತಕ ಉಡುಗೊರೆಯಾಗಿ ಕೊಡುವ ಮೂಲಕ ಬಸವತತ್ವ ಪ್ರಚಾರ ಮಾಡುತ್ತಿರುವುದು ಬಹಳ ಸಂತೋಷದ ವಿಷಯ. ಇವರ ಬಸವತತ್ವ ಸೇವೆ ಮತ್ತು ಕಳಕಳಿ ಮೆಚ್ಚುವಂತಹದ್ದು.
ಪ್ರಾರ್ಥನೆ ಮಾಡುವುದರಿಂದ ಮನುಷ್ಯ ಮಾನಸಿಕವಾಗಿ ನೆಮ್ಮದಿಯಿಂದ ಇರುತ್ತಾನೆ. ದಿನಾಲು ಪ್ರಾರ್ಥನೆ ಮಾಡುವುದರಿಂದ ಮನುಷ್ಯನ ಮನಸ್ಸು ಶಾಂತ-ಸಮಾಧಾನದಿಂದ ಇರುತ್ತದೆ. ಮಹಾತ್ಮ ಗಾಂಧೀಜಿಯವರ ಜೀವನದಲ್ಲಿ ದಿನನಿತ್ಯ ಪ್ರಾರ್ಥನೆ ಮಾಡುತ್ತಿದ್ದರು. ಶರಣರು, ಸಂತರು, ಮಹಾತ್ಮರು ಪ್ರಾರ್ಥನೆಗೆ ಹೆಚ್ಚಿನ ಮಹತ್ವ ಕೊಟ್ಟಿದ್ದರು. ಆ ಪ್ರಾರ್ಥನೆ ಮೂಲಕ ತಮ್ಮ ಮನಃಶಾಂತವಾಗಿಟ್ಟುಕೊಳ್ಳುತ್ತಿದ್ದರು. ನಾವೆಲ್ಲರೂ ನಮ್ಮ ನಿತ್ಯ ಬದುಕಿನಲ್ಲಿ ಪ್ರಾರ್ಥನೆ ಮಾಡುತ್ತ ನಮ್ಮ ಜೀವನ ನೆಮ್ಮದಿ-ಶಾಂತ-ಸಮಾಧಾನದಿಂದ ನಡೆಸೋಣ ಎಂದು ಪೂಜ್ಯರು ಆಶೀರ್ವಚನ ನೀಡಿದರು.ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು. ಪ್ರೊ. ಜಾಧವ ಕಲಬುರಗಿ ಅವರಿಂದ ಕೃತಿ ಲೋಕಾರ್ಪಣೆ ಮಾಡಲಾಯಿತು. ಕಾಶಿನಾಥ ಚಿದ್ರೆ, ಬಸವರಾಜ ಅನೀಲಕುಮಾರ, ಶರಣಮ್ಮ, ಶೃತಿ, ರತ್ನಶ್ರೀ, ಶಿವಲಿಂಗ, ಮಲ್ಲಿಕಾರ್ಜುನ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.