ಸೋಂಪುರ ಹೋಬಳಿಯಲ್ಲಿ ಜೋರು ಮಳೆ

KannadaprabhaNewsNetwork |  
Published : May 10, 2024, 01:36 AM IST
ಪೋಟೋ 10 : ಪಟ್ಟಣದಲ್ಲಿ ಮಳೆ ಬಿದ್ದ ಹಿನ್ನೆಲೆಯಲ್ಲಿ ಜನರು ಛತ್ರಿ ಹಿಡುದುಕೊಂಡು ಹೋಗುತ್ತಿರುವುದು | Kannada Prabha

ಸಾರಾಂಶ

ದಾಬಸ್‌ಪೇಟೆ: ಸೋಂಪುರ ಹೋಬಳಿಯಲ್ಲಿ ಬರೋಬ್ಬರಿ ೫ ತಿಂಗಳ ಬಳಿಕ ಗುರುವಾರ ಸಂಜೆ ಜೋರು ಮಳೆಯಾಗಿದೆ. ಬಿಸಿಲ ಬೇಗೆಗೆ ಬೆಂದಿದ್ದ ಜನರಿಗೆ ತಂಪಾದ ವಾತಾವರಣ ಸಮಾಧಾನ ತಂದಿದೆ.

ದಾಬಸ್‌ಪೇಟೆ: ಸೋಂಪುರ ಹೋಬಳಿಯಲ್ಲಿ ಬರೋಬ್ಬರಿ ೫ ತಿಂಗಳ ಬಳಿಕ ಗುರುವಾರ ಸಂಜೆ ಜೋರು ಮಳೆಯಾಗಿದೆ. ಬಿಸಿಲ ಬೇಗೆಗೆ ಬೆಂದಿದ್ದ ಜನರಿಗೆ ತಂಪಾದ ವಾತಾವರಣ ಸಮಾಧಾನ ತಂದಿದೆ.

ಮಳೆಯಿಲ್ಲದೆ ಬಿಸಿಲ ಬೇಗೆಯಿಂದ ಧಣಿದಿದ್ದ ಜನತೆ ಹಾಗೂ ರೈತರ ಮುಖದಲ್ಲಿಲೀ ಮಳೆ ಮಂದಹಾಸ ಮೂಡಿಸಿದೆ. ಬೆಂಗಳೂರು ಕಡೆಯಿಂದ ತುಮಕೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-೪೮ರ ಸರ್ವಿಸ್ ರಸ್ತೆಯಲ್ಲಿ ಕಸಕಡ್ಡಿಗಳು ಬಿದ್ದು ಚರಂಡಿಗಳಲ್ಲಿ ನೀರು ಸರಾಗವಾಗಿ ಹೋಗದ ಹಿನ್ನೆಲೆಯಲ್ಲಿ ರಸ್ತೆ ತುಂಬೆಲ್ಲಾ ನೀರು ನಿಂತು ವಾಹನಗಳು ಚಲಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.

ದಾಬಸ್‌ಪೇಟೆ ಪಟ್ಟಣ ಸೇರಿದಂತೆ ಹೊನ್ನೇನಹಳ್ಳಿ, ಶಿವಗಂಗೆ, ಕಂಬಾಳು, ಗೌರಾಪುರ, ವೀರಸಾಗರ, ಅಗಳಕುಪ್ಪೆ, ನರಸೀಪುರ, ಮಾದೇನಹಳ್ಳಿ, ಪೆಮ್ಮನನಹಳ್ಳಿ, ನಿಡವಂದ, ತ್ಯಾಮಗೊಂಡ್ಲು ಸೇರಿ ಹಲವೆಡೆ ಮಳೆಯಾಗಿದೆ.

ಏಕಾಏಕಿ ಸಂಜೆ ಮಳೆ ಬಿದ್ದದ್ದರಿಂದ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಂಚಾರ ದಟ್ಟಣೆಯಾಯಿತು. ಪಟ್ಟಣದ ಉದ್ದಾನೇಶ್ವರ ವೃತ್ತ, ದೊಡ್ಡಬಳ್ಳಾಪುರ ರಸ್ತೆ, ಶಿವಗಂಗೆ ವೃತ್ತ, ಅಗಳಕುಪ್ಪೆ ರಸ್ತೆ, ಎಡೇಹಳ್ಳಿ ಜಿಂದಾಲ್ ಕಂಪನಿ ಬಳಿ ವಾಹನಗಳ ಸಾಲುಗಟ್ಟಿ ನಿಂತಿದ್ದವು. ಬೈಕ್ ಸವಾರರು ಮಳೆಯಲ್ಲಿ ಸಂಚರಿಸಲಾಗದೆ ಪರದಾಡಿದರು.

(ಚೆನ್ನಾಗಿರುವ ಒಂದು ಫೋಟೋ ಬಳಸಿ)

ಪೋಟೋ 9:

ದಾಬಸ್‌ಪೇಟೆಯ ಶಿವಗಂಗೆ ವೃತ್ತದ ರಾಷ್ಟ್ರೀಯ ಹೆದ್ದಾರಿ- ೪೮ರ ಸರ್ವಿಸ್ ರಸ್ತೆಯಲ್ಲಿ ನೀರು ನಿಂತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತನ್ನ ಮರ ಕಡಿದಿದ್ದಕ್ಕೆ ವಿಧಾನಸೌಧ ಬಳಿ ಸರ್ಕಾರಿ ಶ್ರೀಗಂಧ ಮರ ಕತ್ತರಿಸಿದ ರೈತ!
ಸಿದ್ದರಾಮಯ್ಯ , ನಾನು ಕದ್ದು ಮುಚ್ಚಿ ಮಾತಾಡಿಲ್ಲ, ನಮ್ಮಲ್ಲಿ ಗೊಂದಲವೂ ಇಲ್ಲ : ಡಿಸಿಎಂ