ಯೋಗ, ಆಯುರ್ವೇದದಿಂದ ಮಾತ್ರ ಆರೋಗ್ಯ ಸಮತೋಲನ: ಡಾ. ಅರ್ಪಣ ಭಟ್

KannadaprabhaNewsNetwork |  
Published : Dec 30, 2024, 01:03 AM IST
29ಕೆಪಿಎಲ್27 ನಗರದ ಶಿವಶಾಂತಮಂಗಲಭವನದಲ್ಲಿ ಶ್ರೀ ಗವಿಸಿದ್ಧೇಶ್ವರ ಆರ್ಯುವೇದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಾನಸಂ –೨೦೨೪ – ರಾಷ್ಟ್ರೀಯ ಆಯುರ್ವೇದ ಸಮ್ಮೇಳನ ಹಾಗೂ ಕಾರ್ಯಾಗಾರ | Kannada Prabha

ಸಾರಾಂಶ

ಮನಸ್ಸನ್ನು ಸಮಲೋತನದಲ್ಲಿ ಇಟ್ಟುಕೊಳ್ಳಲು ಯೋಗ ಮತ್ತು ಆಯುರ್ವೇದದಿಂದ ಮಾತ್ರ ಸಾಧ್ಯ.

ಕಾರ್ಯಾಗಾರ, ರಾಷ್ಟ್ರೀಯ ಆಯುರ್ವೇದ ಸಮ್ಮೇಳನಕನ್ನಡಪ್ರಭ ವಾರ್ತೆ ಕೊಪ್ಪಳ

ಮನಸ್ಸನ್ನು ಸಮಲೋತನದಲ್ಲಿ ಇಟ್ಟುಕೊಳ್ಳಲು ಯೋಗ ಮತ್ತು ಆಯುರ್ವೇದದಿಂದ ಮಾತ್ರ ಸಾಧ್ಯ ಎಂದು ಗುಜರಾತ ಜಾಮ್ ನಗರದ ಡಾ. ಅರ್ಪಣ ಭಟ್ ಹೇಳಿದ್ದಾರೆ.

ನಗರದ ಶಿವಶಾಂತಮಂಗಲಭವನದಲ್ಲಿ ಶ್ರೀ ಗವಿಸಿದ್ಧೇಶ್ವರ ಆರ್ಯುವೇದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಾನಸಂ –೨೦೨೪– ರಾಷ್ಟ್ರೀಯ ಆಯುರ್ವೇದ ಸಮ್ಮೇಳನ ಹಾಗೂ ಕಾರ್ಯಾಗಾರ ಹಾಗೂ ರಾಷ್ಟ್ರೀಯ ಆಯುರ್ವೇದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಈ ಪದ್ಧತಿಗಳಲ್ಲಿ ಹೇಳಲಾದ ಪ್ರತಿಯೊಂದು ಅಂಶಗಳ ಪಾಲನೆ ಅನಿವಾರ್ಯವೆಂದು ಹೇಳುವುದರ ಜೊತೆಗೆ ಮಾಡುವುದು ಸರಿಯಾದ ವಿಧಾನವನ್ನು ಅನುಸರಿಸಿದರೇ ಖಂಡಿತವಾಗಿಯೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಡಾ. ಬಸವರಾಜ ತುಬಾಕಿ ಮಾತನಾಡಿ, ಆಯುರ್ವೇದ ಮೂಲಕ ಸಂಶೋಧನೆಗೈದ ಹಲವು ಚಿಕಿತ್ಸಾ ಕ್ರಮಗಳನ್ನು ಈಗಾಗಲೇ ಲಭ್ಯವಿದ್ದು, ಸೂಕ್ತ ಮಾರ್ಗದರ್ಶನದೊಂದಿಗೆ ಅನುಸರಿಸುವ ಅಗತ್ಯವಿದೆ ಎಂದರು.

