ಕನ್ನಡಪ್ರಭ ವಾರ್ತೆ ತಾಳಿಕೋಟೆ
ನಾವದಗಿ ಗ್ರಾಮದ ಬಡಾವಣೆಗಳಲ್ಲಿ ಸಂಚರಿಸಿದ ಅಧಿಕಾರಿಗಳ ತಂಡ ಚರಂಡಿ ಮತ್ತು ಕುಡಿಯುವ ನೀರಿನ ಮತ್ತು ಬಳಸುವ ನೀರಿನ ಕುರಿತು ಪರಿಶೀಲನೆ ನಡೆಸಿದ ಅವರು, ಸ್ಥಳದಲ್ಲಿ ಉಪಸ್ಥಿತಿರಿದ್ದ ಪಿಡಿಒ ಕಿರಣಗಿ ಅವರು ಚರಂಡಿ ಮೇಲಾಥಿನ್ ಫೌಡರ್ ಸಿಂಪಡಿಸಲು ಮತ್ತು ಓವರ್ ಹೆಡ್ ಟ್ಯಾಂಕರ್ನಲ್ಲಿ ಬ್ಲೀಚಿಂಗ್ ಪೌಡರ್ ಹಾಕಲು ಸೂಚಿಸಿದರಲ್ಲದೇ ಗ್ರಾಮದಲ್ಲಿರುವ ಕುಡಿಯುವ ನೀರಿನ ಮೂಲಗಳಲ್ಲಿ ಸಂಗ್ರಹಿಸಿದ ನೀರಿನ ತಪಾಸಣೆ ಆಗಿ ಬರುವವರೆಗೂ ಜಲಮೂಲಗಳೆಲ್ಲವನ್ನು ತಾತ್ಕಾಲಿಕ ಸ್ಥಗಿತಗೊಳಿಸಲು ಸೂಚಿಸಿದರು.
ಉಪಸ್ಥಿತ ಆರ್ಡಬ್ಲ್ಯುಎಸ್ ಅಧಿಕಾರಿ ಹಿರೇಗೌಡರ ಅವರಿಗೆ ಕೂಡಲೇ ೨ ದಿನಗಳ ಒಳಗಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಲು ಸೂಚಿಸಿದರು. ಆರೋಗ್ಯ ಇಲಾಖೆಯ ತಾಲೂಕಾಡಳಿತ ವೈದ್ಯಾಧಿಕಾರಿ ಡಾ.ಸತೀಶ ತಿವಾರಿ ಅವರು ವಾಂತಿ ಭೇದಿ ಕುಡಿಯುವ ನೀರಿನಿಂದಲೇ ಬಂದಿದ್ದು ಎಂಬುದು ಕಂಡು ಬಂದಿದೆ. ಹೀಗಾಗಿ ತಾಪಂ ಇಒ ಅಧಿಕಾರಿಗಳ ತಂಡ ಕ್ರಮವಹಿಸಲು ಮುಂದಾಗಿದ್ದಾರೆ. ವಾಂತಿ-ಭೇದಿ ಉಲ್ಬಣಗೊಳ್ಳದ ಹಾಗೆ ತಡೆಗಟ್ಟಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಗ್ರಾಮದಲ್ಲಿಯೇ ವಾಸ್ತವ್ಯ ಹೊಡಲಿದ್ದಾರೆಂದರು.ಈ ಸಮಯದಲ್ಲಿ ತಾಲೂಕಾಡಳಿತ ವೈದ್ಯಾಧಿಕಾರಿಗಳಾದ ಡಾ.ಸತೀಶ ತಿವಾರಿ, ಡಾ.ಸುನೀಲ ಹಿರೇಗೌಡರ, ಅಭಿವೃದ್ಧಿ ಅಧಿಕಾರಿ ಅನಿಲ ಕಿರಣಗಿ, ಆರೋಗ್ಯ ಇಲಾಖೆಯ ಅಧಿಕಾರಿ ಕವಿತಾ ದೊಡಮನಿ, ಗ್ರಾಪಂ ಕಾರ್ಯದರ್ಶಿ ಹಣಮಗೌಡ ಚೌದ್ರಿ, ದೊರೆಗೋಳ, ಆರ್ಡಬ್ಲ್ಯುಎಸ್ ಅಧಿಕಾರಿ ಹಿರೇಗೌಡರ, ಸಿಬ್ಬಂದಿಗಳಾದ ರಾಘವೇಂದ್ರ ಟಿ.ಎನ್., ಸತೀಶ ಕುಲಕರ್ಣಿ, ಆಶಾ ಕಾರ್ಯಕರ್ತರಾದ ಮಂಜುಳಾ ಹೇಳವರ, ರೇಣುಕಾ ಬಡಿಗೇರ ಅವರು ಉಪಸ್ಥಿತರಿದ್ದರು.
ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಕ್ರಮ
---
ನಾವದಗಿ ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಿ ಎಲ್ಲ ಕುಡಿಯುವ ನೀರಿನ ಜಲಮೂಲಗಳಿಂದ ನೀರನ್ನು ಸಂಗ್ರಹಣ ಮಾಡಿ ತಪಾಸಣೆಗೆ ಕಳುಹಿಸಲಾಗಿದೆ. ಗ್ರಾಮದ ಜಲಮೂಲಗಳಿಂದ ಬರುವ ನೀರನ್ನು ಯಾರೂ ಬಳಸದಂತೆ ಮನವಿ ಮಾಡಿದ್ದೇವೆ. ಗ್ರಾಮದಲ್ಲಿ ಚರಂಡಿ ಇನ್ನಿತರ ಕಡೆ ನೀರಿನ ಸಂಗ್ರಹಣೆಗೊಂಡ ಸ್ಥಳಗಳಿಗೆ ಮೇಲಾಥಿನ್ ಫೌಡರ್ ಸಿಂಪಡಿಸಲು ಪಿಡಿಒಗೆ ಸೂಚಿಸಿದ್ದೇನೆ.