ಚನ್ನಪಟ್ಟಣ: ಯಾಕೋ ಏನೋ ಗೊತ್ತಿಲ್ಲ ಕುಮಾರಸ್ವಾಮಿ ಕುಟುಂಬ ನನ್ನ ಮೇಲೆ ಮುಗಿಬಿದ್ದಿದೆ. ಅನಿತಾ ಕುಮಾರಸ್ವಾಮಿ ಆಯ್ತು, ಕುಮಾರಸ್ವಾಮಿ ಆಯ್ತು ಈಗ ನಿಖಿಲ್ ಕುಮಾರಸ್ವಾಮಿ ಅವರನ್ನು ತಂದು ನನ್ನ ಎದುರು ನಿಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಕ್ಷೇತ್ರಕ್ಕೆ ಅಗತ್ಯವಾಗಿದ್ದ ನೀರಾವರಿ ಯೋಜನೆಯನ್ನು ಜಾರಿಗೊಳಿಸಿ, ರೈತರ ಬದುಕು ಹಸನು ಮಾಡಿದ್ದೇನೆ. ನಾನು ಪ್ರಾಮಾಣಿಕವಾಗಿ ಬರ ನೀಗಿಸುವ ಕೆಲಸ ಮಾಡಿದ್ದೇನೆ. ಮೊನ್ನೆ ಸಿಎಂ ಬಂದಾಗಲೂ ನಮ್ಮ ತಾಲೂಕಿನ ಹಸಿರಿನ ಬಗ್ಗೆ ಹೇಳಿದರು. ನಾನು ನಮ್ಮ ತಾಲೂಕಿನ ಹೈನುಗಾರಿಕೆ ಬಗ್ಗೆಯೂ ಅವರ ಜೊತೆ ಮಾತನಾಡಿದೆ. ರೈತರಿಗೆ ಹಾಲಿದ ದರ ಹೆಚ್ಚಿಸಲು ಸಿಎಂಗೆ ಮನವಿ ಮಾಡಿದ್ದೇನೆ. ಸಿಎಂ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿ ಭರವಸೆ ಕೊಟ್ಟಿದ್ದಾರೆ ಎಂದರು.
ನಾನು ಕಾಂಗ್ರೆಸ್ ಅಭ್ಯರ್ಥಿ ಆಗಿದ್ದೇನೆ, ನಮ್ಮ ಜಿಲ್ಲೆಯ ಡಿಸಿಎಂ ಡಿಕೆಶಿ ಅಭಿವೃದ್ಧಿಗೆ ಒತ್ತು ಕೊಡ್ತಿದ್ದಾರೆ. ನಾನು ಶಾಸಕನಾದರೆ ಈ ತಾಲೂಕು ಮತ್ತಷ್ಟು ಅಭಿವೃದ್ಧಿ ಆಗುತ್ತೆ ಎಂದು ಕಾಂಗ್ರೆಸ್ ಸೇರಿದ್ದೇನೆ. ಹಾಗಾಗಿ ಈ ಚುನಾವಣೆಯಲ್ಲಿ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.ಪೊಟೋ೮ಸಿಪಿಟಿ೬:
ಚನ್ನಟಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಮಾತನಾಡಿದರು.