ಮೊಳಕಾಲ್ಮುರಿನ ವಿವಿಧೆಡೆ ಭರ್ಜರಿ ಮಳೆ

KannadaprabhaNewsNetwork |  
Published : Aug 22, 2024, 01:01 AM IST
ಚಿತ್ರ ಶೀರ್ಷಿಕೆ21ಎಂ ಎಲ್ ಕೆ1ಮೊಳಕಾಲ್ಮೂರು ತಾಲೂಕಿನ ಸಿದ್ದಾಪುರದಲ್ಲಿ ಟೊಮೋಟೊ ಬೆಳೆಗೆ ನೀರು ನುಗ್ಗಿರುವುದು.ಚಿತ್ರ ಶೀರ್ಷಿಕೆ21ಎಂ ಎಲ್ ಕೆ2 ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಗ್ರಾಮದ ಉರ್ದು ಶಾಲೆಗೆ ನೀರು ನುಗ್ಗಿರುವುದು. | Kannada Prabha

ಸಾರಾಂಶ

ತಾಲೂಕಿನ ವಿವಿಧ ಕಡೆಯಲ್ಲಿ ಮಂಗಳವಾರ ರಾತ್ರಿ ಭರ್ಜರಿ ಮಳೆಯಾಗಿದ್ದು, ಕೃಷಿ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ. ತಾಲೂಕಿನ ಕಸಬಾ ಹಾಗೂ ದೇವ ಸಮುದ್ರ ಹೋಬಳಿಯ ಎಲ್ಲಾ ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ. ದೇವಸಮುದ್ರ ಹೋಬಳಿಯ ಬರಿದಾಗಿದ್ದ ಚಿಕ್ಕನಹಳ್ಳಿ, ರಾಂಪುರ, ಸಿದ್ದಾಪುರ ಕೆರೆಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ತಾಲೂಕಿನ ವಿವಿಧ ಕಡೆಯಲ್ಲಿ ಮಂಗಳವಾರ ರಾತ್ರಿ ಭರ್ಜರಿ ಮಳೆಯಾಗಿದ್ದು, ಕೃಷಿ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ. ತಾಲೂಕಿನ ಕಸಬಾ ಹಾಗೂ ದೇವ ಸಮುದ್ರ ಹೋಬಳಿಯ ಎಲ್ಲಾ ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ. ದೇವಸಮುದ್ರ ಹೋಬಳಿಯ ಬರಿದಾಗಿದ್ದ ಚಿಕ್ಕನಹಳ್ಳಿ, ರಾಂಪುರ, ಸಿದ್ದಾಪುರ ಕೆರೆಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.

ಜಾಗಿರ ಬುಡ್ಡೆನಳ್ಳಿಯ ಕೆರೆ ಒಂದೇ ರಾತ್ರಿ ಸುರಿದ ಮಳೆಗೆ ಕೋಡಿ ಬಿದ್ದು ಅಪಾರ ಪ್ರಮಾಣದ ನೀರು ಗುಂಡೇರ ಹಳ್ಳದ ಮೂಲಕ ದೇವಸಮುದ್ರ ಒಡಲಾಳವನ್ನು ಸೇರುತ್ತಿದೆ. ಭೀಕರ ಬರದ ಮುನ್ಸೂಚನೆ ಭೀತಿಯಿಂದ ಇದ್ದ ರೈತರಿಗೆ ಸಂತಸವಾಗಿದ್ದು, ಕೃಷಿ ಜಮೀನುಗಳಿಗೆ ಜೀವ ಕಳೆ ಬಂದಿದೆ. ಅಲ್ಲದೇ ಸಿದ್ದಾಪುರ ಗ್ರಾಮದ ತಿಪ್ಪಮ್ಮ, ಮಲ್ಲಾರೆಡ್ಡಿ, ಎಂ. ಟಿ.ರಂಗಪ್ಪ, ಕೆರೆ ಕೊಂಡಪುರ ಗ್ರಾಮದ ಶಿವಣ್ಣ, ಬೊಮ್ಮಕ್ಕನಹಳ್ಳಿ ಗ್ರಾಮಗಳ ಕೃಷಿ ಜಮೀನುಗಳಿಗೆ ನೀರು ನುಗ್ಗಿ ಶೇಂಗಾ, ಮೆಕ್ಕೆ ಜೋಳ ಟೊಮೋಟೊ ಬೆಳೆಗೆ ಹಾನಿಯಾಗಿದ್ದು ಲಕ್ಷಾಂತರ ರು. ನಷ್ಟವೂ ಸಂಭವಿಸಿದೆ.

ಕಸಬಾ ಹೋಬಳಿ ವ್ಯಾಪ್ತಿಯ ಚಿಕ್ಕುಂತಿ ಮತ್ತು ಸೋಮೇನಹಳ್ಳಿ ಗ್ರಾಮದಲ್ಲಿ ರಾಗಿ, ಮೆಕ್ಕೆಜೋಳ ಬೆಳೆಗೆ ನೀರು ನುಗ್ಗಿದೆ. ಕೋಟೆ ಬಡಾವಣೆಯ ಹಳ್ಳದಲ್ಲಿ ನೀರು ಹರಿಯುತ್ತಿದೆ. ಬಿ.ಜಿ.ಕೆರೆ ಗ್ರಾಮದಲ್ಲಿ ಉರ್ದು ಶಾಲೆಗೆ ನೀರು ನುಗ್ಗಿ ಭಾರಿ ಆವಾಂತರ ಸೃಷ್ಟಿಸಿದೆ. ಅಡುಗೆ ಕೋಣೆ, ಬೋಧನಾ ಕೊಠಡಿ, ಕಚೇರಿಗೆ ನೀರು ನುಗ್ಗಿ ಹಾಜರಾತಿ ಪುಸ್ತಕ, ಅಡುಗೆ ಪರಿಕರಗಳು, ನೋಟ್ ಪುಸ್ತಕ ಹಾಳಾಗಿದೆ. ಹಾಗೂ ಮಸೀದಿ ಪಕ್ಕದ ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಸಿದೆ. ಮೊಳಕಾಲ್ಮುರಿನಲ್ಲಿ 52.0ಮೀಮೀ ಮಳೆಯಾದರೆ, ರಾಯಾಪುರ 26.0, ಬಿ.ಜಿ.ಕೆರೆ 70.2, ರಾಂಪುರ 50.1 ದೇವಸಮುದ್ರ 60.2 ಮಿ. ಮೀ ಮಳೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