ಪು.2.ಸಣ್ಣ... ಸನ್ಮಾನಗಳು ಸಾಧಕರಿಗೆ ಪ್ರೇರಣೆ: ಬಿ.ಟಿ ಹಳ್ಳಿ

KannadaprabhaNewsNetwork |  
Published : Apr 14, 2024, 01:49 AM IST
ಪ್ರಶಸ್ತಿ | Kannada Prabha

ಸಾರಾಂಶ

ಬಾದಾಮಿ: ಸನ್ಮಾನಗಳು ಸಾಧಕರಿಗೆ ಪ್ರೇರಣೆ ನೀಡುತ್ತವೆ. ಸಾಧಕರನ್ನು ಗುರುತಿಸಿ ಅವರ ಪ್ರತಿಭೆಗೆ ಪ್ರೋತ್ಸಾಹ ಕಾರ್ಯ ಸಮಾಜದಲ್ಲಿ ಒಳ್ಳೆಯ ಸಂದೇಶ ನೀಡುವ ಉತ್ತಮ ಸೂಚಕಗಳಾಗಿವೆ ಎಂದು ಬೆಳವಲಕೊಪ್ಪದ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ಬಿ.ಟಿ.ಹಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಸನ್ಮಾನಗಳು ಸಾಧಕರಿಗೆ ಪ್ರೇರಣೆ ನೀಡುತ್ತವೆ. ಸಾಧಕರನ್ನು ಗುರುತಿಸಿ ಅವರ ಪ್ರತಿಭೆಗೆ ಪ್ರೋತ್ಸಾಹ ಕಾರ್ಯ ಸಮಾಜದಲ್ಲಿ ಒಳ್ಳೆಯ ಸಂದೇಶ ನೀಡುವ ಉತ್ತಮ ಸೂಚಕಗಳಾಗಿವೆ ಎಂದು ಬೆಳವಲಕೊಪ್ಪದ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ಬಿ.ಟಿ.ಹಳ್ಳಿ ಹೇಳಿದರು.

ತಾಲೂಕಿನ ಮುತ್ತಲಗೇರಿ ಗ್ರಾಮದಲ್ಲಿ ಶ್ರೀ ನಾಯಕಪ್ಪಜ್ಜನವರ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಪ್ರಶಸ್ತಿ ಪುರಸ್ಕಾರ ಪಡೆದ ಪ್ರಯುಕ್ತ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಣವು ಪ್ರತಿಯೊಬ್ಬರಿಗೂ ಬದುಕು ನೀಡುವ ಒಂದು ಚೌಕಟ್ಟು ನಿರ್ಮಿಸುವ ಸಾಧನವಾಗಿದೆ. ಎಲ್ಲಾ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ವಿದ್ಯಾರ್ಜನೆ ಮಾಡಬೇಕು. ಸಮಾಜಕ್ಕೆ ಒಳ್ಳೆಯ ಕಾರ್ಯಗಳನ್ನು ಸಲ್ಲಿಸುವ ವ್ಯಕ್ತಿಗಳಾಗಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಊರಿನ ಗುರು ಹಿರಿಯರು ಹಾಗೂ ಗಣ್ಯಮಾನ್ಯರು ಭಾಗವಹಿಸಿ ಸನ್ಮಾನಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಂಜುನಾಥ ಕಳಸನ್ನವರ, ಮುದಿಯಪ್ಪ ಹೊಟ್ಟಿ, ಸಿದ್ದಯ್ಯ ಹಿರೇಮಠ, ಬೀರಪ್ಪ ಗೌಡರ, ಈಶ್ವರ ತೆಗ್ಗಿನಮನಿ, ಮಾಗುಂಡಪ್ಪ ಲಚಮನಾಯಕರ, ಫಕೀರಪ್ಪ ಪೂಜಾರ, ಕರಿಯಪ್ಪ ದುರ್ಗನವರ, ಈರಯ್ಯ ಕುರುವಿನಕೊಪ್ಪ. ಪ್ರವೀಣ ನಾಯ್ಕರ, ಈಶ್ವರ್ ಪೂಜಾರ, ಮಂಜುನಾಥ ಮುಸಾಗುದ್ದಿ, ಯಲ್ಲಪ್ಪ ಹಲಕೂರ್ಕಿ ಸೇರಿದಂತೆ ವಿದ್ಯಾರ್ಥಿಗಳು, ಹಾಗೂ ಎಲ್ಲಾ ಸಮಾಜಗಳ ಗುರುಹಿರಿಯರು ಇದ್ದರು. ಕಾರ್ಯಕ್ರಮ ಸಿದ್ದಯ್ಯ ಹಿರೇಮಠ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