ರೈತ ಹೋರಾಟಕ್ಕೆ ಹೊಸ ಆಯಾಮ ನೀಡಿದ್ದ ಎಚ್.ಎಸ್.ರುದ್ರಪ್ಪ

KannadaprabhaNewsNetwork |  
Published : Aug 20, 2026, 01:30 AM IST
19ಎಚ್.ಎಲ್.ಐ1 ಹೊನ್ನಾಳಿ ಯುಟಿಪಿ ಸರ್ಕಲ್ ಬಳಿ ಬುಧವಾರ  ರೈತ ಮುಖಂಡ,ಮಾಜಿ ಸಚಿವರಾದ ದಿವಂಗತ ಎಚ್.ಎಸ್. ರುದ್ರಪ್ಪ ಅವರ  ಜನ್ಮದಿನಾಚರಣೆಯಲ್ಲಿ ರೈತ ಸಂಘದವತಿಯಿಂದ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.ರೈತ ಮುಖಂಡ ಜಗದೀಶ್,ಡಿ.ಎಸ್. ಸುರೇಂದ್ರ ಗೌಡ ಹಾಗೂ ರೈತ ಮುಖಂಡರು ಇದ್ದರು.   | Kannada Prabha

ಸಾರಾಂಶ

ಅವಿಭಜಿತ ಹೊನ್ನಾಳಿ ತಾಲೂಕಿನ ಹೊಸಕೊಪ್ಪದ ದಿವಂಗತ ಎಚ್.ಎಸ್. ರುದ್ರಪ್ಪ ಅವರು ನಾಡು, ದೇಶ ಕಂಡ ಅಪರೂಪದ ವಿಶಿಷ್ಟ ವ್ಯಕ್ತಿತ್ವದ, ಸದಾ ರೈತರ ಹಿತಾಸಕ್ತಿಗಾಗಿ ಹೋರಾಟ ನಡೆಸಿದ ಗಾಂಧಿವಾದಿ, ಧೀಮಂತ ನಾಯಕರಾಗಿದ್ದರು ಎಂದು ರೈತ ಯುವ ಮುಖಂಡ ಕಡದಕಟ್ಟೆ ಜಗದೀಶ್ ಹೇಳಿದ್ದಾರೆ.

- ಹೊನ್ನಾಳಿಯಲ್ಲಿ 126ನೇ ಜಯಂತಿ ಕಾರ್ಯಕ್ರಮದಲ್ಲಿ ಕಡದಕಟ್ಟೆ ಜಗದೀಶ್ ಅಭಿಮತ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಅವಿಭಜಿತ ಹೊನ್ನಾಳಿ ತಾಲೂಕಿನ ಹೊಸಕೊಪ್ಪದ ದಿವಂಗತ ಎಚ್.ಎಸ್. ರುದ್ರಪ್ಪ ಅವರು ನಾಡು, ದೇಶ ಕಂಡ ಅಪರೂಪದ ವಿಶಿಷ್ಟ ವ್ಯಕ್ತಿತ್ವದ, ಸದಾ ರೈತರ ಹಿತಾಸಕ್ತಿಗಾಗಿ ಹೋರಾಟ ನಡೆಸಿದ ಗಾಂಧಿವಾದಿ, ಧೀಮಂತ ನಾಯಕರಾಗಿದ್ದರು ಎಂದು ರೈತ ಯುವ ಮುಖಂಡ ಕಡದಕಟ್ಟೆ ಜಗದೀಶ್ ಹೇಳಿದರು.

ಪಟ್ಟಣದ ಯುಟಿಪಿ ಸರ್ಕಲ್‌ನಲ್ಲಿ ಬುಧವಾರ ಆಯೋಜಿಸಲಾಗಿದ್ದ ಎಚ್.ಎಸ್.ರುದ್ರಪ್ಪ ಅವರ 126ನೇ ಜಯಂತಿ ಕಾರ್ಯಕ್ರಮದಲ್ಲಿ ಅ‍ವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಎಚ್.ಎಸ್. ರುದ್ರಪ್ಪ ಶಿವಮೊಗ್ಗ ನಗರಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಶಾಸಕರಾಗಿ, ಅರಣ್ಯ, ಕೃಷಿ ಸಚಿವರಾಗಿ, ರೈತ ಸಂಘವನ್ನು ಹುಟ್ಟುಹಾಕಿ ರೈತರಿಗೆ ಸ್ವಾಭಿಮಾನದ ಬದುಕನ್ನು ಪರಿಚಯಿಸಿದ್ದರು. ಇಡೀ ರಾಜ್ಯ, ನಾಡಿನ ಜನತೆ, ರೈತ ಸಮುದಾಯ ಇಂದಿಗೂ ಸ್ಮರಿಸುವ ರೀತಿಯಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಅವರು ಹೊನ್ನಾಳಿ ತಾಲೂಕಿನವರು ಎನ್ನುವುದೇ ಹೆಮ್ಮೆಯ ವಿಷಯವಾಗಿದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಹಾಲಿ ಶಾಸಕ ಡಿ.ಜಿ.ಶಾಂತನಗೌಡ ಅವರ ಪುತ್ರರೂ ಆದ ಡಿ.ಎಸ್. ಸುರೇಂದ್ರ ಗೌಡ ಅವರು ದಿ. ಎಚ್.ಎಸ್. ರುದ್ರಪ್ಪ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ರುದ್ರಪ್ಪ ಅಪ್ಪಟ ಗಾಂಧಿವಾದಿಗಳಾಗಿ ರಾಜಕೀಯ ಕ್ಷೇತ್ರದಲ್ಲಿನ ಹಲವಾರು ಹಂತಗಳಲ್ಲಿ ಅಧಿಕಾರ ನಡೆಸಿದ ಪ್ರತಿಭಾವಂತರಾಗಿದ್ದರು. ಜೊತೆಗೆ ನಾಡಿನ ರೈತ ಸಮುದಾಯದ ಒಳಿತಿಗಾಗಿ ಕೂಡ ಸಾಕಷ್ಟು ಹೋರಾಟ, ಸೇವೆಗಳನ್ನು ಸಲ್ಲಿಸಿದ್ದಾರೆ ಎಂದರು.

ಈ ಸಂದರ್ಭ ರೈತ ಮುಖಂಡರಾದ ಹೊಳೆಹರಳಹಳ್ಳಿ ಬಸವರಾಜಪ್ಪ, ಸುಂಕದಕಟ್ಟೆ ಕರಿಬಸಪ್ಪ ಅನಂದಪ್ಪ, ನರಸಿಂಹಪ್ಪ, ಹಿರೇಮಠದ ಬಸವರಾಪ್ಪ ಸೇರಿದಂತೆ ರೈತ ಮುಖಂಡರು ಇದ್ದರು.

- - -

-19ಎಚ್.ಎಲ್.ಐ1:

ಹೊನ್ನಾಳಿ ಯುಟಿಪಿ ಸರ್ಕಲ್ ಬಳಿ ಬುಧವಾರ ರೈತ ಮುಖಂಡ, ಮಾಜಿ ಸಚಿವರಾದ ದಿವಂಗತ ಎಚ್.ಎಸ್. ರುದ್ರಪ್ಪ ಜನ್ಮದಿನ ಕಾರ್ಯಕ್ರಮದಲ್ಲಿ ರೈತ ಸಂಘದಿಂದ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ರೈತ ಮುಖಂಡ ಜಗದೀಶ್, ಡಿ.ಎಸ್. ಸುರೇಂದ್ರ ಗೌಡ, ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಾವೊಬ್ಬ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತರಾಗದಿರಲಿ: ಶಾಸಕ ಸಿ.ಬಿ.ಸುರೇಶ್‌ಬಾಬು
ರಸ್ತೆ ಮಾರ್ಜಿನ್ ನಿಂದ 30 ಅಡಿ ಬಿಟ್ಟು ಮನೆ ಕಟ್ಟಲು ಅನುಮತಿಸಿ: ಖಾತೆದಾರರ ಆಗ್ರಹ