ಡಾ. ಸ್ವಪ್ನಾ ಪಾಂಡುರಂಗಿ ಹಾಗೂ ಡಾ. ಮಾಧವ ದಿಗ್ಗಾವಿ ವೈದ್ಯ ವೃತ್ತಿಯಲ್ಲಿ ಮಾನಸಿಕ ರೋಗಿಗಳನ್ನು ಹೇಗೆ ತಿಳಿದುಕೊಳ್ಳಬೇಕು ಮತ್ತು ಚಿಕಿತ್ಸಾ ಕ್ರಮವನ್ನು ಅಳವಡಿಸಿಕೊಳ್ಳಬೇಕೆಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಮಹಾಂತೇಶ ಸಾಲಿಮಠ ವಹಿಸಿದ್ದರು. ಎರಡು ದಿನದ ಸಮ್ಮೇಳನದಲ್ಲಿ ಡಾ. ಮಹೇಶ ಸಾಲಿಮಠ ಹಾಗೂ ಡಾ. ಮಂಗಳಾ ಸಜ್ಜನರ, ಸ್ವಸ್ಥವೃತ್ತ ವಿಭಾಗದ ಡಾ. ಪ್ರಭು ನಾಗಲಾಪೂರ, ಡಾ. ಸೋಮನಾಥ.ಎಸ್, ಡಾ. ಆಶಾ ಎಸ್.ಎ., ಡಾ. ಅಮಲ್ ಎಸ್. ಚಂದ್ರನ್, ಡಾ. ನವೀನಕುಮಾರ ಮತ್ತು ಕಾಯಚಿಕಿತ್ಸಾ ವಿಭಾಗದ ಡಾ. ಮಂಜುಳಾ ಕರ್ಲವಾಡ, ಡಾ. ರಾಜಶೇಖರ ಶೆಟ್ಟರ್, ಡಾ. ಶ್ರೀಧರಯ್ಯ ಹಿರೇಮಠ ಸೇರಿ ಒಟ್ಟು ೧೪ ಜನರು ಆಯುರ್ವೇದ ಮತ್ತು ಯೋಗದ ಮೂಲಕ ಮನಸ್ಸಿನ ನಿಯಂತ್ರಣ, ಮಾನಸಿಕ ರೋಗದ ಚಿಕಿತ್ಸಾ ಪದ್ಧತಿ ಹಾಗೂ ವಿವಿಧ ವಿಷಯಗಳ ಮೇಲೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ವೀರೇಶ ಕೊತಬಾಳ, ಉಪಪ್ರಾಂಶುಪಾಲ ಡಾ. ಸುರೇಶ ಹಕ್ಕಂಡಿ ಉಪಸ್ಥಿತರಿದ್ದರು. ಸ್ನಾತಕ, ಸ್ನಾತಕೋತ್ತರ ಹಾಗೂ ವೈದ್ಯರು ಸೇರಿ ಸುಮಾರು ೪೫ ಕ್ಕೂ ಹೆಚ್ಚು ಜನ ಪ್ರಬಂಧ ಮಂಡನೆ ಮಾಡಿದರು. ಉಪನ್ಯಾಸಕರ ವಿಭಾಗದಲ್ಲಿ ಡಾ. ವೀಣಾ ಪತ್ತಾರ, ಸ್ನಾತಕೋತ್ತರ ವಿಭಾಗದಲ್ಲಿ ಡಾ. ಅಮೂಲ್ಯ ಹಾಗೂ ಡಾ. ಶಿವಾನಂದ, ಸ್ನಾತಕ ವಿಭಾಗದಲ್ಲಿ ಕೌಶಲ್ಯ ಉತ್ತಮ ಪ್ರಬಂಧ ಪ್ರಶಸ್ತಿಗೆ ಭಾಜನರಾದರು. ಸ್ನಾತಕೋತ್ತರ ವಿಭಾಗದಲ್ಲಿ ಡಾ. ವೀರೇಂದ್ರ ಶೆಟಗಾರ ಹಾಗೂ ಸ್ನಾತಕ ವಿಭಾಗದಲ್ಲಿ ಕಾರ್ತಿಕ ಉತ್ತಮ ಭಿತ್ತಿಪತ್ರದ (ಪೋಸ್ಟರ್) ಪ್ರಶಸ್ತಿ ಪಡೆದರು.

ಡಾ. ಪವಿತ್ರಾ ಜಿ. ಹಾಗೂ ಅನ್ನಪೂರ್ಣ ಕಾರ್ಯಕ್ರಮದ ನಿರೂಪಿಸಿದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ಪ್ರಭು ನಾಗಲಾಪೂರ ಸ್ವಾಗತಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