;Resize=(412,232))
ಕೆ.ಎಂ.ಮಂಜುನಾಥ
1952ರ ಮೊದಲ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟೇಕೂರು ಸುಬ್ರಮಣ್ಯಂ ಹಾಗೂ ಕೈ ಪಕ್ಷದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದ ಬಸವರಾಜೇಶ್ವರಿ ಸತತ ಮೂರು ಬಾರಿ ಗೆಲುವು ಪಡೆದು ಮತದಾರರ ಮನ ಗೆದ್ದ ನಾಯಕರೆನಿಸಿದ್ದಾರೆ.
ಗಾಂಧಿ ತತ್ವಕ್ಕಾಗಿ, ಕಾಂಗ್ರೆಸ್ಸಿಗಾಗಿ, ನಾಡಿನ ಸ್ವಾತಂತ್ರ್ಯಕ್ಕಾಗಿ ಅಪಾರ ಶ್ರಮಿಸಿದವರ ಪೈಕಿ ಅಗ್ರಪಂಕ್ತಿಗೆ ಸೇರಿದ ಟೇಕೂರು ಸುಬ್ರಮಣ್ಯಂ ಅವರನ್ನು ಸಂಸತ್ ಸದಸ್ಯರನ್ನಾಗಿಸಲು ಕಾಂಗ್ರೆಸ್ ನಿರ್ಧರಿಸುತ್ತದೆ. ನಿರೀಕ್ಷೆಯಂತೆಯೇ ಕಾಂಗ್ರೆಸ್ನ ಟೇಕೂರು ಅವರು ಪಕ್ಷೇತರ ಅಭ್ಯರ್ಥಿ ವೈ.ಮಹಾಬಲೇಶ್ವರಪ್ಪ ವಿರುದ್ಧ ಜಯ ದಾಖಲಿಸುತ್ತಾರೆ. ಇಡೀ ದೇಶದಲ್ಲಿಯೇ ಕಾಂಗ್ರೆಸ್ ಪಕ್ಷವಷ್ಟೇ ಮುನ್ನೆಲೆಯಲ್ಲಿದ್ದ ಆ ದಿನಗಳಲ್ಲಿ ಟೇಕೂರು ಗೆಲುವು ಸಹಜ ಎನಿಸಿಕೊಳ್ಳುತ್ತದೆ.1957 ಮತ್ತು 1962ರ ಚುನಾವಣೆಯಲ್ಲೂ ಟೇಕೂರು ಸುಬ್ರಮಣ್ಯಂ ಕಾಂಗ್ರೆಸ್ನಿಂದ ಸ್ಪರ್ಧಿಸಿ ಜಯ ದಾಖಲಿಸುತ್ತಾರೆ. 1957ರಲ್ಲೂ ವೈ.ಮಹಾಬಲೇಶ್ವರಪ್ಪ ಅವರೇ ಟೇಕೂರು ವಿರುದ್ಧ ಸ್ಪರ್ಧಿಸಿದರೆ, 1962ರಲ್ಲಿ ಸ್ವತಂತ್ರ ಪಕ್ಷದ ಅಭ್ಯರ್ಥಿ ಜೆ.ಮಹ್ಮದ್ ಇಮಾಮ್ ಅವರು ಟೇಕೂರು ವಿರುದ್ಧ ಸೋಲನುಭವಿಸುತ್ತಾರೆ. ಮೂರು ಬಾರಿ ಸತತ ಗೆಲುವಿನ ಬಳಿಕ ಟೇಕೂರು ಸುಬ್ರಮಣ್ಯಂ ಚುನಾವಣೆ ರಾಜಕೀಯದಿಂದ ದೂರ ಸರಿಯುತ್ತಾರೆ.
ಈ ಚುನಾವಣೆಯಲ್ಲಿ ಬಸವರಾಜೇಶ್ವರಿ 76,085 ಮತಗಳ ಅಂತರದ ಗೆಲುವು ದಾಖಲಿಸುತ್ತಾರೆ. 1991ರ ಚುನಾವಣೆಯಲ್ಲಿ ಕಾಂಗ್ರೆಸ್ನ ಬಸವರಾಜೇಶ್ವರಿ ವಿರುದ್ಧ ಜನತಾದಳ ಪಕ್ಷದ ಅಭ್ಯರ್ಥಿ ವೈ.ನೆಟ್ಟಕಲ್ಲಪ್ಪ ಸ್ಪರ್ಧಿಸಿ, 65,981 ಮತಗಳ ಅಂತರದ ಸೋಲನುಭವಿಸುತ್ತಾರೆ. ಮೂರು ಬಾರಿ ಗೆಲುವು ಪಡೆದು ಸಂಸತ್ ಸದಸ್ಯೆಯಾಗಿ ಸೇವೆ ಸಲ್ಲಿಸಿದ ಬಸವರಾಜೇಶ್ವರಿ ಬಳಿಕ ಚುನಾವಣೆಯಿಂದ ದೂರ ಸರಿಯುತ್ತಾರೆ.
ನಾಲ್ಕು ಬಾರಿ ಸ್ಪರ್ಧಿಸಿಯೂ ಒಮ್ಮೆಯೂ ಗೆಲುವು ಪಡೆಯದ ಹಿರಿಯ ವಕೀಲ ಎನ್.ತಿಪ್ಪಣ್ಣ ಸೋತರೂ ಛಲಬಿಡದೇ ಕಾಂಗ್ರೆಸ್ ವಿರುದ್ಧ ಅಖಾಡದಲ್ಲಿದ್ದರು. 1996ರ ಚುನಾವಣೆಯಲ್ಲಿ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್.ತಿಪ್ಪಣ್ಣ ಕಾಂಗ್ರೆಸ್ನ ಕೆ.ಸಿ.ಕೊಂಡಯ್ಯ ವಿರುದ್ಧ ಬರೀ 4519 ಮತಗಳ ಅಂತರದಲ್ಲಿ ಸೋಲನುಭವಿಸುತ್ತಾರೆ.