ಹೋಮಿಯೋಪತಿ ವಿಶ್ವದಲ್ಲಿಯೇ ಎರಡನೇ ಪ್ರಮುಖ ವೈದ್ಯ ಪದ್ಧತಿ

KannadaprabhaNewsNetwork |  
Published : Apr 14, 2026, 02:30 AM IST
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೋಮೀಯೋಪತಿ ವೈದ್ಯ ಪದ್ಧತಿಯ ಪಿತಾಮಹ ಜರ್ಮನಿಯ ಡಾ.ಹ್ಯಾನಿಮನ್ ಜನ್ಮದಿನಾಚರಣೆ ನಡೆಯಿತು. | Kannada Prabha

ಸಾರಾಂಶ

ವಿಶ್ವದಲ್ಲಿಯೇ ಹೋಮೀಯೋಪತಿ ಎರಡನೇ ಪ್ರಮುಖ ವೈದ್ಯ ಪದ್ಧತಿಯಾಗಿದ್ದು, ಸುಮಾರು 70ಕ್ಕೂ ಹೆಚ್ಚು ದೇಶಗಳಲ್ಲಿ ಹೋಮಿಯೋಪತಿ ವೈದ್ಯಕೀಯ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಖ್ಯಾತ ಹೋಮಿಯೋಪತಿ ವೈದ್ಯ ಡಾ. ವೀರೇಶಕುಮಾರ ಹೊಸ್ಮನಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ:ವಿಶ್ವದಲ್ಲಿಯೇ ಹೋಮೀಯೋಪತಿ ಎರಡನೇ ಪ್ರಮುಖ ವೈದ್ಯ ಪದ್ಧತಿಯಾಗಿದ್ದು, ಸುಮಾರು 70ಕ್ಕೂ ಹೆಚ್ಚು ದೇಶಗಳಲ್ಲಿ ಹೋಮಿಯೋಪತಿ ವೈದ್ಯಕೀಯ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಖ್ಯಾತ ಹೋಮಿಯೋಪತಿ ವೈದ್ಯ ಡಾ. ವೀರೇಶಕುಮಾರ ಹೊಸ್ಮನಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೋಮೀಯೋಪತಿ ವೈದ್ಯ ಪದ್ಧತಿಯ ಪಿತಾಮಹ ಜರ್ಮನಿಯ ಡಾ. ಹ್ಯಾನಿಮನ್ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ವಿವಿಧ ರಾಸಾಯನಿಕ ಬಳಸಿ ದಶಕಕ್ಕೂ ಹೆಚ್ಚು ಕಾಲ ಪ್ರಯೋಗ ಮಾಡುವ ಮೂಲಕ ಹೋಮೀಯೋಪತಿ ಔಷಧಿಗಳು ರೋಗಗಳನ್ನು ಮುಕ್ತ ಮಾಡುವ ಮೂಲಕ ದೃಢವಾಗಿದ್ದು ಸುಮಾರು 90ಕ್ಕೂ ಹೆಚ್ಚು ರೋಗಗಳಿಗೆ ಔಷಧಿ ನೀಡಲು ದೃಢಪಡಿಸಲಾಗಿದೆ ಎಂದರು.

ವೈದ್ಯಕೀಯ ಕ್ಷೇತ್ರದಲ್ಲಿ ಗಟ್ಟಿಯಾಗುತ್ತಿದೆ ಹೋಮೀಯೋಪತಿ: ದೇಶದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಹೋಮೀಯೋಪತಿ ವೈದ್ಯಕೀಯ ಮಹಾವಿದ್ಯಾಲಯಗಳಿವೆ. 3.50 ಲಕ್ಷ ಹೋಮೀಯೋಪತಿ ವೈದ್ಯರಿದ್ದಾರೆ, ಎಂಟು ಸಾವಿರ ಡಿಸ್ಪೆನ್ಸರಿಗಳಿವೆ, ಹೋಬಳಿ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಹೋಮೀಯೋಪತಿ ವೈದ್ಯರಿದ್ದಾರೆ. ಇತ್ತೀಚಿಗೆ ಅನಾರೋಗ್ಯಕರ ಜೀವನ ಶೈಲಿ ಮತ್ತು ಆಹಾರ, ಅತಿಯಾದ ಒತ್ತಡ ಮತ್ತು ಮಾಲಿನ್ಯದಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮವಾಗಿ ಅತಿಯಾದ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿತ ಕಾಯಿಲೆಗಳಿಗೆ ಯುವ ಸಮೂಹ ಒಳಗಾಗುತ್ತಿದ್ದಾರೆ ಇಂತಹವರು ಹೋಮಿಯೋಪತಿ ಔಷಧಿಗಳನ್ನು ಬಳಸುವುದು ಅತ್ಯಂತ ಸೂಕ್ತವಾಗಿದೆ ಎಂದರು.

ಸದುಪಯೋಗಪಡಿಸಿಕೊಳ್ಳಿ: ಹೊಮಿಯೋಪತಿ ವೈದ್ಯಕೀಯ ಪದ್ಧತಿಯಲ್ಲಿ ದಿನನಿತ್ಯ ತೆಗೆದುಕೊಳ್ಳುವಂತಹ ಸಾಂಪ್ರದಾಯಿಕ ಔಷಧಿಯಾಗಿದ್ದು ಸಂಧಿವಾತ, ಉಸಿರಾಟದ ಅಲರ್ಜಿ, ಚರ್ಮದ ತೊಂದರೆ ಮುಂತಾದ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆ ಹೊಂದಿದೆ, ಇತ್ತೀಚೆಗೆ ಸರ್ಕಾರಗಳು ಆಯುಷ್ ಪದ್ಧತಿಗೆ ಹೆಚ್ಚು ಒತ್ತುನೀಡುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಇದಕ್ಕೂ ಮುನ್ನ ಡಾ.ಹ್ಯಾನಿಮನ್ ಅವರ ಭಾವಚಿತ್ರಕ್ಕೆ ಪುಷ್ಪಾಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಾಘವೇಂದ್ರಸ್ವಾಮಿ, ವೈದ್ಯರಾದ ಮಹೇಶ, ಚೇತನ, ವೀರೇಶ, ನಾಗರಾಜ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರಣರ ವಚನಗಳಲ್ಲಿದೆ ಭಾವೈಕ್ಯದ ಸಂದೇಶ: ವೀರಣ್ಣ ಹುರಕಡ್ಲಿ
ಜಂಬೂನಾಥ ಕಂಚ್ಯಾಣಿ, ಗುಂಡೂರಾವ್ ದೇಸಾಯಿಗೆ ಪುರಸ್ಕಾರ