ಶಿಗ್ಗಾವಿಯಲ್ಲಿ ಹೋಳಿ ಹಬ್ಬಕ್ಕೆ ಬಣ್ಣಗಳ ಮೆರುಗು

KannadaprabhaNewsNetwork |  
Published : Mar 30, 2024, 12:51 AM IST
ಪೊಟೋ ಪೈಲ್ ನೇಮ್ ೨೯ಎಸ್‌ಜಿವಿ೨  ಶಿಗ್ಗಾವಿ ಪಟ್ಟಣದಲ್ಲಿ ಶುಕ್ರವಾರ ಹೋಳಿ ಹಬ್ಬದ ಅಂಗವಾಗಿ ಸಾರ್ವಜನಿಕರು ಪರಸ್ಪರ ಗುಲಾಲು ಎರಚುವ ಮೂಲಕ ಹಬ್ಬವನ್ನು ಸಂಭ್ರಮಿಸಿದರು.೨೯ಎಸ್‌ಜಿವಿ೨-೧  ಶಿಗ್ಗಾವಿ ಪಟ್ಟಣದಲ್ಲಿ ಶುಕ್ರವಾರ ಹೋಳಿ ಹಬ್ಬದ ಅಂಗವಾಗಿ ಸಾರ್ವಜನಿಕರು ಪರಸ್ಪರ ಗುಲಾಲು ಎರಚುವ ಯುವಕರು ಸಂಬ್ರಮಾಚರಣೆ ಮಾಡುತ್ತಿರುವದು ೨೯ಎಸ್‌ಜಿವಿ೨-೨  ಶಿಗ್ಗಾವಿ ಪಟ್ಟಣದಲ್ಲಿ  ಹೋಳಿ ಹಬ್ಬದ ಅಂಗವಾಗಿ ಸಾರ್ವಜನಿಕರು ಪರಸ್ಪರ ಗುಲಾಲು ಎರಚುವ ಮೂಲಕ ಹಿರಿಯರು ತಲೆಯಾಡಿಸುತ್ತಾ ಹಬ್ಬವನ್ನು ಸಂಭ್ರಮಿಸಿದರು. | Kannada Prabha

ಸಾರಾಂಶ

ಶಿಗ್ಗಾವಿ ಪಟ್ಟಣದಲ್ಲಿ ಶುಕ್ರವಾರ ಹೋಳಿ ಹಬ್ಬವನ್ನು ಮಕ್ಕಳು, ಯುವಕರು, ಮಹಿಳೆಯರು ಆದಿಯಾಗಿ ಬಗೆಬಗೆಯ ಬಣ್ಣಗಳನ್ನು ಎರಚುತ್ತಾ, ಹಲಗೆ ನಾದ ಹಾಗೂ ಡಿಜೆ ಹಾಡಿಗೆ ಸ್ಟೇಪ್‌ ಹಾಕುತ್ತಾ ಸಂಭ್ರಮದಿಂದ ಆಚರಿಸಿದರು.

ಶಿಗ್ಗಾವಿ: ಪಟ್ಟಣದಲ್ಲಿ ಶುಕ್ರವಾರ ಹೋಳಿ ಹಬ್ಬವನ್ನು ಮಕ್ಕಳು, ಯುವಕರು, ಮಹಿಳೆಯರು ಆದಿಯಾಗಿ ಬಗೆಬಗೆಯ ಬಣ್ಣಗಳನ್ನು ಎರಚುತ್ತಾ, ಹಲಗೆ ನಾದ ಹಾಗೂ ಡಿಜೆ ಹಾಡಿಗೆ ಸ್ಟೇಪ್‌ ಹಾಕುತ್ತಾ ಸಂಭ್ರಮದಿಂದ ಆಚರಿಸಿದರು.

ಬೆಳಗ್ಗೆಯಿಂದಲೇ ಯುವಕರು, ಮಹಿಳೆಯರು, ಮಕ್ಕಳು, ಸೇರಿದಂತೆ ಎಲ್ಲರೂ ಒಂದಾಗಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದು, ವಿಶೇಷವಾಗಿ ಹಳೆ ಪೇಟೆಯ ವಿರಾಟಗಲ್ಲಿಯಲ್ಲಿನ ಡಿಜೆ ನಾದಕ್ಕೆ ಸ್ಟೇಪ್ ಹಾಕುತ್ತ ಹಿರಿಯರು ತಲೆದೂಗುತ್ತಾ ಬಣ್ಣದೋಕುಳಿಯಲ್ಲಿ ತಮ್ಮನ್ನೇ ತಾವು ಮರೆತಿರುವುದು ಸಾಮಾನ್ಯವಾಗಿತ್ತು,ಪೂರ್ವಜರ ಪ್ರತೀತಿಯಂತೆ ಹಳೆ ಪೇಟೆಯ ಪ್ರಸಿದ್ಧ ಕಾಮನ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿರುವ ರತಿ-ಕಾಮನ ಮೂರ್ತಿಯನ್ನು ಮಧ್ಯಾಹ್ನ ಪಟ್ಟಣದ ತುಂಬೆಲ್ಲ ಮೆರವಣಿಗೆ ಮಾಡುವ ಮೂಲಕ ಸಾಯಂಕಾಲ ಪುನಃ ಹಳೆ ಪೇಟೆಯ ಕಾಮಣ್ಣನ ಕಟ್ಟೆಯಲ್ಲಿಯೆ ಮೂರ್ತಿಗಳನ್ನು ದಹಿಸಿದ ನಂತರ ಅಲ್ಲಿಯ ಬೆಂಕಿಯಿಂದ ಪಟ್ಟಣದ ದೇಸಾಯಿ ಓಣಿ, ಬೆಣ್ಣೆ ಕಟ್ಟಿ, ವಿರಕ್ತಮಠ ಓಣಿ, ಹಾದಿಮನಿ ಓಣಿ, ಗಾಂಧಿ ನಗರ, ಈಶ್ವರ ದೇವಸ್ಥಾನದ ಓಣಿ, ಭಾವನಮಠದ ಓಣಿ ಸೇರಿದಂತೆ ಪಟ್ಟಣದ ಎಲ್ಲ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿರುವ ಕಾಮಣ್ಣ, ರತಿ-ಮನ್ಮಥರ ಮೂರ್ತಿಗಳನ್ನು ದಹಿಸುವ ಮೂಲಕ ಸಂಭ್ರಮದ ಹಬ್ಬಕ್ಕೆ ವಿರಾಮ ನೀಡಿದರು. ಬಿಗಿಯಾದ ಪೊಲೀಸ್‌ ಬಂದೋಬಸ್ತ್‌: ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಅಧಿಕಾರಿಗಳ ನೇತೃತ್ವದ ಪೊಲೀಸ್ ಪಡೆಯು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಟ್ಟಣದಲ್ಲಿರುವ ವ್ಯಾಪಾರ ಮಳಿಗೆಗಳು ಮತ್ತು ಮದ್ಯ ಮಾರಾಟ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಚೆ ಕಚೇರಿಗಳ ಬಲವರ್ಧನೆ ವಿಷಯ ಪ್ರಸ್ತಾಪಿಸಿದ ಸಂಸದ ಬಿವೈಆರ್‌
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ: ಡಾ.ನೂರಲ್ ಹುದಾ ಕರೆ