ಕನ್ನಡಪ್ರಭ ವಾರ್ತೆ ಪಾವಗಡ
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ದೂರಿನ ಮೇರೆಗೆ ದಾಖಲೆ ಪರಿಶೀಲಿಸುವ ಹಿನ್ನೆಲೆಯಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ್ದ ಲೇಔಟ್ ಅನುಮೋದನೆ ಮಂದೂಡಲಾಗಿದೆ. ಇದನ್ನೆ ನೆಪ ಮಾಡಿಕೊಂಡ ಗ್ರಾಪಂ ಸದಸ್ಯ ಗೋರಸ್ ಮಾವು ಹನುಮಂತರಾಯಪ್ಪ ಕಳೆದ 8ದಿನಗಳಿಂದ ಕೈಗೊಂಡಿರುವ ಮುಷ್ಕರದಿಂದ ಸಾರ್ವಜನಿಕರಿಗೆ ಲಾಭವಾಗುವಂತದಲ್ಲ ಜೊತೆಗೆ ಇದು ಸಾರ್ವಜನಿಕ ಸಮಸ್ಯೆಯೂ ಅಲ್ಲ ಎಂದು ಅಧ್ಯಕ್ಷೆ ರೂಪನಾಗರಾಜ್ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದರು.
ಸರ್ಕಾರದ ವಿವಿಧ ಯೋಜನೆ ಅಡಿಯಲ್ಲಿ ತಾಲೂಕಿನ ರೊಪ್ಪ ಗ್ರಾಪಂ ಪ್ರಗತಿಗೆ ವಿಶೇಷ ಒತ್ತು ನೀಡಲಾಗಿದೆ. ಗ್ರಾಪಂ ಪ್ರಗತಿ ದತ್ತ ಸಾಗುತ್ತಿದ್ದು ಇದನ್ನು ಸಹಿಸದ ಸದಸ್ಯ ಹನುಮಂತರಾಯಪ್ಪ ಮುಷ್ಕರ ಕೈಗೊಳ್ಳುವ ಮೂಲಕ ರೊಪ್ಪ ಗ್ರಾಪಂಗೆ ಕೆಟ್ಟಹೆಸರು ತರುವ ಕೆಲಸದಲ್ಲಿ ನಿರತರಾಗಿದ್ದು ಅವರು ಕೈಗೊಂಡ ಮುಷ್ಕರ ಕುತಂತ್ರದ ಭಾಗವಾಗಿದೆ ಎಂದು ದೂರಿದರು.ರೊಪ್ಪ ಗ್ರಾಮ ವ್ಯಾಪ್ತಿಯ ಖಾಸಗಿ ವ್ಯಕ್ತಿಗೆ ಸೇರಿದ್ದ ಲೇ ಔಟ್ ಮಂಜೂರಾತಿ ಕುರಿತು ತೀರ್ಮಾನ ಕೈಗೊಳ್ಳಲು ವಿಷಯವನ್ನು ಮುಂದಿನ ಸಭೆಗೆ ಮುಂದೂಡಲಾಗಿತ್ತು. ಇದೇ ನೆಪ ಮಾಡಿಕೊಂಡ ಸದಸ್ಯ ಹನುಮಂತರಾಯಪ್ಪ ಮುಷ್ಕರ ನಡೆಸುತ್ತಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ತನಿಖೆ ನಡೆಸಿದ್ದಾರೆ.ಅಂತಹ ಅವ್ಯವಹಾರ ನಡೆದಿದ್ದರೆ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.