ಹನೂರಿನ ಏಕೈಕ ಸಾರ್ವಜನಿಕ ಶೌಚಾಲಯವೂ ಬಂದ್‌

KannadaprabhaNewsNetwork |  
Published : Aug 12, 2024, 01:05 AM IST
ಹನೂರಿನ ಏಕೈಕ ಸಾರ್ವಜನಿಕ  ಶೌಚಾಲಯವೂ ಬಂದ್‌ | Kannada Prabha

ಸಾರಾಂಶ

ಪಟ್ಟಣ ಪಂಚಾಯಿತಿ ಸನಿಹದಲ್ಲೇ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪಟ್ಟಣದ ಸಾರ್ವಜನಿಕ ಶೌಚಾಲಯ ಗುಂಡಿಯಲ್ಲಿ ಮಲ ತುಂಬಿರುವುದರಿಂದ ಶೌಚಾಲಯದ ಬಾಗಿಲು ಮುಚ್ಚಿ ಬಂದ್ ಮಾಡಲಾಗಿದೆ. ಇದರಿಂದಾಗಿ ಈ ಭಾಗದ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ತೆರಳುವ ಸಾರ್ವಜನಿಕರಿಗೆ ಹಾಗೂ ದಿನನಿತ್ಯ ನೂರಾರು ವಾಹನಗಳಲ್ಲಿ ಬಂದು ಹೋಗುವವರು ಶೌಚಕ್ಕಾಗಿ ಪರದಾಡುವಂತಹ ಸ್ಧಿತಿ ನಿರ್ಮಾಣವಾಗಿದೆ.

ಜಿ.ದೇವರಾಜ ನಾಯ್ಡು

ಕನ್ನಡಪ್ರಭ ವಾರ್ತೆ ಹನೂರು

ಪಟ್ಟಣ ಪಂಚಾಯಿತಿ ಸನಿಹದಲ್ಲೇ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪಟ್ಟಣದ ಸಾರ್ವಜನಿಕ ಶೌಚಾಲಯ ಗುಂಡಿಯಲ್ಲಿ ಮಲ ತುಂಬಿರುವುದರಿಂದ ಶೌಚಾಲಯದ ಬಾಗಿಲು ಮುಚ್ಚಿ ಬಂದ್ ಮಾಡಲಾಗಿದೆ. ಇದರಿಂದಾಗಿ ಈ ಭಾಗದ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ತೆರಳುವ ಸಾರ್ವಜನಿಕರಿಗೆ ಹಾಗೂ ದಿನನಿತ್ಯ ನೂರಾರು ವಾಹನಗಳಲ್ಲಿ ಬಂದು ಹೋಗುವವರು ಶೌಚಕ್ಕಾಗಿ ಪರದಾಡುವಂತಹ ಸ್ಧಿತಿ ನಿರ್ಮಾಣವಾಗಿದೆ.

ಅನೈರ್ಮಲ್ಯ: ಪಟ್ಟಣ ಪಂಚಾಯಿತಿ ಮೆಟ್ಟಿಲು ಬಳಿಯೇ ಬರುವ ಈ ಸಾರ್ವಜನಿಕ ಶೌಚಾಲಯದ ಶೌಚದ ಗುಂಡಿ ಮಲ ತುಂಬಿಕೊಂಡಿದ್ದು, ಅದನ್ನು ಸ್ವಚ್ಛತೆಗೊಳಿಸದೆ ಬಾಗಿಲು ಮುಚ್ಚಲಾಗಿದೆ. ಇದರಿಂದ ಶೌಚದ ಸುತ್ತಲೂ ಇರುವ ಕಸ, ಕಡ್ಡಿ, ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳಿಂದ ಸಂಗ್ರಹವಾಗಿ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿ ಗಬ್ಬುನಾರಿ, ರೋಗ ರುಜಿನಿಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ.

ಸ್ವಚ್ಛತೆಗೆ ಅಗ್ರಹ: ಪಟ್ಟಣದ ಸಾರ್ವಜನಿಕ ಶೌಚಾಲಯ ಹಾಗೂ ಪಟ್ಟಣ ಪಂಚಾಯತಿ ಸನಿಹದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದಿರುವುದರಿಂದ ಪ್ಲಾಸ್ಟಿಕ್, ಕಸ, ಕಡ್ಡಿ ತ್ಯಾಜ್ಯಸಂಗ್ರಹವಾಗಿ ಕೊಳಚೆ ನೀರು ನಿಂತು ಗಬ್ಬುನಾರುತ್ತಿದೆ. ಇದು ಬಂದ್ ಆಗಿರುವುದರಿಂದ ದಿನನಿತ್ಯ ಪಟ್ಟಣಕ್ಕೆ ಸುತ್ತ ಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಸಾರ್ವಜನಿಕರಿಗೆ ಶೌಚಕ್ಕೆ ತೀವ್ರ ತೊಂದರೆಯಾಗಿದ್ದು, ಕೂಡಲೇ ಸ್ವಚ್ಛಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಡೆಂಘೀ, ಚಿಕ್ಯೂನ್ ಗುನ್ಯಾ ಇನ್ನಿತರ ಮಹಾಮಾರಿಯಿಂದ ಹಲವಾರು ಜನ ಸಾವನ್ನಪ್ಪಿದ್ದು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಇತ್ತ ಗಮನ ಹರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಶೌಚ ಸುಚಿತ್ವಗೊಳಿಸಿ ಅನೈರ್ಮಲ್ಯದಿಂದ ಕೂಡಿರುವ ತ್ಯಾಜ್ಯ ಹಾಗೂ ಕೊಳಚೆ ನೀರನ್ನು ತೆರವುಗೊಳಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. ಪಟ್ಟಣದ ಕೇಂದ್ರ ಸ್ಥಾನವಾದ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಶೌಚಾಲಯ ತುಂಬಿ ಬಾಗಿಲು ಮುಚ್ಚಿದೆ. ಹೀಗಾಗಿ ಸುತ್ತಲೂ ತ್ಯಾಜ್ಯಗಳು ಸಂಗ್ರಹವಾಗಿ ಕೊಳಚೆ ನೀರು ನಿಂತು ರೋಗರುಜಿನಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಕೂಡಲೇ ಸ್ವಚ್ಛಗೊಳಿಸಲು ಸಂಬಂಧಪಟ್ಟವರು ಮುಂದಾಗಬೇಕು.

ಬಸವರಾಜು, ಮಾಜಿ ಉಪಾಧ್ಯಕ್ಷ, ಪಟ್ಟಣ ಪಂಚಾಯಿತಿ ಹನೂರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''