ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ವಿದ್ಯಾವಿಕಾಸ ಸಂಸ್ಥೆಯಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ವತಿಯಿಂದ ಶಾಲಾ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ ಲಸಿಕಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡಿ ಅನೇಕ ಪ್ರಾಣಹಾನಿಗೆ ಕಾರಣವಾಗುತ್ತಿದ್ದವು. ಆದರೆ ವಿಜ್ಞಾನ ಮುಂದುವರಿದಂತೆ ಲಸಿಕೆಗಳು ಮಕ್ಕಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಮಗು ಜನಿಸಿದಂದಿನಿಂದ 16 ವರ್ಷದವರೆಗೆ 13 ಮಾರಕ ರೋಗಗಳ ವಿರುದ್ಧ ಸರ್ಕಾರ ಸಂಪೂರ್ಣ ಉಚಿತವಾಗಿ ಗುಣಮಟ್ಟದ ಲಸಿಕೆಗಳನ್ನು ನೀಡುತ್ತಿದೆ ಎಂದು ತಿಳಿಸಿದರು.ಡಿ.ಪಿ.ಟಿ ಲಸಿಕೆಯು ಗಂಟಲುಮಾರಿ, ಧನುರ್ವಾಯು ಮತ್ತು ನಾಯಿಕೆಮ್ಮು ರೋಗಗಳ ವಿರುದ್ಧ ರಕ್ಷಣೆ ನೀಡಿದರೆ, ಟಿ.ಡಿ ಲಸಿಕೆಯು ಗಂಟಲುಮಾರಿ ಹಾಗೂ ಧನುರ್ವಾಯು ರೋಗಗಳಿಂದ ಮಗುವನ್ನು ಕಾಯುತ್ತದೆ. ಶಾಲೆಗಳಲ್ಲಿ ನೀಡಲಾಗುವ ಈ ಲಸಿಕೆಗಳಿಂದ ಯಾವುದೇ ಮಗು ವಂಚಿತವಾಗದಂತೆ ಪೋಷಕರು ಜಾಗ್ರತೆ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಕಚೇರಿಯ ಬಿಪಿಎಂ ಮೆಹಬೂಬ್ ಆಲಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಾದ ಭಾಗ್ಯಲಕ್ಷ್ಮಿ, ಎಂ.ಆರ್. ರೂಪ, ಎಚ್ಐಓ ಸುಪ್ರೀತಾ, ಎಲ್.ಡಿ.ಸಿ. ಐಶ್ವರ್ಯ, ಆಶಾ ಕಾರ್ಯಕರ್ತೆ ಕೌಸರ್, ಶಾಲೆಯ ಮುಖ್ಯ ಶಿಕ್ಷಕ ಎನ್.ಜಿ.ತಿಪ್ಪೇಸ್ವಾಮಿ ಹಾಗೂ ಸಹಶಿಕ್ಷಕರಾದ ಎಚ್.ಸೌಭಾಗ್ಯ, ಎಚ್.ದೀಪ, ಸಹನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.