ಕನ್ನಡಪ್ರಭ ವಾರ್ತೆ ಮಹಾಲಿಂಗಪುರನಗರದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಮಹಾಲಿಂಗಪುರ ಅರ್ಬನ್ ಬ್ಯಾಂಕಿನ ನೂತನ ಅಧ್ಯಕ್ಷ ಶೇಖರ್ ಅಂಗಡಿ ಹಾಗು ಉಪಾಧ್ಯಕ್ಷ ಗಿರಮಲ್ಲಪ್ಪ ಕಬಾಡಿ ಅವರನ್ನು ಭಗೀರಥ ಸಮಾಜದ ವತಿಯಿಂದ ಸನ್ಮಾನಿಸಿದರು. ಕೆಂಗೇರಿ ಮಡ್ಡಿಯಲ್ಲಿರುವ ಭಗಿರಥ ಮಂದಿರದಲ್ಲಿ ಈ ಸತ್ಕಾರ ಕಾರ್ಯ ನಡೆಯಿತು. ಈ ವೇಳೆ ಸಮಾಜದ ಮುಖಂಡ ಮಹಾಲಿಂಗಪ್ಪ ಲಾತುರ, ಲಕ್ಕಪ್ಪ ಲಾತುರ, ಲಕ್ಷ್ಮಣ ಮುಗಳಖೋಡ, ವಿಜಯ ಲಾತುರ, ನಂದು ಲಾತುರ, ಮಲ್ಲಪ್ಪಾ ಮುದಕಪ್ಪಾಗೋಳ, ರಮೇಶ ಲಾತುರ, ಮಾದೇವ ಬೆಳವಣಕಿ, ಮುರಗೆಪ್ಪಾ ಲಾತುರ, ಮಹೇಶ್ ಪೂಜೇರಿ, ರಾಜು ಮುದಕಪ್ಪಗೋಳ, ರಮೇಶ ಉಪ್ಪಾರ, ಬಾಳೆಶ ಮಣ್ಣಿಕೇರಿ, ಹಣಮಂತ ಲಾತುರ ಸೇರಿ ಹಲವರು ಇದ್ದರು.