ಕನ್ನಡಪ್ರಭ ವಾರ್ತೆ ಮಂಡ್ಯ
ಎಸ್.ಕೆ.ಅರುಣಿ ಮಾತನಾಡಿ, ಎಂ.ವಿ.ಶ್ರೀನಿವಾಸ್ ಅವರು ಕೇವಲ ಇತಿಹಾಸ ಹಾಗೂ ಕಾದಂಬರಿಕಾರರಷ್ಟೇ ಅಲ್ಲ, ಸಾಹಿತ್ಯಾಸಕ್ತರು ಕೂಡ ಆಗಿದ್ದಾರೆ. ಇವರು ಬರೆದ ಕಾದಂಬರಿಗಳು ಹೆಚ್ಚು ಜನಪ್ರಿಯತೆ ಗಳಿಸಿವೆ ಹೇಳಿದರು.
ತುಮಕೂರು ಸಮ್ಮೇಳನಾಧ್ಯಕ್ಷರಾಗಿಯೂ ಆಯ್ಕೆಯಾಗಿರುವ ಶ್ರೀನಿವಾಸ್ ಅವರು, ಮಸ್ತಾನಿ, ರತ್ನಾಕರ ಎಂಬುವ ಕಾದಂಬರಿಗಳು ಇವರನ್ನು ಗುರುತಿಸುವ ಹಾಗೆ ಮಾಡಿದೆ. ಇತಿಹಾಸದ ಸಂಶೋಧನೆಯನ್ನು ನೋಡುವುದಾದರೆ ಸ್ಥಳೀಯ ಮಟ್ಟದ ನಾಯಕರ ಬಗ್ಗೆ ತಿಳಿಸಿಕೊಡುತ್ತಿದ್ದರು. ಅದರಲ್ಲಿ ಮುಖ್ಯವಾಗಿ ನಾಡಪ್ರಭು ಮತ್ತು ಪಾಳೆಗಾರರ ಬಗ್ಗೆ ತಿಳಿಸಿಕೊಡುತ್ತಿದ್ದ ಪರಿಯನ್ನು ಮರೆಯುವಂತಿಲ್ಲ ಎಂದು ಶ್ಲಾಘಿಸಿದರು.ಪ್ರಶಸ್ತಿಗೆ ಎಂದಿಗೂ ಲಾಭಿ ಮಾಡುವುದನ್ನು ನೋಡಿಲ್ಲ, ವಿದ್ವಾಂಸರೇ ಇವರನ್ನು ಆಯ್ಕೆ ಮಾಡಿರುವ ನಿದರ್ಶನಗಳು ಕಣ್ಣಮುಂದೆ ಕಾಣುತ್ತವೆ. ನನಗೂ ಮತ್ತು ಎಂ.ವಿ.ಶ್ರೀನಿವಾಸ್ ಅವರಿಗೆ ೨೮ ವರ್ಷಗಳ ಒಡನಾಟವಿದೆ. ನಿರಂತರ ಸಂಶೋಧಕಾರಗಿದ್ದಾರೆ. ಮೈಸೂರು ವಿವಿಯ ಒಂದು ವಾಲ್ಯುಮ್ನು ಉಸ್ತುವಾರಿ ವಹಿಸಿಕೊಂಡಿದ್ದರು. ಒಟ್ಟಾರೆ ಹೇಳುವುದಾದರೆ ಶ್ರೀನಿವಾಸ್ ಅವರು ಇತಿಹಾಸ ವಿದ್ಯಾರ್ಥಿಗಳು, ಇತಿಹಾಸ ತಜ್ಞರಾಗಿ ಕಾಣುತ್ತಾರೆ, ಹ.ಕ.ರಾಜೇಗೌಡ ಪ್ರಶಸ್ತಿ ಇವರಿಗೆ ಲಭಿಸಿರುವುದು ಅತ್ಯಂತ ಸಂತಸ ತಂದಿದೆ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ಮಂಡ್ಯ ಜಿಲ್ಲೆಗೆ ಹಲವು ಆಯಾಮಗಳಲ್ಲಿ ಸಾಹಿತಿಕ ಮಜಲುಗಳನ್ನು ತಂದುಕೊಟ್ಟ ಹ.ಕ.ರಾಜೇಗೌಡ ಅವರು ಇಂದಿಗೂ ಪ್ರಸ್ತುತವಾಗಿ ನಿಲ್ಲುತ್ತಾರೆ. ಇವರು ಜಾನಪದ, ಇತಿಹಾಸ ಅನೇಕ ಕೃತಿಗಳನ್ನು ಹೊರತಂದು ಅನೇಕ ಕಥೆಗಳನ್ನೂ ಹೊರತಂದಿದ್ದಾರೆ, ಅವರ ಹೆಸರಿನಲ್ಲಿ ಏನಾದರೂ ಮಾಡಬೇಕೆಂದಾಗ ಅವರ ಕುಟುಂಬದವರು ದತ್ತಿ ಇರಿಸಿದ್ದಾರೆ, ಇವರಿಗೆ ಕೃತಜ್ಞತೆ ಸಲ್ಲಿಸುವೆ. ನಾನು ಕಂಡ ಅಪರೂಪದ ಅತ್ಯುತ್ತಮ ಅಧ್ಯಾಪಕ ಹಾಗೂ ಬಹುಭಾಷಾಕಾರರಾದ ಎಂ.ವಿ.ಶ್ರೀನಿವಾಸ್ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆ ಎನಿಸಿದೆ ಎಂದರು.