ಯೋಧರ ತ್ಯಾಗ ಗೌರವಿಸುವುದೇ ನೈಜ ದೇಶಪ್ರೇಮ: ಬಸವರಾಜ ಮಹಾಮನಿ

KannadaprabhaNewsNetwork |  
Published : Sep 09, 2026, 01:15 AM IST
ಸುರಪುರದ ಗರುಡಾದ್ರಿ ಕಲಾಮಂದಿರದಲ್ಲಿ ಸೋಮವಾರ ನಡೆದ ಪರಾಕ್ರಮ ದಿವಸ ಹಾಗೂ 27ನೇ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು | Kannada Prabha

ಸಾರಾಂಶ

ಸಿನಿಮಾ ನಟ, ನಟಿಯರನ್ನು ನೋಡಲು ಸಾವಿರಾರು ಜನ ಸೇರುತ್ತಾರೆ. ಆದರೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರನ್ನು ಗೌರವಿಸುವುದು ನಮ್ಮ ಭಾಗ್ಯ. ಯೋಧರ ತ್ಯಾಗ ಮತ್ತು ಸೇವೆ ಸ್ಮರಿಸಿ ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಹೇಳಿದರು.

ಕನ್ನಡಪ್ರಭ ವಾರ್ತೆ ಸುರಪುರ

ಸಿನಿಮಾ ನಟ, ನಟಿಯರನ್ನು ನೋಡಲು ಸಾವಿರಾರು ಜನ ಸೇರುತ್ತಾರೆ. ಆದರೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರನ್ನು ಗೌರವಿಸುವುದು ನಮ್ಮ ಭಾಗ್ಯ. ಯೋಧರ ತ್ಯಾಗ ಮತ್ತು ಸೇವೆ ಸ್ಮರಿಸಿ ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಹೇಳಿದರು.

ನಗರದಲ್ಲಿ ಗರುಡಾದ್ರಿ ಕಲಾಮಂದಿರದಲ್ಲಿ ಸೋಮವಾರ ದಿ. ನರೇಶಕುಮಾರ ಸೇವಾ ಸಂಸ್ಥೆ ವತಿಯಿಂದ ಪರಾಕ್ರಮ ದಿವಸ ಹಾಗೂ 27ನೇ ಕಾರ್ಗಿಲ್ ವಿಜಯೋತ್ಸವದ ಸವಿನೆನಪಿಗಾಗಿ ಹಮ್ಮಿಕೊಂಡಿದ್ದ ವೀರ ಯೋಧರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವಕರು ಮೊಬೈಲ್‌ನಲ್ಲಿ ರೀಲ್ಸ್‌ ನೋಡುತ್ತ, ಅಮೂಲ್ಯ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶ ಮತ್ತು ಸಮಾಜದ ಬಗ್ಗೆ ಕಾಳಜಿ ಹೊಂದಿ ಇಂತಹ ದೇಶಪ್ರೇಮದ ಕಾರ್ಯಕ್ರಮ ಆಯೋಜಿಸಿರುವ ಸಚಿನಕುಮಾರ ನಾಯಕ ಹಾಗೂ ಅವರ ತಂಡದ ಕಾರ್ಯ ಶ್ಲಾಘನೀಯ. ಗಡಿಗೆ ತೆರಳಿ ಯುದ್ಧ ಮಾಡುವುದು ಎಲ್ಲರಿಗೂ ಸಾಧ್ಯವಾಗದಿರಬಹುದು. ಆದರೆ, ದೇಶಪ್ರೇಮ ಬೆಳೆಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೇ ಒಂದು ರೀತಿಯ ದೇಶಸೇವೆಯಾಗಿದೆ ಎಂದರು.

