೩ಕೋಟಿ ಕಾಮಗಾರಿಗೆ ಗೃಹಸಚಿವ ಚಾಲನೆ ಇಂದು

KannadaprabhaNewsNetwork |  
Published : Apr 21, 2025, 12:48 AM IST
೩ಕೋಟಿಯ ಕಾಮಗಾರಿಗೆ ಗೃಹಸಚಿವ ಚಾಲನೆ | Kannada Prabha

ಸಾರಾಂಶ

ಪಟ್ಟಣದ ೧೦ಕಡೆ ೩ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮಕ್ಕೆ ೨೧ರ ಸೋಮವಾರ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಚಾಲನೆ ನೀಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಪಟ್ಟಣದ ೧೦ಕಡೆ ೩ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮಕ್ಕೆ ೨೧ರ ಸೋಮವಾರ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಚಾಲನೆ ನೀಡಲಿದ್ದಾರೆ.

ಕೊರಟಗೆರೆ ಪಟ್ಟಣದ ಪಪಂ ವ್ಯಾಪ್ತಿಯಲ್ಲಿ ೩ಕೋಟಿ ವೆಚ್ಚದ ೧೦ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಪಪಂ, ಆರೋಗ್ಯ ಮತ್ತು ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಲಾಗಿದೆ. ಪಪಂ ವ್ಯಾಪ್ತಿಯ ೩೮ಲಕ್ಷದ ಬ್ಯಾಕ್ ಹೋ ಲೋಡರ್‌ ಚಾಲನೆ, ೧೮ಲಕ್ಷದ ೨ಆಟೋ ಟಿಪ್ಪರ್, ೧೫ಲಕ್ಷದ ಎರಡು ಬಗೆಯ ಡಸ್ಟ್‌ಬೀನ್, ೧ಲಕ್ಷದ ವೆಚ್ಚದಲ್ಲಿ ವಿಶೇಷ ಚೇತನರಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮ ನಡೆಯಲಿದೆ.

ನಂತರ ಕೊರಟಗೆರೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಹತ್ತಿರ ೬೦ಲಕ್ಷದ ದಿನನಿತ್ಯ ಮಾರುಕಟ್ಟೆ, ೫ಲಕ್ಷದ ಹಳೇ ವಸತಿ ಗೃಹ ತೆರವು, ೫ಲಕ್ಷದ ಕಲಾಮಂದಿರದ ವಿಸ್ತ್ರತ ಯೋಜನಾ ಕಾಮಗಾರಿ, ೧೦ಲಕ್ಷದ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮತ್ತು ೨೦ಲಕ್ಷದ ಸಂತೆ ಮೈದಾನಕ್ಕೆ ಫೆನ್ಸಿಂಗ್ ಮತ್ತು ದುರಸ್ತಿ ಕಾಮಗಾರಿಗೆ ಗೃಹಸಚಿವರು ಚಾಲನೆ ನೀಡಲಿದ್ದಾರೆ.ಕೊರಟಗೆರೆ ಪಟ್ಟಣದ ಸಜ್ಜನರ ಬೀದಿ ಕನ್ನಿಕಾ ಮಹಲ್ ಹತ್ತಿರ ಆರೋಗ್ಯ ಇಲಾಖೆಯ ನಮ್ಮ ಕ್ಲಿನಿಕ್ ಉದ್ಘಾಟನೆ, ತೋಟಗಾರಿಕೆ ಇಲಾಖೆಯ ೫೩ಲಕ್ಷ ವೆಚ್ಚದ ನೂತನ ಕಟ್ಟಡದ ಉದ್ಘಾಟನೆಯನ್ನು ಗೃಹಸಚಿವ ಡಾ.ಜಿ.ಪರಮೇಶ್ವರ ನೆರವೇರಿಸಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಕಿ ಲಕ್ಷ್ಮಿ ಶನಿವಾರದೊಳಗೆ ಮಹಿಳೆಯರ ಬ್ಯಾಂಕ್‌ ಖಾತೆಗೆ
ರಾಜಣ್ಣ ಸಿಎಂಗಷ್ಟೇ ಅಲ್ಲ, ನನಗೂ ಪರಮಾಪ್ತ: ಡಿಕೆಶಿ