ಬದುಕಿನ ಬಗ್ಗೆ ಒಳ್ಳೆಯ ಚಿಂತನೆಯಿರಲಿ

KannadaprabhaNewsNetwork |  
Published : May 02, 2026, 03:00 AM IST
ಗವಿಸಿದ್ದೇಶ್ವರ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಗೋಕಾಕ ಬಸವಣ್ಣನವರು ಶತಶತಮಾನದ ಹಿಂದೆ ಕಲ್ಯಾಣದ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು. ಬಿಜ್ಜಳ ರಾಜ ಮಣ್ಣಿನ ಸಾಮ್ರಾಟನಾಗಿದ್ದರೆ, ಬಸವಣ್ಣ ಹೃದಯ ಸಾಮ್ರಾಟನಾಗಿದ್ದರು. ಬಸವಣ್ಣ ಜಗತ್ತಿನ ಜನರ ಹೃದಯ ಸಿಂಹಾಸನದ ಮೇಲೆ ಕುಳಿತಿದ್ದಾರೆ. ಎಲ್ಲರೂ ಕಾಲ ಕೆಟ್ಟಿದೆ ಎನ್ನುತ್ತಾರೆ. ಆದರೆ, ಕಾಲ ಕೆಟ್ಟಿಲ್ಲ, ಕಟ್ಟೆಯ ಮೇಲೆ ಕುಳಿತು ಮಾತನಾಡುವವರ ತಲೆ ಕೆಟ್ಟೈತಿ ಎಂದು ಕೊಪ್ಪಳ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಬಸವಣ್ಣನವರು ಶತಶತಮಾನದ ಹಿಂದೆ ಕಲ್ಯಾಣದ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು. ಬಿಜ್ಜಳ ರಾಜ ಮಣ್ಣಿನ ಸಾಮ್ರಾಟನಾಗಿದ್ದರೆ, ಬಸವಣ್ಣ ಹೃದಯ ಸಾಮ್ರಾಟನಾಗಿದ್ದರು. ಬಸವಣ್ಣ ಜಗತ್ತಿನ ಜನರ ಹೃದಯ ಸಿಂಹಾಸನದ ಮೇಲೆ ಕುಳಿತಿದ್ದಾರೆ. ಎಲ್ಲರೂ ಕಾಲ ಕೆಟ್ಟಿದೆ ಎನ್ನುತ್ತಾರೆ. ಆದರೆ, ಕಾಲ ಕೆಟ್ಟಿಲ್ಲ, ಕಟ್ಟೆಯ ಮೇಲೆ ಕುಳಿತು ಮಾತನಾಡುವವರ ತಲೆ ಕೆಟ್ಟೈತಿ ಎಂದು ಕೊಪ್ಪಳ ಅಭಿನವ ಗವಿಸಿದ್ಧೇಶ್ವರ ಸ್ವಾಮಿಜಿ ಹೇಳಿದರು.ತಾಲೂಕಿನ ಬೆಟಗೇರಿ ಗ್ರಾಮಸ್ಥರ ಸಹಯೋಗದಲ್ಲಿ ಬಸವ ಜಯಂತಿ ಹಾಗೂ 775 ವರ್ಷ ಬಾಳಿದ ಹೊಸಳ್ಳಿ ಮಹಾತಪಸ್ವಿ ಜಗದ್ಗುರು ಬೂದೀಶ್ವರ ಮಹಾಶಿವಯೋಗಿಗಳ ಶಿಲಾ ಮಂಟಪ ಲೋಕಾರ್ಪಣೆ ನಿಮಿತ್ತ ಬೆಟಗೇರಿ ಗ್ರಾಮದಲ್ಲಿ ನಡೆದ ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳ ಆಧ್ಯಾತ್ಮಿಕ ಪ್ರವಚನದ ಮಂಗಲ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ನಾವು ಬದುಕಿನ ಕುರಿತು ಒಳ್ಳೆಯ ಚಿಂತನೆ ಮಾಡಬೇಕು. ಮನುಷ್ಯ ಪುಣ್ಯ ಮತ್ತು ಧರ್ಮದ ಕೆಲಸ ಮಾಡಬೇಕು ಎಂದರು.

