ಕನ್ನಡಪ್ರಭ ವಾರ್ತೆ ಮಂಡ್ಯ
ವಿದ್ಯಾರ್ಥಿಯ ಈ ಸಾಧನೆಗೆ ಆದರ್ಶ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕರಾದ ಡಾ.ಮೂರ್ತಿ, ಕಾಲೇಜಿನ ಪ್ರಾಂಶುಪಾಲ ಎಸ್.ಡಿ.ದೊಡ್ಡಾಚಾರ್, ಕಾಲೇಜಿನ ಡೀನ್ ಎಚ್.ಸಿ.ಅಭಿಲಾಷ್, ಕ್ರೀಡಾ ಕಾರ್ಯದರ್ಶಿ ಡಿ.ಸಿ.ಅಭಿಷೇಕ್ ಮತ್ತು ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.
ಭಕ್ತರಿಗೆ ದರ್ಶನ ನೀಡಿದ ಸೀತಾಸಮೇತ ರಾಮಚಂದ್ರಪ್ರಭು ರಥಮೇಲುಕೋಟೆ:
ಶ್ರೀಚೆಲುವನಾರಾಯಣಸ್ವಾಮಿ ದಿವ್ಯಸನ್ನಿಧಿಗೆ ತೆಲಂಗಾಣದ ಭದ್ರಾಚಲಂನ ಸೀತಾಸಮೇತ ರಾಮಚಂದ್ರಪ್ರಭು ದೇವಾಲಯದ ರಥ ಆಗಮಿಸಿ ಭಕ್ತರಿಗೆ ದರ್ಶನ ನೀಡಿತ್ತು.ರಾಮಾನುಜರ ಕರ್ಮಭೂಮಿ ಮೇಲುಕೋಟೆಗೂ ಭದ್ರಾಚಲಂಗೂ ಅವಿನಾಭಾವ ಸಂಪರ್ಕವಿದೆ. ಭದ್ರಾಚಲಂ ರಾಮದಾಸರು ದೇವಾಲಯವನ್ನು ನಿರ್ಮಿಸಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಭಕ್ತಿ ಪ್ರಧಾನವಾದ ಸಾವಿರಾರು ಮೇರು ಕೀರ್ತನೆಗಳನ್ನು ರಚಿಸಿ ಶ್ರೀರಾಮನಿಗೆ ಅರ್ಪಿಸಿದ್ದರು
ಇಂತಹ ಮಹತ್ವದ ದೇವಾಲಯದಿಂದ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಲಾದ ಪ್ರಚಾರ ರಥದೊಂದಿಗೆ ಆಗಮಿಸಿದ ಅಧಿಕಾರಿಗಳು ಮತ್ತು ಅರ್ಚಕರು ಮೇಲುಕೋಟೆಗೆ ಆಗಮಿಸಿ ಚೆಲುವನಾರಾಯಣಸ್ವಾಮಿ ದೇವಾಲಯದಿಂದ ಪೂಜೆಮಾಡಿಸಿ ಭಕ್ತರಿಗೆ ರಾಮಚಂದ್ರನ ದರ್ಶನ ಮಾಡಿಸಿದರು.ರಥದಜೊತೆಗೆ ಆಗಮಿಸಿದ್ದ ಭದ್ರಾಚಲಂ ದೇಗುಲದ ಸಿಇಒ ಮತ್ತು ಅರ್ಚಕರು ಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದೊಡೆಯ ಯೋಗನರಸಿಂಹನ ದರ್ಶನ ಪಡೆದರು. ಭಕ್ತರು ರಥದಿಂದ ಕೇಳಿಬರುತ್ತಿದ್ದ ವೇದಮಂತ್ರ ಹಾಗೂ ಭದ್ರಚಲರಾಮದಾಸರ ಕರ್ನಾಟಕ ಶಾಸ್ತ್ರೀಯ ಸಂಗೀತ ಕೀರ್ತನೆಯೊಂದಿಗೆ ಸೀತಾಮಾತೆಯೊಂದಿಗೆ ವಿರಾಜಮಾನನಾಗಿದ್ದ ರಾಮಚಂದ್ರನ ದರ್ಶನಪಡೆದು ಪುಳಕಿತರಾದರು.