ಜಿ ದೇವರಾಜ ನಾಯ್ಡು
ತಾಲೂಕು ಕೇಂದ್ರವಾಗಿ ದಶಕ ಕಳೆದರೂ ಕೇಂದ್ರ ಸ್ಥಾನದಲ್ಲಿ ಭೂಮಾಪನ ಕಚೇರಿ ತೆರೆಯದೆ ನೂರಾರು ಕಿ.ಮೀ ಹೋಗಿ ಬರಬೇಕಾದ ಪರಿಸ್ಥಿತಿ ರೈತರಿಗೆ ಉಂಟಾಗಿದೆ.
ಹನೂರು ನೂತನ ತಾಲೂಕು ರಚನೆಯಾಗಿ ಈ ಹಿಂದೆ ಇದ್ದಂತ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವಧಿಯಲ್ಲಿ 2013-14ನೇ ಸಾಲಿನಲ್ಲಿ ತಾಲೂಕು ರಚನೆಯಾಗಿ ಪಟ್ಟಣದ ಹೆಚ್ಚುವರಿ ತಹಸೀಲ್ದಾರ್ ಕಚೇರಿ ಹಾಗೂ ಪಡಸಾಲೆ ವಿವಿಧ ಕಚೇರಿಗಳು ತೆರೆಯಲಾಗಿದ್ದು, ನಂತರ ಜನವರಿ 2018ರಲ್ಲಿ ತಾಲೂಕು ಅಧಿಕೃತವಾಗಿ ಘೋಷಣೆಗೊಂಡು ಸರ್ಕಾರಿ ಕಚೇರಿಗಳು ಪಟ್ಟಣದಲ್ಲಿ ಒಂದೊಂದಾಗಿ ತೆರೆಯುತ್ತಿದ್ದರೂ ಸಹ ಭೂಮಾಪನ ಕಚೇರಿ ತೆರೆಯದೆ ರೈತರು ತಮ್ಮ ಜಮೀನಿನ ದಾಖಲೆಗಳಿಗಾಗಿ ಕೊಳ್ಳೇಗಾಲಕ್ಕೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.ಭೂಮಾಪನ ಕಚೇರಿ ಬೇಡಿಕೆ:
ದಾಖಲೆ ಪಡೆಯಲು ಅಲೆದಾಟ:
ತಾಲೂಕು ಕೇಂದ್ರದಲ್ಲೇ ವ್ಯವಸ್ಥೆಗೆ ಆಗ್ರಹ:
ರೈತರು ತಮ್ಮ ಜಮೀನಿಗೆ ಸಂಬಂಧಿಸಿದಂತೆ ದಾಖಲೆ ಪಡೆಯಲು ಗೋಪಿನಾಥಂ, ಮಲೆಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲಕ್ಕೆ 150 ಕಿ.ಮೀ ದೂರ ಇರುವುದರಿಂದ ತೊಂದರೆಯಾಗಿದ್ದು ಇತ್ತ ಕಡೆ ಬೈಲೂರಿನಿಂದ ಕೊಳ್ಳೇಗಾಲಕ್ಕೆ 70 ಕಿ.ಮೀ, ಮತ್ತೊಂದೆಡೆ ಗಾಣಿಗಮಂಗಲದಿಂದ ಕೊಳ್ಳೇಗಾಲಕ್ಕೆ 60 ಕಿ.ಮೀ ದೂರದಲ್ಲಿದೆ. ಪಟ್ಟಣದಲ್ಲಿ ಕಚೇರಿ ತೆರೆದರೆ ಎಲ್ಲಾ ದಾಖಲೆಗಳು ಒಂದೇ ಸೂರಿನಡಿ ಅಗತ್ಯ ದಾಖಲೆಗಳನ್ನು ಪಡೆಯಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸುವಂತೆ ರೈತರು ಒತ್ತಾಯಿಸಿದ್ದಾರೆಮಜರೆ, ಕಂದಾಯ ಗ್ರಾಮಗಳು:
ಪ್ರತ್ಯೇಕ ತಾಲೂಕಿಗೆ ಬೇಕಾಗಿದೆ ಅಧಿಕಾರಿ ವರ್ಗ:
ದೊಡ್ಡ ತಾಲೂಕು ಆಗಿರುವುದರಿಂದ ಇಲ್ಲಿಗೆ ಭೂಮಾಪನ ಇಲಾಖೆಯ ಎಡಿಎಲ್ಆರ್, ಸೂಪರಿಡೆಂಟ್ ಮತ್ತು ತಾಲೂಕಿನ ಜಮೀನುಗಳನ್ನು ಅಳತೆ ಮಾಡಿ ತುರ್ತಾಗಿ ರೈತರಿಗೆ ಕೆಲಸ ಮಾಡಲು ಭೂಮಾಪನ ಸರ್ವೆಯರ್ಗಳನ್ನು ನೇಮಕ ಮಾಡಬೇಕಾಗಿದೆ. ಜನಪ್ರತಿನಿಧಿಗಳ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಭಾಗದ ರೈತರು ನೂರಾರು ಕಿ.ಮೀ ಕೊಳ್ಳೇಗಾಲಕ್ಕೆ ಹೋಗಬೇಕಾಗಿರುವುದರಿಂದ ಸಂಬಂಧಪಟ್ಟವರು ಕೂಡಲೇ ಕ್ರಮವಹಿಸಿ ಭೂಮಾಪನ ಕಚೇರಿ ತೆರೆದು ಅಧಿಕಾರಿ ಮತ್ತು ಸಿಬ್ಬಂದಿ ನೇಮಕ ಮಾಡಬೇಕಾಗಿದೆ.ದೊಡ್ಡ ತಾಲೂಕು ಹಾಗೂ ಬೆಟ್ಟಗುಡ್ಡಗಳಿಂದ ವಿಸ್ತಾರವಾದ ತಾಲೂಕಿಗೆ ಬೇಕಾಗಿದೆ ಪ್ರತ್ಯೇಕ ಭೂಮಾಪನ ಕಚೇರಿ. ರೈತರಿಗೆ ಬೇಕಾದ ದಾಖಲಾತಿ ಪಡೆಯಲು ಇಲ್ಲಿನ ಸಮಸ್ಯೆ ಅರಿತು ಜನಪ್ರತಿನಿಧಿಗಳು, ಅಧಿಕಾರಿಗಳು ಪಟ್ಟಣದ ಕೇಂದ್ರ ಸ್ಥಾನದಲ್ಲಿ ಕಚೇರಿ ತೆರೆದು ಅಧಿಕಾರಿ ವರ್ಗ ನೇಮಕ ಮಾಡಿ ರೈತರು ಕೊಳ್ಳೇಗಾಲಕ್ಕೆ ಅಲೆಯುವುದನ್ನು ತಪ್ಪಿಸಲು ಕ್ರಮ ವಹಿಸಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರು ಸಂಘ ಸಂಸ್ಥೆಗಳ ಜೊತೆ ಸಂಘಟನೆಯ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ.-ಹೊನ್ನೂರ್ ಪ್ರಕಾಶ್, ಹಸಿರುಸೇನೆ ಜಿಲ್ಲಾಧ್ಯಕ್ಷ
-ಗುರುಪ್ರಸಾದ್, ಹನೂರು ತಾಲೂಕು ದಂಡಾಧಿಕಾರಿ,ಪಟ್ಟಣದಲ್ಲಿ ಭೂಮಾಪನ ಕಚೇರಿ ತೆರೆಯಲು ನಿವೇಶನ ಸಮಸ್ಯೆ ಇದ್ದು ಸರ್ಕಾರಿ ಕಚೇರಿ ನೀಡಿದರೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಚರ್ಚಿಸಿ ಕ್ರಮವಹಿಸಲಾಗುವುದು. ತಾಲೂಕು ದಂಡಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.-ವಿದ್ಯಾಯಿನಿ, ಡಿಡಿಎಲ್ ಭೂಮಾಪನ ಇಲಾಖೆ ಚಾಮರಾಜನಗರ.
ಭೂಮಾಪನ ಕಚೇರಿ ತೆರೆಯಲು ಶಾಸನ ಸಭೆಯಲ್ಲಿ ಸಹ ಚರ್ಚಿಸಲಾಗಿದೆ. ಸಂಬಂಧಿಸಿದ ಸಚಿವರು ಹಾಗೂ ಇಲಾಖೆಗೆ ಪತ್ರ ವ್ಯವಹಾರ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಭೂಮಾಪನ ಕಚೇರಿ ತೆರೆದು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು.-ಎಂ.ಆರ್. ಮಂಜುನಾಥ್, ಹನೂರು ಶಾಸಕರು