ದಾಬಸ್ಪೇಟೆ: ಅತಿ ಹೆಚ್ಚು ಕೈಗಾರಿಕೆಗಳನ್ನು ಹೊಂದಿರುವ ಪಟ್ಟಣಕ್ಕೆ ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣ ಶೀಘ್ರದಲ್ಲಿಯೇ ಶಾಸಕರಾದ ಎನ್.ಶ್ರೀನಿವಾಸ್ ನೇತೃತ್ವದಲ್ಲಿಯೇ ನಿರ್ಮಾಣವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಪಟ್ಟಣದಲ್ಲಿರುವ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ದಾಬಸ್ಪೇಟೆ ಪಟ್ಟಣ ದಿನ ಬೆಳೆದಂತೆ ಅಭಿವೃದ್ಧಿಯಾಗುತ್ತಿದೆ. ಆದರೆ ಸೂಕ್ತ ಬಸ್ ನಿಲ್ದಾಣವೆಂದು ಶಾಸಕರು ನನ್ನ ಗಮನಕ್ಕೆ ತಂದಿದ್ದರು. ಈ ಹಿಂದೆ ಸುಮಾರು 75 ಲಕ್ಷ ರು. ಅನುದಾನ ಬಿಡುಗಡೆಯಾಗಿತ್ತು. ಆದರೆ ಕಾಮಗಾರಿ ಅವೈಜ್ಞಾನಿಕವಾಗಿ ಮಾಡಿದ್ದ ಹಿನ್ನೆಲೆಯಲ್ಲಿ ಶಾಸಕರು ತಡೆಹಿಡಿದು ಹೊಸದಾಗಿ ಬಸ್ ನಿಲ್ದಾಣ ನಿರ್ಮಿಸಬೇಕು ಅದಕ್ಕೆ ಅನುದಾನ ನೀಡಬೇಕೆಂದು ಈ ಹಿಂದೆ ಅಧಿವೇಶನದಲ್ಲಿ ಒತ್ತಾಯ ಮಾಡಿದ್ದ ಹಿನ್ನೆಲೆಯಲ್ಲಿ ಖುದ್ದು ನಾನು ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದರು.ಶಾಸಕರ ಅನುದಾನದಲ್ಲಿ 2.5 ಕೋಟಿ ಬಳಕೆ: ಇತ್ತೀಚೆಗೆ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ 50 ಕೋಟಿ ಅನುದಾನದಲ್ಲಿ 2.5 ಕೋಟಿ ಅನುದಾನವನ್ನು ನೂತನ ಬಸ್ ನಿಲ್ದಾಣಕ್ಕೆ ಶಾಸಕರು ನೀಡಿದ್ದಾರೆ. ಉಳಿದ ಹಣವನ್ನು ನನ್ನ ಇಲಾಖೆಯಿಂದಲೂ ಅನುದಾನ ನೀಡುತ್ತೇನೆ. ಸದ್ಯದಲ್ಲಿಯೇ ಕಟ್ಟಡ ನಿರ್ಮಾಣವಾಗಲಿದೆ ಎಂದರು.
ನೆಲಮಂಗಲ ಬಸ್ ನಿಲ್ದಾಣ ಬದಲಾವಣೆ: ನೆಲಮಂಗಲ ಬಸ್ ನಿಲ್ದಾಣ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದು ಸ್ವಲ್ಪ ಬದಲಾವಣೆ ಮಾಡಬೇಕೆಂದು ಶಾಸಕರು ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡುವಂತೆ ಸೂಚನೆ ನೀಡಿದ್ದೇನೆ. 2016ರಲ್ಲಿ ಗುದ್ದಲಿಪೂಜೆ ನೆರವೇರಿಸಿದ್ದರೂ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಇನ್ನೊಂದು ವರ್ಷದಲ್ಲಿ ಪೂರ್ಣ ಮಾಡಿ ಉದ್ಘಾಟಿಸಲಾಗುತ್ತದೆ. ಸೆ. ರಿಂದಲೇ ಕೆಲಸವಾಗಿರುವ ಪೂರ್ಣಗೊಂಡಿರುವ ಸ್ಥಳಗಳಲ್ಲಿ ಬಸ್ ಗಳು ಕೆಲಸ ನಿರ್ವಹಿಸುವಂತೆ ಸೂಚಿಸಿದ್ದೇನೆ ಎಂದರು.ಬಿಬಿಎಂಪಿ ಗಡಿ ವ್ಯಾಪ್ತಿಯಿಂದ 40 ಕಿ.ಮೀ.ವರೆಗೆ ಬಿಎಂಟಿಸಿ ಬಸ್ ಗಳು ಓಡಾಟ ನಡೆಸಬಹುದೆಂದು ನಿಯಮ ಇರುವುದರಿಂದ 40 ಕಿ.ಮೀ ಒಳಗಿರುವ ಅಗತ್ಯವಿರುವ ಹಳ್ಳಿಗಳಿಗೂ ಬಿಎಂಟಿಸಿ ಬಸ್ ಸೌಲಭ್ಯ ಒದಗಿಸುತ್ತೇವೆ. ದಾಬಸ್ಪೇಟೆ ಬಸ್ ನಿಲ್ದಾಣ ಅನ್ಯ ಜಿಲ್ಲೆ ತುಮಕೂರು ಡಿಪೋಗೆ ಸೇರುತ್ತಿದೆ. ಹಾಗಾಗಿ ಬಸ್ ನಿಲ್ದಾಣ ಅಭಿವೃದ್ಧಿಯಾಗುತ್ತಿಲ್ಲ. ಹೀಗಾಗಿ ನೆಲಮಂಗಲ ಡಿಪೋಗೆ ದಾಬಸ್ಪೇಟೆ ಬಸ್ ನಿಲ್ದಾಣವನ್ನು ಸೇರಿಸುವಂತೆ ಸಾರ್ವಜನಿಕರು ಮನವಿ ಮಾಡಿದಾಗ ಸ್ಪಂದಿಸಿದ ಸಚಿವರು ಕೂಡಲೇ ಅಧಿಕಾರಿಗಳ ಬಳಿ ಈ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳುತ್ತೇನೆ ಎಂದರು.