ಧನ ಮತ್ತು ಕೀರ್ತಿ ಸಂಪತ್ತು ಉಳಿಯುವುದಿಲ್ಲ. ಸಂಪತ್ತು ಯಾರ ಹತ್ತಿರ ಉಳಿಯುವುದಿಲ್ಲ, ಜೀವನ ಕ್ಷಣಿಕವಾಗಿದೆ. ಉಸಿರು ತೆಗೆದುಕೊಂಡರೆ ಹುಟ್ಟು, ಉಸಿರು ಬಿಟ್ಟರೆ ಸಾವು. ಯಾರ ಹೃದಯ ಸ್ವಚ್ಛವಿದೆ ಅವರ ಹೃದಯದೊಳಗೆ ದೇವರು ಇರುತ್ತಾನೆ. ಕರ್ತೃನೊಬ್ಬನೇ ದೇವ. ಭೂಮಿ ಮೇಲಿನ ಮೂರು ರತ್ನಗಳು ಅನ್ನ, ನೀರು, ಒಳ್ಳೆಯ ಎರಡು ಮಾತು. ಧರ್ಮ ಎಂದರೆ ಒಳ್ಳೆಯ ಕೆಲಸ, ನಾಲಿಗೆ ಮೇಲೆ ಎರಡು ಒಳ್ಳೆಯ ಮಾತು, ಹೃದಯದೊಳೆಗೆ ದೇವರ ನೆನೆಪು ಇರಬೇಕು ಎಂದು ಹೇಳಿದರು.ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ, ಬಳಗಾನೂರ ಶಿವಶಾಂತವೀರ ಸ್ವಾಮೀಜಿ ಮಾತನಾಡಿದರು. ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಮಲ್ಲಿಕಾರ್ಜುನ ಕೊಡಗನೂರ ತಬಲಾ ಸಾಥ್‌, ಕಲ್ಲೂರದ ಶಂಕರಯ್ಯ ಗುರುಮಠ ಸಂಗೀತ ಸೇವೆ ನಡೆಯಿತು. ಈ ವೇಳೆ ಈಶ್ವರ ಬಳಿಗಾರ, ಶ್ರೀಧರ ದೇಯಣ್ಣವರ, ಬಸವರಾಜ ಪಣದಿ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ದುಂಡಪ್ಪ ಮಾಳೇದ, ಮಲ್ಲಪ್ಪ ಪಣದಿ, ಬಾಳಪ್ಪ ಕನೋಜಿ, ನಿಂಗಪ್ಪ ಕಂಬಿ, ದುಂಡಪ್ಪ ಕಂಬಿ, ಈರಣ್ಣ ಬಳಿಗಾರ, ಈರಪ್ಪ ದೇಯಣ್ಣವರ, ಯಲ್ಲಪ್ಪ ಮೇಳೆಣ್ಣವರ, ಸುರೇಶ ನೀಲಣ್ಣವರ, ಭೀಮನಾಯ್ಕ ನಾಯಕರ, ಭರಮಣ್ಣ ಪೂಜೇರ ಸೇರಿ ಸ್ಥಳೀಯರು ಹಾಗೂ ಪ್ರವಚನ ಆಯೋಜನೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಅಪಾರ ಸಂಖ್ಯೆಯಲ್ಲಿ ಭಕ್ತ ಜನ ಸಮೂಹ ಈ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ಹಸಿವಿದ್ದಾಗ ಒಕ್ಕಲುತನ ಪ್ರಗತಿ ಸಾಧ್ಯ
ಸಣ್ಣ ನೀರಾವರಿ ಯೋಜನೆ ದೇಶಕ್ಕೆ ಮಾದರಿ