ಎಚ್‌.ಡಿ.ರೇವಣ್ಣರ ಮನಸ್ಸು ಹೂವಿನ ರೀತಿ ಇದ್ದಂತೆ: ಶಾಸಕ ಸ್ವರೂಪ್‌ ಪ್ರಕಾಶ್‌

KannadaprabhaNewsNetwork |  
Published : May 14, 2024, 01:05 AM IST
13ಎಚ್ಎಸ್ಎನ್9 : ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸ್ವರೂಪ್. | Kannada Prabha

ಸಾರಾಂಶ

ಎಚ್.ಡಿ.ರೇವಣ್ಣರ ವಿಚಾರವಾಗಿ ರಾಜ್ಯ ಸರ್ಕಾರದ ನಡೆ ಸರಿಯಿಲ್ಲ. ಅವರ ಮನಸ್ಸು ಹೂವಿನಂತೆ. ಹಾಗಾಗಿ ಪೆನ್‌ಡ್ರೈವ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕ್ಷೇತ್ರದ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಆಗ್ರಹಿಸಿದರು. ಹಾಸನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು.

ಅತ್ಯಾಚಾರ ಆರೋಪ । ಅಶ್ಲೀಲ ವಿಡಿಯೋವಿನ ಪೆನ್‌ಡ್ರೈವ್‌ ಪ್ರಕರಣ ಸಿಬಿಐಗೆ ಒಪ್ಪಿಸಿ

ಕನ್ನಡಪ್ರಭ ವಾರ್ತೆ ಹಾಸನ

ಎಚ್.ಡಿ.ರೇವಣ್ಣರ ವಿಚಾರವಾಗಿ ರಾಜ್ಯ ಸರ್ಕಾರದ ನಡೆ ಸರಿಯಿಲ್ಲ. ಅವರ ಮನಸ್ಸು ಹೂವಿನಂತೆ. ಹಾಗಾಗಿ ಪೆನ್‌ಡ್ರೈವ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕ್ಷೇತ್ರದ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿ, ‘ಪೆನ್‌ಡ್ರೈವ್ ವಿಚಾರವಾಗಿ ರೇವಣ್ಣ ಅವರನ್ನು ಜೈಲಿಗೆ ಹಾಕಿದ್ದು, ಪ್ರಜಾಪ್ರಭುತ್ವದಲ್ಲಿ ದೂರು ದಾಖಲಿಸಿದ ಒಂದೇ ದಿನದಲ್ಲಿ ಜೈಲಿಗೆ ಕಳುಹಿಸಿರುವುದು ನಮಗೆಲ್ಲಾ ಬೇಸರದ ಸಂಗತಿ. ರಾಜ್ಯ ಸರ್ಕಾರವು ಶೀಘ್ರದಲ್ಲಿಯೇ ಪ್ರಕರಣವನ್ನು ಹೊರ ತೆಗೆಯಬೇಕೆಂದು ಮನವಿ ಮಾಡುತ್ತೇನೆ. ನಾನು ನಾಲ್ಕು ದಿನ ಹೊರಗೆ ಹೋಗಿರುವುದಾಗಿ ಈಗಾಗಲೇ ಅಪಹರಣವಾಗಿದ್ದ ಮಹಿಳೆ ಹೇಳಿಕೆ ನೀಡಿದ್ದು, ನಿಜವಾದ ಸತ್ಯತೆಗೆ ಜಯ ಸಿಗಲಿದೆ ಎಂಬುದು ನನ್ನ ಭಾವನೆ’ ಎಂದು ಹೇಳಿದರು.

‘ಪೆನ್‌ಡ್ರೈವ್ ಹಂಚಿಕೆ ಮಾಡಿರುವವರಿಗೂ ಶಿಕ್ಷೆ ಆಗಬೇಕು. ಏಕೆಂದರೆ ಮಹಿಳೆಯರ ಮತ್ತು ಹಾಸನದ ಗೌರವ ಕಳೆಯುವ ಕೆಲಸ ಮಾಡಲಾಗಿದೆ. ಪೊಲೀಸ್ ಮತ್ತು ಎಸ್‌ಐಟಿ ತಂಡವು ಈಗಾಗಲೇ ಇಬ್ಬರನ್ನೂ ಬಂಧಿಸಿದೆ. ಈ ಬಗ್ಗೆ ದೊಡ್ಡ ದೊಡ್ಡ ಕೈಗಳಿರುವ ಬಗ್ಗೆ ಕೇಳಿ ಬಂದಿದ್ದು, ಪೆನ್‌ಡ್ರೈವ್ ಯಾರು ಹಂಚಿಕೆ ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು. ಇಬ್ಬರು ಕೂಡ ಮಾಜಿ ಶಾಸಕರ ಆಪ್ತರು ಎಂದು ಮಾಧ್ಯಮದಲ್ಲಿ ನೋಡಿದ್ದು, ವಕೀಲರಾದ ದೇವರಾಜೇಗೌಡರು ವೈಯಕ್ತಿಕವಾಗಿ ಪರಿಚಯವಿಲ್ಲ. ಮಾಧ್ಯಮದಲ್ಲಿ ನನ್ನ ಬಗೆಯೂ ಕೀಳು ಮಟ್ಟದ ಹೇಳಿಕೆ ಕೊಟ್ಟರೂ ಕೂಡ ನಾನು ಪ್ರತಿಕ್ರಿಯೆ ಕೊಡಲು ಹೋಗಲಿಲ್ಲ. ಸತ್ಯತೆಯಲ್ಲಿ ಯಾರು ಇದ್ದಾರೆ ನನಗೆ ಗೊತ್ತಿಲ್ಲ. ಈ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಇರಬಹುದು. ಮತ್ತೆ ಇತರರು ಯಾರೇ ಇರಬಹುದು ತಿಳಿದಿಲ್ಲ. ಇನ್ನು ಬಂಧನ ಆದವರು ಎಸ್‌ಐಟಿ ಅಧಿಕಾರಿಗಳಿಗೆ ಏನು ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ’ ಎಂದು ತಿಳಿಸಿದರು.

