ಕನ್ನಡಪ್ರಭ ವಾರ್ತೆ ಮೂಡಲಗಿ
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಶಕ್ತಿ ಮಹಿಳಾ ಸಂಘ ಗೋಕಾಕ ಆಶ್ರಯದಲ್ಲಿ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಮಗುವಿಗೆ ಎಚ್ಐವಿ, ಸಿಫಿಲಿಸ್, ಹೆಪಟೈಟಿಸ್ ರೋಗ ಹರಡದಂತೆ ಮುನ್ನೆಚ್ಚರಿಕೆ ಚಿಕಿತ್ಸಾ ಆಂದೋಲದಲ್ಲಿ ಗರ್ಭಿಣೀಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆ ಹುಟ್ಟು ಸಾವಿನ ಮಧ್ಯೆ ಹೋರಾಟ ಮಾಡಿ ಇನ್ನೊಂದು ಜೀವಕ್ಕೆ ಜೀವ ಕೊಡುತ್ತಾಳೆ. ಮಹಿಳೆಯರಿಗೆ ಸಮಾಜದಲ್ಲಿ ಗೌರವದ ಸ್ಥಾನ ನೀಡುವ ಮೂಲಕ ಅವಳ ಋಣ ತೀರಿಸುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.
ಸೀಮಂತ ಕಾರ್ಯಕ್ರಮದಲ್ಲಿ ಪಟ್ಟಣದ ಸುಮಾರು 40 ಗರ್ಭಿಣಿಯರಿಗೆ ಬಳೆ ತೋಡಿಸುವ ಮೂಲಕ ಸೀಮಂತ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಶಕ್ತಿ ಮಹಿಳಾ ಸಂಘದ ಅಧ್ಯಕ್ಷೆ ಲಲಿತಾ ಹೊಸಮನಿ, ಆರೋಗ್ಯ ಕೇಂದ್ರದ ಡಾ.ದೀಪಾ ಮಾಚಪನ್ನವರ, ಮಹಿಳಾ ಆಪ್ತ ಸಮಾಲೋಚಕಿ ಲತಾ ನಾಯಕ್ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ, ಶಕ್ತಿ ಮಹಿಳಾ ಸಂಘದ ಸಿಬ್ಬಂದಿ ಮತ್ತು ಗರ್ಭಿಣಿಯರು ಇದ್ದರು.