ಶಿವಗಂಗೆ ಬೆಟ್ಟ ಹತ್ತಲು ಬಹಳ ಆಸೆಯಿದೆ. ಆದರೆ ನನಗೆ ಅಪರೇಷನ್ ಆಗಿರುವುದರಿಂದ ಹತ್ತಲು ಆಗುತ್ತಿಲ್ಲ. ಮುಂದೆ ಬೆಟ್ಟ ಹತ್ತಿ ದೇವರ ದರ್ಶನ ಪಡೆದು, ಬೆಟ್ಟದ ಅಭಿವೃದ್ದಿ, ಮೂಲ ಸೌಕರ್ಯಗಳ ಬಗ್ಗೆ ಸ್ಥಳ ಪರಿಶೀಲನೆ ಮಾಡುತ್ತೇನೆ ಎಂದರು.ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಬಸ್ ನಿಲ್ದಾಣ ನಿರ್ಮಿಸುವ ವಿಚಾರದಲ್ಲಿ ಅವೈಜ್ಞಾನಿಕ ಕಾಮಗಾರಿ ತಡೆಹಿಡಿದಿದ್ದಕ್ಕೆ ಕೆಲವರು ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ. 75 ಲಕ್ಷದ ಅನುದಾನದಲ್ಲಿ ಆಗುತ್ತಿದ್ದ ಕಾಮಗಾರಿಯನ್ನು ಸುಮಾರು 5 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಿದ್ದು ಸಾರಿಗೆ ಸಚಿವರು ಖುದ್ದು ಭೇಟಿ ನೀಡಿ ಪರಿಶೀಲಿಸಿರುವುದೇ ಅವರ ಅಪಪ್ರಚಾರಕ್ಕೆ ತಕ್ಕ ಉತ್ತರ ಎಂದರು.
ಈ ಸಂದರ್ಭದಲ್ಲಿ ಎನ್ ಡಿಎ ಅಧ್ಯಕ್ಷ ನಾರಾಯಣಗೌಡ್ರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಗೌಡ, ಮುಖಂಡ ಅಗಳಕುಪ್ಪೆ ಗೋವಿಂದರಾಜು, ನಗರಸಭೆ ಸದಸ್ಯ ಪ್ರದೀಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ಮುಖಂಡರಾದ ಅಂಚೆಮನೆ ಪ್ರಕಾಶ್, ಬೀರಗೊಂಡನಹಳ್ಳಿ ಮಲ್ಲೇಶ್, ಎಂ.ಕೆ.ನಾಗರಾಜು, ಶಿವಕುಮಾರ್, ರಾಮಾಂಜೀನೇಯ, ನಾರಾಯಣ್, ನಯಾಜ್ ಖಾನ್, ಖಲೀಂಉಲ್ಲಾ, ದಿನೇಶ್ ನಾಯಕ್, ಮನು, ಸಿದ್ದರಾಜು, ಪಾರ್ಥರಾಜು, ಮಂಜುನಾಥ್ ಇತರರಿದ್ದರು.ಪೋಟೋ 7 * 8 :
ದಾಬಸ್ಪೇಟೆ ಪಟ್ಟಣದಲ್ಲಿರುವ ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಶ್ರೀನಿವಾಸ್, ಎನ್ ಡಿಎ ಅಧ್ಯಕ್ಷ ನಾರಾಯಣಗೌಡ್ರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಗೌಡ ಇತರರಿದ್ದರು.