ಕುಷ್ಟಗಿ: ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ಕುಷ್ಟಗಿ ತಾಲೂಕಿನಲ್ಲಿರುವ ಶಾದಿ ಮಹಲ್ಗಳಿಗೆ ಅನುದಾನ ತರುವ ವಿಚಾರವಾಗಿ ಸಣ್ಣತನದ ರಾಜಕಾರಣ ಮಾಡಬಾರದು, ಇದು ಅವರ ಘನತೆ, ವ್ಯಕ್ತಿತ್ವಕ್ಕೆ ಶೋಭೆ ಅಲ್ಲ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಬಾದಾಮಿ ಮಾತನಾಡಿ, ನಮ್ಮ ಪಕ್ಷದ ಬೆಂಬಲಿಗರು ಅನುದಾನವನ್ನು ಶಾಸಕ ದೊಡ್ಡನಗೌಡ ಪಾಟೀಲ ಹಾಕಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರೆ ಅವರಿಗೆ ಬೆದರಿಕೆ ಹಾಕಿಸಿರುವುದು ಖಂಡನೀಯ. ಇಂತಹ ಚಿಲ್ಲರೆ ರಾಜಕಾರಣ ಮಾಡಬಾರದು, ತಾವು ರಾಜ್ಯಮಟ್ಟದ ರಾಜಕಾರಣಿ, ಸ್ಥಳೀಯ ಬೆಂಬಲಿಗರ ಮೇಲೆ ಬೆದರಿಕೆ ಹಾಕಿಸುವುದು, ದೌರ್ಜನ್ಯ ಮಾಡಿಸುವದನ್ನು ಕೈ ಬಿಡಬೇಕು ಎಂದರು.
ಲಾಡಸಾಬ್ ಕೊಳ್ಳಿ ಮಾತನಾಡಿ, ಕುಷ್ಟಗಿ ತಾಲೂಕಿನ ಶಾದಿಮಹಲ್ಗಳಿಗೆ ಅನುದಾನ ನೀಡುವಂತೆ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಸುಮಾರು ಒಂದು ವರ್ಷಗಳ ಕಾಲ ಒತ್ತಡ ಹಾಕುತ್ತಾ ಬಂದಿದ್ದು, ಅದು ಈಗ ನೆರವೇರಿದೆ. ಆದರೆ ಕಾಡಾ ನಿಗಮ ಅಧ್ಯಕ್ಷ ಹಸನಸಾಬ್ ದೋಟಿಹಾಳ ಅವರು ಸತ್ಯ ಹೇಳಲು ಮುಂದಾದರೆ ಮಕ್ಕಳು ಹಾಗೂ ಬೆಂಬಲಿಗರಿಂದ ಬೆದರಿಕೆ ಹಾಕಿಸುವ ಕಾರ್ಯ ಮಾಡುತ್ತಿದ್ದಾರೆ. ಸುಮಾರು 25 ವರ್ಷಗಳಿಂದ ದೋಟಿಹಾಳ ಗ್ರಾಮದಲ್ಲಿ ಶಾದಿ ಮಹಲ್ ನಿರ್ಮಾಣದ ಕೆಲಸ ನಡೆದಿದೆ. ಹಲವು ಅನುದಾನ ಬಂದಿದೆ, ಈ ಕುರಿತು ಯಾವ ಲೆಕ್ಕ ಕೊಟ್ಟಿಲ್ಲ ಕೂಡಲೇ ಲೆಕ್ಕ ಕೊಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಅಶೋಕ ಬಳೂಟಗಿ, ಬಸವರಾಜ ಹಳ್ಳೂರು, ನಬಿಸಾಬ ಇಲಕಲ್, ಅಮಿನುದ್ದೀನ್ ಮುಲ್ಲಾ ಸೇರಿದಂತೆ ಅನೇಕರು ಇದ್ದರು.