ಮುಖ್ಯ ಭಾಷಣಕಾರ ಹುಬ್ಬಳಿಯ ಚಿಂತಕ ಕಿರಣರಾಮ ಅವರು ಕಾರ್ಗಿಲ್ ಯುದ್ಧ ಹಾಗೂ ಸೈನಿಕರ ತ್ಯಾಗದ ಕುರಿತು ಮಾತನಾಡಿದರು. ನಂತರ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ಯೋಧ ರುಕ್ಮಾಪುರದ ಮಲ್ಲೇಶ, ರಾಜನಕೋಳೂರು ಬಸನಗೌಡ, ಗೋಗಿ ಹನಮಂತ್ರಾಯ, ರಂಗಂಪೇಟೆ ನಾಗರಾಜ, ಗುಂಡುರಾವ್ ರಾಠೋಡ್, ರಾಮೋಜಿ ಚವ್ಹಾಣ, ರಂಗನಗೌಡ ಪಾಟೀಲ್, ದಿವಳಗುಡ್ಡ ಎಸ್.ಕೆ.ಮೈನುದ್ದೀನ್, ಲಿಂಗಸೂರ ವಿಶ್ವನಾಥ ನಾಯಕ, ಅಮೋಘ, ಸಿದ್ದಪ್ಪ, ಹೆಮನೂರು ಹಣಮಂತ್ರಾಯ, ವಿಶ್ವನಾಥ, ದೇವರಾಜ, ರೇವಪ್ಪ, ಗುರಣ್ಣ, ನಾಗರಾಜ, ಮಹಾದೇವಪ್ಪ, ವಿಶ್ವನಾಥ ನಾಯಕ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಉಪನ್ಯಾಸಕ ಡಾ.ಉಪೇಂದ್ರನಾಯಕ ಸುಬೇದಾರ, ಹಣಮಂತ ಭಜಂತ್ರಿ, ಮರೆಪ್ಪನಾಯಕ ಗುಡ್ಡಕಾಯಿ, ರಾಜಕುಮಾರ ಎಸ್. ದೊರೆ, ಸಚಿನ್, ಗಂಗಾಧರ ರುಮಾಲ, ಗುರುನಾಥ ರೆಡ್ಡಿ, ರಾಘವೇಂದ್ರ ಭಕ್ರಿ, ಸಿದ್ದು ಹಣಮಂತ ಸಹಿತ ಸಂಸ್ಥೆಯ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು. ಶ್ರೀಹರಿರಾವ್ ಆದಾವಾನಿ ಪ್ರಾರ್ಥಿಸಿ, ಸಚಿನಕುಮಾರ ನಾಯಕ ಸ್ವಾಗತಿಸಿ, ಗಂಗಾಧರ ನಾಯಕ ತಿಂಥಣಿ ನಿರೂಪಿಸಿ, ವಂದಿಸಿದರು.

ಶೋಭಾಯಾತ್ರೆ: ಪರಾಕ್ರಮ ದಿವಸ ಹಾಗೂ 27ನೇ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಗರದಲ್ಲಿ ಶೋಭಾಯಾತ್ರೆ ನಡೆಯಿತು. ಯೋಧರ ಗೌರವ, ದೇಶಭಕ್ತಿ ಹಾಗೂ ರಾಷ್ಟ್ರಪ್ರೇಮ ಘೋಷಗಳೊಂದಿಗೆ ಸಾಗಿದ ಶೋಭಾಯಾತ್ರೆ ಸಾರ್ವಜನಿಕರ ಗಮನ ಸೆಳೆಯಿತು. ದಿ.ನರೇಶಕುಮಾರ ಸೇವಾ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯಕ ಅಧ್ಯಕ್ಷತೆ ವಹಿಸಿದ್ದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ, ಶಹಾಪುರದ ಕರಣ ಸುಬೇದಾರ, ಹಿರಿಯ ವಕೀಲ ಅರವಿಂದಕುಮಾರ, ಹಣಮಂತ್ರಾಯ ಪಾಟೀಲ, ಹಿರಿಯ ಸಾಹಿತಿ ಶ್ರೀಹರಿರಾವ್ ಆದಾವಾನಿ, ಎಚ್.ಎಂ.ಪಾಟೀಲ್, ಬಸವರಾಜ ಜಮದ್ರಖಾನಿ, ಅರೆಸೈನಿಕ ಜಿಲ್ಲಾ ಅಧ್ಯಕ್ಷ ನಿಂಗಣ್ಣ ಪಾಟೀಲ, ಮಾಜಿ ಸೈನಿಕ ಭೀಮಣ್ಣ ನಾಯಕ್‌ ಲಕ್ಷ್ಮೀಪುರ, ಪ್ರದೀಪ್ ಅಣಬಿ, ಶ್ರವಣಕುಮಾರ ಡಿ. ನಾಯಕ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ; ಜಾಗೃತಿ
ಬಗರ್‌ಹುಕುಂ ಜಮೀನು ವಶ ವಿರೋಧಿಸಿ ರೈತರ ಪ್ರತಿರೋಧ ಸಮಾವೇಶ