ಯೋಗದಿಂದ ಆರೋಗ್ಯ, ಭೋಗದಿಂದ ಅನಾರೋಗ್ಯ

KannadaprabhaNewsNetwork | Published : Jun 22, 2025 1:18 AM

ಜೀವನದಲ್ಲಿ ಯೋಗಭ್ಯಾಸ ಆರೋಗ್ಯಯುತ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ಆದರೆ, ಭೋಗ ಅನಾರೋಗ್ಯದಿಂದ ಆಸ್ಪತ್ರೆ ಕಡೆಗೆ ದಾರಿ ಮಾಡುತ್ತದೆ. ಇಂದಿನ ಒತ್ತಡದ ಜೀವನಶೈಲಿಯಲ್ಲಿ ಯೋಗಾಸನ, ಪ್ರಾಣಾಯಾಮಗಳು ಆರೋಗ್ಯ ಸಂರಕ್ಷಣೆಗೆ ಸಹಕಾರಿಯಾಗಿವೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದ್ದಾರೆ.

- ಹಿರೇಕಲ್ಮಠದಲ್ಲಿ ವಿಶ್ವ ಯೋಗ ದಿನಾಚರಣೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಜೀವನದಲ್ಲಿ ಯೋಗಭ್ಯಾಸ ಆರೋಗ್ಯಯುತ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ಆದರೆ, ಭೋಗ ಅನಾರೋಗ್ಯದಿಂದ ಆಸ್ಪತ್ರೆ ಕಡೆಗೆ ದಾರಿ ಮಾಡುತ್ತದೆ. ಇಂದಿನ ಒತ್ತಡದ ಜೀವನಶೈಲಿಯಲ್ಲಿ ಯೋಗಾಸನ, ಪ್ರಾಣಾಯಾಮಗಳು ಆರೋಗ್ಯ ಸಂರಕ್ಷಣೆಗೆ ಸಹಕಾರಿಯಾಗಿವೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಪಟ್ಟಣದ ಹಿರೇಕಲ್ಮಠದಲ್ಲಿ ಶನಿವಾರ ಪತಂಜಲಿ ಯೋಗ ಸಮಿತಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ತಾಲೂಕು ಘಟಕ, ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 11ನೇ ಅಂತರ ರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯೋಗಕಲೆಯು ಭಾರತದ ಋಷಿಮುನಿಗಳಿಂದ ವರದಾನವಾಗಿ ಬಂದಿದೆ ಎಂದು ಹೇಳಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿ ಮಾತನಾಡಿ, ಯೋಗದ ಉದ್ದೇಶವು ಹೇಯಂ ದುಃಖ ಮನಾಗತಂ, ಅಂದರೆ ದುಃಖವನ್ನು ಅದು ಬರುವ ಮುಂಚೆಯೇ ತಡೆಯುವುದು ಎಂದರ್ಥ ಎಂದರು.

ಅಧ್ಯಕ್ಷತೆ ವಹಿಸಿದ್ದ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಬ್ಬಾರ್ ಮಾತನಾಡಿ, ಯೋಗ ಭಾರತ ವಿಶ್ವಕ್ಕೆ ನೀಡಿರುವ ಪವಿತ್ರ ಕೊಡುಗೆಯಾಗಿದೆ. ಯೋಗದಿಂದ ಮನುಷ್ಯ ಆರೋಗ್ಯವಾಗಿರುತ್ತಾನೆ ಎಂದು ಹೇಳಿದರು. ಸಿಡಿಪಿಒ ಜ್ಯೋತಿ ಇತರರು ಮಾತನಾಡಿದರು. ಉಪನ್ಯಾಸಕ ಮಂಜುನಾಥ್ ಗೊಲ್ಲರಹಳ್ಳಿ ಉಪನ್ಯಾಸ ನೀಡಿದರು. ಹಿರೇಕಲ್ಮಠ ಮಠದ ಆವರಣದಲ್ಲಿ ನೂರಾರು ಜನರು ಸಾಮೂಹಿಕವಾಗಿ ಯೋಗಾಭ್ಯಾಸ ಪ್ರದರ್ಶನ ಮಾಡಿದರು.

ಕಾರ್ಯಕ್ರಮಕ್ಕೂ ಮೋದಲು ಭಾರತೀಯ ವಿದ್ಯಾಸಂಸ್ಥೆ ಮಕ್ಕಳು ಹಾಗೂ ಸಮಿತಿ ಪದಾಧಿಕಾರಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಯೋಗದ ಮಹತ್ವದ ಬಗ್ಗೆ ಜನಜಾಗೃತಿ ಜಾಥಾ ನಡೆಸಿದರು.

ಬ್ರಹ್ಮಕುಮಾರಿ ಸಂಸ್ಥೆಯ ಜ್ಯೋತಿ ಅಕ್ಕ, ಯೋಗ ಶಿಕ್ಷಕ ಶ್ರೀಕಾಂತ ಕುರ್ಡೇಕರು, ಪತಂಜಲಿ ಸಮಿತಿಯ ರುದ್ರೇಶ್, ರಾಘವೇಂದ್ರ ವೈಶ್ಯರ್, ಜಗದೀಶ್ ಆಚಾರ್, ಸುರೇಶ್ ಕುಂಬಾರ ಚನ್ನೇಶ ಜಕ್ಕಾಳಿ, ದಿಲೀಪ್ ಕುಮಾರ್, ಅರುಣ್ ಕುಮಾರ್, ಎನ್.ಕೆ.ಆಂಜನೇಯ, ನರಸಿಂಹಪ್ಪ ಕೆ.ಚಂದ್ರಪ್ಪ, ಅಂಬಿಕಾ ಪ್ರಕಾಶ್ ಹೆಬ್ಬಾರ, ಮೀನಾ ಗಣೇಶ್, ದಾಕ್ಷಾಯಣಿ, ಶೀಲಾ ಯಶೋಧ, ರವಿಕುಮಾರ್, ಸಚ್ಚಿನ್, ಅನುಷಾ ಗಿರೀಶ್, ಎನ್.ಎಂ. ಸಯ್ಯದ್,ಮುಂತಾದವರು ಭಾಗವಹಿಸಿದ್ದರು.

- - -

(ಟಾಪ್‌ ಕೋಟ್‌)

ಯೋಗ ಭಾರತದ ಸಂಸ್ಕೃತಿಯ ಪ್ರತೀಕವಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ವಿಶ್ವಮನ್ನಣೆ ಗಳಿಸಿದೆ. ಸುಮಾರು 177ಕ್ಕೂ ಹೆಚ್ಚಿನ ದೇಶಗಳಲ್ಲಿ ಯೋಗಕಲೆಯನ್ನು ಕೋಟ್ಯಾಂತರ ಜನ ದಿನಚರಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಇದು ಆರೋಗ್ಯ ರಕ್ಷಣೆಯಲ್ಲಿ ಯೋಗದ ಮಹತ್ವ ತಿಳಿಯುತ್ತದೆ. ತಾನು ಕೂಡ ಒಬ್ಬ ಯೋಗದ ವಿದ್ಯಾರ್ಥಿಯಾಗಿದ್ದು, ನಿತ್ಯ ಯೋಗ್ಯಾಭಾಸ ಮಾಡಿಕೊಂಡು ಬರುತ್ತಿದ್ದೇನೆ.

- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ.

- - -

-21ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿ ಹಿರೇಕಲ್ಮಠದಲ್ಲಿ ಶನಿವಾರ ನಡೆದ ಯೋಗ ದಿನ ಕಾರ್ಯಕ್ರಮವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.