‘ಪೆನ್‌ಡ್ರೈವ್ ವಿಷಯಲ್ಲಿ ಚಿಕ್ಕಪುಟ್ಟ ವ್ಯಕ್ತಿಗಳು ಇರಲು ಸಾಧ್ಯವಿಲ್ಲ. ದೊಡ್ಡ ದೊಡ್ಡ ಪ್ರಭಾವಿಗಳು ಇದೆ. ಈ ಸಂಬಂಧ ಐದು ಜನರಿಗೆ ನಿರೀಕ್ಷಣಾ ಜಾಮೀನು ನಿರಾಕರಣೆ ಆಗಿದ್ದು, ಶೀಘ್ರದಲ್ಲಿ ಬಂಧನ ಮಾಡಬೇಕೆಂದು ಮನವಿ ಮಾಡಲಾಗಿದೆ. ನಾನು ಒಂದು ವಾರಗಳ ಕಾಲ ಊರಲ್ಲಿ ಇರಲಿಲ್ಲ. ವಾಪಸ್ ಬಂದ ಮೇಲೆ ಎಚ್.ಡಿ. ರೇವಣ್ಣರನ್ನು ಭೇಟಿ ಮಾಡಲು ಹೋಗಿದ್ದು, ಜೈಲಿನ ಪೊಲೀಸ್ ಅಧಿಕಾರಿಗಳು ಅವಕಾಶ ಕೊಡಲಿಲ್ಲ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ಇನ್ನು ಬಿಜೆಪಿ ನವೀನ್ ಗೌಡ ಮತ್ತು ಚೇತನ್ ಗೌಡ ನನಗೆ ಪರಿಚಯವಿಲ್ಲ. ಎ.ಮಂಜುಗೆ ಪೆನ್‌ಡ್ರೈವ್ ಕೊಟ್ಟಿರವುದಾಗಿ ಮಾಧ್ಯಮದಲ್ಲಿ ನೋಡಿದ್ದು, ಅದೆಷ್ಟು ಸತ್ಯ, ಸುಳ್ಳು ಎಂಬುದು ಗೊತ್ತಿಲ್ಲ. ರಾಜ್ಯ ಸರ್ಕಾರವು ದೇವೇಗೌಡರ ಕುಟುಂಬ ಒಡೆಯುವುದಕ್ಕೆ ರೇವಣ್ಣ ಅವರನ್ನು ಅಪಹರಣ ಪ್ರಕರಣದಲ್ಲಿ ಶಿಕ್ಷಿಸಿರುವುದು ಬಹಳ ತಪ್ಪು. ರೇವಣ್ಣರ ಮನಸ್ಸು ಮಗುವಿನಂತಹ ಮನಸ್ಸು. ಯಾವ ಕಾರಣಕ್ಕೂ ಇಂತಹ ಕೆಲಸಗಳು ಆಗಬಾರದು. ಪ್ರಜ್ವಲ್ ಪ್ರಕರಣದಲ್ಲಿ ಏನು ತನಿಖೆ ನಡೆಯುತ್ತಿದೆ ಅದು ನಡೆಯಲಿ. ತನಿಖೆ ನಂತರ ಸತ್ಯಾಸತ್ಯತೆ ಹೊರಬರಲಿದೆ. ಇದು ಹಾಸನ ಜಿಲ್ಗೆಗೆ ಕಳಂಕ. ಯಾರು ಕೂಡ ಇಂತಹ ಕೀಳು ಮಟ್ಟದ ರಾಜಕಾರಣ ಮಾಡಬಾರದು. ಪ್ರಕರಣವನ್ನು ಕೂಡಲೇ ಸಿಬಿಐಗೆ ವಹಿಸಬೇಕು’ ಎಂದು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!