ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ನಗರದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಪ್ರಸ್ತುತ ಸಾಲಿನ ಶಾಲಾ ಪ್ರಾರಂಭೋತ್ಸವ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಪ್ರಾರಂಭೋತ್ಸವಕ್ಕೂ ಮೊದಲು ಶಾಲಾ ಪರಿಸರವನ್ನು ಸ್ವಚ್ಛಗೊಳಿಸಬೇಕು. ಶಾಲಾ ಮಕ್ಕಳಿಗೆ ಇಲಾಖೆ ನೀಡಿರುವ ಉಚಿತ ಪಠ್ಯಪುಸ್ತಕಗಳನ್ನು ನೀಡಬೇಕು. ಇಲಾಖಾ ನಿಯಮಾನುಸಾರ ಪಠ್ಯ ಬೋಧನೆ ಕ್ರಿಯಾತ್ಮಕವಾಗಿರಬೇಕು. ಮಕ್ಕಳ ರಕ್ಷಣಾ ನೀತಿಗೆ ಸಂಬಂಧಿಸಿದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಶಾಲೆಯ ಮೊದಲು ಮತ್ತು ಆನಂತರ ಹಾಜರಾತಿ ದಾಖಲಿಸುವಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಇದ್ದಲ್ಲಿ ತಕ್ಷಣ ಪರಿಹರಿಸಿಕೊಳ್ಳಬೇಕು ಎಂದರು.ಕ್ಷೇತ್ರ ಸಮನ್ವಯಾಧಿಕಾರಿ ಆರ್ಟಿಎಸ್ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಶೈಕ್ಷಣಿಕ ವರ್ಷ 39 ದ್ವಿ ಭಾಷಾ ಮಾಧ್ಯಮ ಪ್ರಾರಂಭವಾಗುವ ಶಾಲಾ ಶಿಕ್ಷಕರಿಗೆ ಈಗಾಗಲೇ ತರಬೇತಿ ನೀಡಿದ್ದು ಸೂಕ್ತ ರೀತಿಯಲ್ಲಿ ತರಗತಿ ನಿರ್ವಹಿಸಬೇಕು.
ಇಸಿಒ ಪುಟ್ಟಸ್ವಾಮಿ ಚುನಾವಣಾ ಕರ್ತವ್ಯ ಮತ್ತು ಶೂ ಸಾಕ್ಸ್ ವಿತರಣೆ ಬಗ್ಗೆ ಮಾಹಿತಿ ನೀಡಿದರು. ರಂಗಸ್ವಾಮಿ ಸಮವಸ್ತ್ರ ಮತ್ತು ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಿದರು. ಜಾಫರ್ ಪಠ್ಯಪುಸ್ತಕ ಮತ್ತು ಮಕ್ಕಳ ರಕ್ಷಣಾ ನೀತಿ ಬಗ್ಗೆ ಮಾಹಿತಿ ನೀಡಿದರು. ಶಿವಾನಂದ ಶಾಲಾ ಆಸ್ತಿ ನೋಂದಣಿ ಮತ್ತು ಶಿಥಿಲಗೊಂಡ ಕಟ್ಟಡ ನೆಲಸಮಗೊಳಿಸುವ ಬಗ್ಗೆ ಮಾಹಿತಿ ನೀಡಿದರು. ಮಲ್ಲಿಕಾರ್ಜುನ್ ಕರ್ತವ್ಯ ಆಪ್ ನಲ್ಲಿ ಶಿಕ್ಷಕರ ಹಾಜರಾತಿ ಇಂದೀಕರಿಸುವ ಬಗ್ಗೆ ಮಾಹಿತಿ ನೀಡಿದರು. ಬಿಆರ್ಪಿಗಳಾದ ನಾಗರಾಜ್ ಸೇತುಬಂಧ ಶಾಲಾ ಶೈಕ್ಷಣಿಕ ಯೋಜನೆ ಕುರಿತಂತೆ ಮಾಹಿತಿ ನೀಡಿದರು. ಪ್ರಸನ್ನ ಕುಮಾರ್ ಸಾಟ್ಸ್ ಮತ್ತು ಯುಡಿಐಎಸ್ಇ ಪ್ಲಸ್ ನಲ್ಲಿ ವಿದ್ಯಾರ್ಥಿಗಳ, ಶಿಕ್ಷಕರ ಮತ್ತು ಶಾಲೆಯ ಮಾಹಿತಿಯನ್ನು ನಿಖರವಾಗಿ ಇಂದೀಕರಿಸುವ ಬಗ್ಗೆ ಮಾಹಿತಿ ನೀಡಿದರು.ಶ್ರೀನಿವಾಸ್ ಪೂರ್ವ ಪ್ರಾಥಮಿಕ ತರಗತಿ, ಇಕೋ ಕ್ಲಬ್ ಗಳ ಬಗ್ಗೆ, ಸಿ ಕರಿಯಪ್ಪ ದ್ವಿ ಭಾಷಾ ಶಾಲೆಗಳು, ಓದು ಕರ್ನಾಟಕ, ಗಣಿತ ಗಣಕ, ಕಾರ್ಯಕ್ರಮಗಳ ಬಗ್ಗೆ, ಇಸಿಓ ನಾಗರಾಜ್ ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.
ಕಾರ್ಯದರ್ಶಿ ಕೋಟಿಲಿಂಗಯ್ಯ, ಉಪಾಧ್ಯಕ್ಷರಾದ ನಾಗೇಶ್, ದೇವರತ್ನಮ್ಮ, ಖಜಾಂಚಿ ದಿವ್ಯ ನಾಥ್, ಸಂಘಟನಾ ಕಾರ್ಯದರ್ಶಿಗಳಾದ ದಾದಾಪೀರ್, ನವೀನ್,ಸಹ ಕಾರ್ಯದರ್ಶಿಗಳಾದ ಮಂಜುನಾಥ್, ಹಸೀನಾ, ಜಿಲ್ಲಾ ಸಂಘದ ಸಹ ಕಾರ್ಯದರ್ಶಿ ಹನುಮಂತರೆಡ್ಡಿ, ಖಜಾಂಚಿ ಶಿವಮೂರ್ತಿ, ಶಿಕ್ಷಕ ಪ್ರತಿನಿಧಿಗಳಾದ ರಮೇಶ್ ನಾಯಕ್, ರಾಜಪ್ಪ, ಸುದರ್ಶನ್ ಸೇರಿದಂತೆ ಎಲ್ಲಾ ಸಿಆರ್ಪಿಗಳು, ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಹಾಜರಿದ್ದರು.