ಹಲಗೂರು:
ಹಲಗೂರು ಲಯನ್ ಸಂಸ್ಥೆ ಭವನದ ಆವರಣದಲ್ಲಿ 2026- 27ರ ಸಾಲಿನ ಅಧ್ಯಕ್ಷ ಲಯನ್ ಎನ್.ಎಸ್.ಗುಣೇಶ್, ಕಾರ್ಯದರ್ಶಿ ಡಾ.ಎ.ಎಸ್.ನಾಗೇಶ್ ಮತ್ತು ಖಜಾಂಜಿ ಎನ್.ಯೋಗೇಶ್ ನೇತೃತ್ವದ ನೂತನ ತಂಡದ ಪ್ರತಿಜ್ಞಾವಿಧಿ ಬೋಧನಾ ಸಮಾರಂಭದಲ್ಲಿ ಮಾತನಾಡಿದರು.
ನಿಮ್ಮ ಸಂಸ್ಥೆ ಸೇವೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ಇದ್ದೀರಿ. ಸಂಸ್ಥೆ ಇಷ್ಟು ಅಚ್ಚುಕಟ್ಟಾಗಿ ಎಲ್ಲಾ ಸದಸ್ಯರು ಒಗ್ಗೂಡಿ ಸಮಯವನ್ನು ಇದಕ್ಕಾಗಿ ಮೀಸಲಿಟ್ಟು ದಿನನಿತ್ಯ ಕಾರ್ಯಕ್ರಮ ಆಯೋಜಿಸಿ ಹಸಿವು ನಿವಾರಣೆ ಜೊತೆಗೆ ಆರೋಗ್ಯ ತಪಾಸಣೆ, ಪರಿಸರ ಜಾಗೃತಿ, ಹೃದಯಗೆ ಸಂಬಂಧಪಟ್ಟ ತಪಾಸಣೆ, ಕೀಲು ರೋಗ ತಪಾಸಣೆ ಸೇರಿದಂತೆ ಸುಮಾರು 505 ಕಾರ್ಯಕ್ರಮಗಳನ್ನು ಜಿ.ಎಸ್.ಮನೋಹರ ಅಧ್ಯಕ್ಷತೆ ತಂಡದಲ್ಲಿ ಆಯೋಜಿಸಿದ್ದೀರಿ ಎಂದು ಶ್ಲಾಘಿಸಿದರು.ನೂತನ ಅಧ್ಯಕ್ಷ ನ್.ಎಸ್.ಗುಣೇಶ್ ಅವರ ತಂಡಕ್ಕೂ ಸಹ ನೀವು ಪೂರ್ಣ ಸಹಕಾರ ನೀಡಿ ಅವರು ಇನ್ನು ಹೆಚ್ಚಿನ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಜಿಲ್ಲಾ ಮಾಜಿ ರಾಜ್ಯಪಾಲ ಡಾ.ಎನ್.ಕೃಷ್ಣೇಗೌಡ ಉದ್ಘಾಟಿಸಿದರು. ಇದೇ ವೇಳೆ ಅನ್ನಪೂರ್ಣ ಹಸಿವು ನಿವಾರಣೆ ಕಾರ್ಯಕ್ರಮದಲ್ಲಿ ಸಹಕರಿಸಿದ್ದ 15 ಜನರಿಗೆ ಸನ್ಮಾನಿಸಿ, ಗಣ್ಯರನ್ನು ಅಭಿನಂದಿಸಲಾಯಿತು.