ನಿತ್ಯ ಶಾಲೆಗೆ ಬಂದು ಮುಖ್ಯ ಶಿಕ್ಷಕನ ಎರಡನೇ ಪತ್ನಿಯಿಂದ ಜಗಳ

KannadaprabhaNewsNetwork |  
Published : Mar 05, 2026, 02:15 AM IST
4ಕೆಕೆಆರ್6: ಕುಕನೂರು ತಾಲೂಕಿನ ಕೋಮಲಾಪೂರ ಗ್ರಾಮದ ಸರಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ಸಿದ್ದೇಶ ಮತ್ತು ಎರಡನೇ ಪತ್ನಿ ಚನ್ನಮ್ಮ ಅವರ ಬುಧವಾರ ಜಗಳ ನಡೆಯುತ್ತಿರುವದು.  | Kannada Prabha

ಸಾರಾಂಶ

ಮನೆಗೆ ಬರುವ ವಿಚಾರಕ್ಕೆ ಕಳೆದ ನಾಲ್ಕೈದು ತಿಂಗಳಿಂದ ನಿತ್ಯ ಶಾಲೆಗೆ ಬಂದು ಚೆನ್ನಮ್ಮ ಗಲಾಟೆ ಮಾಡುತ್ತಿದ್ದರು.

ಕುಕನೂರು: ತಾಲೂಕಿನ ಕೋಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆಯ ಮುಖ್ಯ ಶಿಕ್ಷಕನ ಎರಡನೇ ಪತ್ನಿ ಪತಿ ಮನೆಗೆ ಬಂದಿಲ್ಲ ಎಂದು ಶಾಲೆಗೆ ಬಂದು ನಿತ್ಯ ಗಲಾಟೆ ಮಾಡುತ್ತಿದ್ದು, ಇದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಗ್ರಾಮಸ್ಥರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿನ್ನೆಲೆ:ಶಾಲೆಯ ಮುಖ್ಯ ಶಿಕ್ಷಕ ಸಿದ್ದೇಶ ಶೆಟ್ಟರ್ ಅವರಿಗೆ ಎರಡು ಮದುವೆ ಆಗಿದ್ದು, ಎರಡನೇ ಪತ್ನಿ ಚೆನ್ನಮ್ಮ ಶಾಲೆಗೆ ಬಂದು ಅನೇಕ ದಿನಗಳಿಂದ ಕುಟುಂಬದ ವಿಚಾರಕ್ಕೆ ಗಲಾಟೆ ಮುಂದುವರೆಸಿಕೊಂಡು ಬಂದಿದ್ದಾಳೆ. ಸಿದ್ದೇಶ ಶೆಟ್ಟರ್ ಅವರಿಗೆ ಮೊದಲನೇ ಪತ್ನಿ ಇದ್ದು. ಚೆನ್ನಮ್ಮ ಅವರನ್ನು ನಾಲ್ಕು ವರ್ಷದ ಹಿಂದೆ ಎರಡನೇ ಮದುವೆಯಾಗಿದ್ದಾರೆ.

ಮನೆಗೆ ಬರುವ ವಿಚಾರಕ್ಕೆ ಕಳೆದ ನಾಲ್ಕೈದು ತಿಂಗಳಿಂದ ನಿತ್ಯ ಶಾಲೆಗೆ ಬಂದು ಚೆನ್ನಮ್ಮ ಗಲಾಟೆ ಮಾಡುತ್ತಿದ್ದರು. ಶಿಕ್ಷಕ ಮತ್ತು ಎರಡನೇ ಪತ್ನಿ ಚೆನ್ನಮ್ಮ ಗಲಾಟೆಗೆ ಬೇಸತ್ತು ಜನರು ಬುಧವಾರ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿನಿತ್ಯ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಈ ಮಹಿಳೆಯ ಗಲಾಟೆ ಕಣ್ಣಾರೆ ಕಂಡಿದ್ದಾರೆ. ನಿಮ್ಮ ಮನೆ ಜಗಳ ಶಾಲೆವರೆಗೂ ತರಬೇಡಿ, ಇದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇವರ ಜಗಳದಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇದರ ಬಗ್ಗೆ ಅಧಿಕಾರಿಗಳು ಮತ್ತು ಕುಟುಂಬಸ್ಥರು ಇವರ ಸಮಸ್ಯೆ ಬಗೆಹರಿಸಬೇಕಿದೆ ಎಂದು ಸಹ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶಾಲೆಯಲ್ಲಿ ಶಿಕ್ಷಕ ತಮ್ಮ ಪತ್ನಿ ಜತೆಗೆ ನಿತ್ಯ ಗಲಾಟೆ ಮಾಡುವುದರಿಂದ ಶಾಲೆ ಮಕ್ಕಳ ಮೇಲೆ ಇದು ಪರಿಣಾಮ ಬೀರುತ್ತಿದೆ. ಆ ಮಹಿಳೆಗೆ ಸಹ ನಾವು ಹಲವಾರು ಬಾರಿ ಹೇಳಿದ್ದೇವೆ. ಆದರೂ ಸಹ ಆಕೆ ಮುಖ್ಯ ಶಿಕ್ಷಕರ ಜತೆ ನಿತ್ಯ ತಮ್ಮ ಕೌಟುಂಬಿಕ ಕಲಹ ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಿದೆ ಎಂದು ಕೋಮಲಾಪೂರ ಗ್ರಾಮಸ್ಥರು ತಿಳಿಸಿದ್ದಾರೆ.

ಶಾಲೆಯ ಎಸ್.ಡಿ.ಎಂ.ಸಿ ಮಂಡಳಿಯವರು ಮುಖ್ಯ ಶಿಕ್ಷಕನ ಜತೆ ಅವರ ಎರಡನೇ ಪತ್ನಿ ಶಾಲೆಯಲ್ಲಿ ಗಲಾಟೆ ಮಾಡುವ ವಿಚಾರ ತಿಳಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಯಲಬುರ್ಗಾ ಬಿಇಒ ಅಶೋಕಗೌಡ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಳಿ ಸಮುದಾಯದ ಮಕ್ಕಳಿಂದ ಗೌರಿ ದಬಾಳ್
ರಾಜ್ಯ ಬಜೆಟ್‌ ಮೇಲೆ ಕೊಪ್ಪಳದ್ದು ಬೆಟ್ಟದಷ್ಟು ನಿರೀಕ್ಷೆ